Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ರಾಜಕೀಯಕ್ಕೆ ಬಂದು ತಪ್ಪು...

‘ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ:ಸುದ್ದಿಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ

ರಾಜಕೀಯಕ್ಕಾಗಿ ಮನೆ-ಸಂಸಾರ ಹಾಳು ಮಾಡಬೇಡಿ: ಕೆಜಿಎಫ್ ಬಾಬು ಕುಟುಂಬ ಸದಸ್ಯರ ಮನವಿ

ವಾರ್ತಾಭಾರತಿವಾರ್ತಾಭಾರತಿ1 Dec 2021 9:06 PM IST
share
‘ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ:ಸುದ್ದಿಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು, ಡಿ.1: ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೂಸುಫ್ ಶರೀಫ್ ಯಾನೆ ಕೆಜಿಎಫ್ ಬಾಬು ತಮ್ಮ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಸಂಬಂಧ ಅವರ ಮಗಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪಕ್ಕೆ, ಕೆಜಿಎಫ್ ಬಾಬು ಅವರ ಕುಟುಂಬ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಣ್ಣೀರು ಹಾಕಿದ ಕೆಜಿಎಫ್ ಬಾಬು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪದ ಕುರಿತು ಪ್ರತ್ಯುತ್ತರ ನೀಡಲು ಕುಟುಂಬ ಸದಸ್ಯರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಜಿಎಫ್ ಬಾಬು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ರಾಜಕೀಯದಲ್ಲಿ ಈ ರೀತಿಯ ವಾತಾವರಣ ಇದೆ ಎಂದು ಗೊತ್ತಿದ್ದರೆ ದೇವರಾಣೆಗೂ ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. 10 ತಲೆಮಾರು ತಿನ್ನುವಷ್ಟು ಆಸ್ತಿ ಆ ದೇವರು ನನಗೆ ನೀಡಿದ್ದಾನೆ. ಆದರೆ, ನಾನು ಇಲ್ಲಿ ಬಂದು ತಪ್ಪು ಮಾಡಿಬಿಟ್ಟೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕಣ್ಣೀರು ಹಾಕುತ್ತಲೆ ಎದ್ದು ಹೊರನಡೆದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ನನಗೆ ನನ್ನ ಪತ್ನಿ ಮತ್ತು ಮಗಳು ಎಂದರೆ ಪ್ರಾಣ. ಬಿಲ್ಡರ್ ನವೀದ್ 300 ಕೋಟಿ ರೂ.ಮೌಲ್ಯದ ಆಸ್ತಿ ಖರೀದಿ ಮಾಡಿದ್ದ. ನನಗೆ 6 ಲಕ್ಷ ರೂ.ಗಳನ್ನು ಮಾತ್ರ ಕೊಟ್ಟು ಉಳಿದ ಹಣವನ್ನು ನೀಡದೆ ವಂಚಿಸಿದ. ಈ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆತನೆ ನನ್ನ ಮೊದಲ ಹೆಂಡತಿಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಆಕೆಯನ್ನು ನನ್ನ ವಿರುದ್ಧ ದೂರು ನೀಡುವಂತೆ ಚಿತಾವಣೆ ನಡೆಸಿದ. ಅಲ್ಲದೆ, ನನ್ನ ಹೆಂಡತಿ ಹಾಗೂ ಮಗಳನ್ನು ಅಪಹರಿಸಿದ್ದ ಎಂದು ದೂರಿದರು.

ಬೆಂಗಳೂರು, ಮೈಸೂರು, ತಮಿಳುನಾಡಿನಲ್ಲಿ ಸುಮಾರು ಆರು ತಿಂಗಳು ಕಾಲ ನನ್ನ ಹೆಂಡತಿ ಹಾಗೂ ಮಗಳನ್ನು ಬಚ್ಚಿಟ್ಟಿದ್ದ. ನನ್ನ ಮೇಲೆ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ಹಾಕಿಸಿದ್ದ. ಅಲ್ಲದೆ, ನನ್ನಿಂದ ಒಂದು ಸಾವಿರ ಕೋಟಿ ರೂ.ಪರಿಹಾರ ಕೇಳುವಂತೆ ನನ್ನ ಹೆಂಡತಿಯನ್ನು ಪುಸಲಾಯಿಸಿದ್ದ. ಬಳಿಕ ನನ್ನ ಹೆಂಡತಿ ಆ ಪ್ರಕರಣವನ್ನು ಹಿಂಪಡೆದರು. ಆದರೆ, ಸಚಿವರು ಮಾಡಿರುವ ಆರೋಪದಂತೆ ನಾನು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿಲ್ಲ ಎಂದು ಅವರು ಕಣ್ಣೀರು ಹಾಕಿದರು.

ಕೆಜಿಎಫ್ ಬಾಬು ಅವರ ಮೊದಲ ಪತ್ನಿ ರುಕ್ಸಾನಾ ತಾಜ್ ಮಾತನಾಡಿ, ಯಾರ ಮನೆಯಲ್ಲಿ ಜಗಳ ಆಗುವುದಿಲ್ಲ. ರಾಜಕೀಯಕ್ಕಾಗಿ ನಮ್ಮ ಕುಟುಂಬದ ವಿಚಾರವನ್ನು ಬೀದಿಗೆ ತಂದು ಚರ್ಚೆ ಮಾಡುತ್ತಿರುವುದು ನೋಡಿ ತುಂಬಾ ದುಃಖ ಆಗಿದೆ. ನನ್ನ ಪತಿ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. 10 ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲಿ ನಡೆದ ಒಂದು ವಿಚಾರವನ್ನು ಈಗ ಚರ್ಚೆ ಮಾಡಲಾಗುತ್ತಿದೆ ಎಂದು ಕಣ್ಣೀರು ಹಾಕಿದರು.

ನನ್ನ ಪತಿ ನನಗೆ ಗೊತ್ತಿಲ್ಲದೆ ಎರಡನೆ ವಿವಾಹವಾಗಿದ್ದರು. ಈಗ ನಾವೆಲ್ಲ ಜೊತೆಯಲ್ಲಿ ಸಂತೋಷದಿಂದಲೆ ಇದ್ದೇವೆ. ಕುಟುಂಬದ ಎಲ್ಲ ಆಸ್ತಿ ನನ್ನ ಹೆಸರಿನಲ್ಲೆ ಇದೆ. ರಾಜಕೀಯಕ್ಕಾಗಿ ನಮ್ಮ ಮನೆಯನ್ನು ಹಾಗೂ ನಮ್ಮ ಮಗಳ ಸಂಸಾರ ಹಾಳು ಮಾಡಬೇಡಿ ಎಂದು ಅವರು ಕೈ ಮುಗಿದು ಮನವಿ ಮಾಡಿದರು.

ಕೆಜಿಎಫ್ ಬಾಬು ಅವರ ಮಗಳು ಕುಬ್ರಾ ಮಾತನಾಡಿ, ನನ್ನ ತಂದೆ ವಿರುದ್ಧ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತವಾದದ್ದು, ನನ್ನ ತಂದೆ, ತಾಯಿಯನ್ನು ಒಂದುಗೂಡಿಸಲು ಎಂದು ಹೇಳಿ ಜೇಸನ್ ನವೀದ್ ಬಲವಂತದಿಂದ ನನ್ನ ಸಹಿ ಪಡೆದಿದ್ದರು. ಈ ವಿಚಾರವನ್ನು ನಾನು ನ್ಯಾಯಾಲಯದಲ್ಲಿಯೂ ಹೇಳಿದ್ದೇನೆ. ಆಗ ನನಗೆ ಕೇವಲ 10 ವರ್ಷ ವಯಸ್ಸು. ಈಗ ಸಚಿವರು ಮಾಡಿರುವ ಆರೋಪದಂತಹ ಯಾವ ಘಟನೆಯು ನಡೆದಿಲ್ಲ ಎಂದರು.

ಕೆಜಿಎಫ್ ಬಾಬು ಅವರ ಎರಡನೆ ಹೆಂಡತಿ ಶಾಝಿಯಾ ಮಾತನಾಡಿ, ಬಿಲ್ಡರ್ ಜೇಸನ್ ನವೀದ್ ನಮ್ಮ ಕುಟುಂಬದ ಸ್ನೇಹಿತರಾಗಿದ್ದರು. ನನ್ನ ಪತಿ ನನ್ನನ್ನು ಎರಡನೆ ಮದುವೆಯಾದ ವಿಚಾರವನ್ನು ಆತನೆ ಕುಟುಂಬಕ್ಕೆ ತಿಳಿಸಿದ್ದು. ಸಚಿವರೆ ನಿಮ್ಮ ಮನೆಯಲ್ಲಿ ಜಗಳ ಆಗುವುದಿಲ್ಲವೇ? ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲವೇ? ನನ್ನ ಪತಿ ಒಬ್ಬ ಉತ್ತಮ ವ್ಯಕ್ತಿ, ಉತ್ತಮ ತಂದೆ. ಮನೆಯ ವಿಚಾರವನ್ನೆಲ್ಲ ನಿಮ್ಮ ರಾಜಕೀಯಕ್ಕಾಗಿ ಯಾಕೆ ಬಳಸಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ರಾಜಕೀಯ ಮಾಡೋದಾದರೆ ಮಾಡಿ, ಕೋಟ್ಯಂತರ ರೂ.ಗಳನ್ನು ಜನರ ಸೇವೆಗೆ ನನ್ನ ಪತಿ ಖರ್ಚು ಮಾಡುತ್ತಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದಲೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಾನು ಹಾಗೂ ನನ್ನ ಅಕ್ಕ(ಮೊದಲ ಪತ್ನಿ) ಒಟ್ಟಾಗಿ, ಒಂದೆ ಮನೆಯಲ್ಲಿ ವಾಸವಿದ್ದೇವೆ. ನಿಮ್ಮ ಕ್ಷುಲ್ಲಕ ರಾಜಕೀಯಕ್ಕೆ ನಮ್ಮ ಮನೆ, ಮಗಳ ಭವಿಷ್ಯ ಹಾಳು ಮಾಡಬೇಡಿ ಎಂದು ಅವರು ಹೇಳಿದರು.

ನಮ್ಮ ಬಳಿಯಿರುವ ಹಣವನ್ನು ಜನರ ಸೇವೆಗೆ ಬಳಸಲು ಮುಂದಾಗಿದ್ದೇವೆ. ಇದಕ್ಕಾಗಿ ನಮ್ಮ ಕುಟುಂಬದ ಎಲ್ಲ ಸದಸ್ಯರ ಬೆಂಬಲ ಇದೆ. ಇವೆಲ್ಲ ಜೇಸನ್ ನವೀದ್ ಮಾಡುತ್ತಿರುವ ಕುತಂತ್ರ. ಕೋಲಾರದಲ್ಲಿ ನಾವು ಸಮಾಜ ಸೇವೆ ಆರಂಭಿಸುತ್ತಿದ್ದಂತೆ ಅವರು ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದಾರೆ. ನಾವು ಏನು ತಪ್ಪು ಮಾಡಿಲ್ಲ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. 10 ವರ್ಷಗಳ ಹಿಂದಿನ ಘಟನೆಯನ್ನು ಈಗ ತಂದು ಬೀದಿಗೆ ಎಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿದ್ದರೆ ನಾವು ಇಬ್ಬರು ಹೆಂಡತಿಯರು ನಮ್ಮ ಗಂಡನ ಕಾಲು ಹಿಡಿದು ರಾಜಕೀಯಕ್ಕೆ ಬರದಂತೆ ತಡೆಯುತ್ತಿದ್ದೆವು ಎಂದು ಶಾಝಿಯಾ ಹೇಳಿದರು.

ನಿವೃತ್ತ ಡಿಸಿಪಿ ಜಿ.ಎ.ಬಾಬಾ ಮಾತನಾಡಿ, ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ಖಿನ್ನತೆಗೆ ಒಳಗಾಗಿರುವ ರುಕ್ಸಾನಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ನಾವೆಲ್ಲ ಅವರನ್ನು ಸಮಾಧಾನಪಡಿಸಿದ್ದೇವೆ. ಕುಟುಂಬದ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದು ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಅನ್ನೋದನ್ನು ಅವರೇ ಅರ್ಥ ಮಾಡಿಕೊಳ್ಳಲಿ ಎಂದರು.

ಸಚಿವ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕ ನಂತರ, ನಾವು ಬೆಂಗಳೂರಿನಲ್ಲಿ ಸಮಾಜ ಸೇವೆಗೆ 100 ಕೋಟಿ ರೂ.ಗಳನ್ನು ಬಳಸುತ್ತೇವೆ ಎಂದು ಹೇಳಿಕೆ ನೀಡಿದ್ದೇವೆ. ನಮ್ಮ ಆಸ್ತಿ, ದಾಖಲೆಗಳ ಬಗ್ಗೆ ಜೇಸನ್ ನವೀದ್‍ಗೆ ಗೊತ್ತಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‍ಗೆ ಈ ಎಲ್ಲ ಮಾಹಿತಿಯನ್ನು ಆತನೆ ನೀಡಿರುವುದು. ನಮ್ಮ ಕುಟುಂಬದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿರುವ ಸೋಮಶೇಖರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿದ್ದೇವೆ.
-ಶಾಝಿಯಾ, ಕೆಜಿಎಫ್ ಬಾಬು ಅವರ ಎರಡನೆ ಹೆಂಡತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X