ಗಾಂಜಾ ಸೇವಿಸುತ್ತಿದ್ದ ಯುವಕ ಸೆರೆ
ಮಂಗಳೂರು, ಡಿ.7: ಕಂಕನಾಡಿ ನಗರ ಠಾಣೆಯ ಎಸ್ಸೈ ಕೃಷ್ಣ ಅವರು ಮಂಗಳವಾರ ಮಧ್ಯಾಹ್ನ ಗಸ್ತು ತಿರುಗುತ್ತಿದ್ದಾಗ ನಾಲ್ಯ ಪದವು ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಕ್ತಿನಗರ ಮುಗ್ರೋಡಿಯ ಭಗವಾನ್ (31) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಆರೋಪಿಯು ಸಿಗರೇಟ್ ಸೇದುತ್ತಿದ್ದು, ಕರೆದು ವಿಚಾರಿಸಿದಾಗ ಗಾಂಜಾ ನಶೆಯಲ್ಲಿ ದ್ದುದು ಕಂಡು ಬಂತು. ತಕ್ಷಣ ಭಗವಾನ್ನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಮಾಡಿಸಿದಾಗ ಗಾಂಜಾ ಸೇವಿಸಿರುವುದು ಋಜುವಾಯಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story