Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊಲಂಬಿಯಾದ ವೀಡಿಯೊವನ್ನು ಬಳಸಿ...

ಕೊಲಂಬಿಯಾದ ವೀಡಿಯೊವನ್ನು ಬಳಸಿ ನಾಗಲ್ಯಾಂಡ್‌ ಸೇನಾ ಕಾರ್ಯಾಚಾರಣೆ ಸಮರ್ಥನೆಗೆ ಯತ್ನ

ವಾರ್ತಾಭಾರತಿವಾರ್ತಾಭಾರತಿ8 Dec 2021 7:23 PM IST
share
ಕೊಲಂಬಿಯಾದ ವೀಡಿಯೊವನ್ನು ಬಳಸಿ ನಾಗಲ್ಯಾಂಡ್‌ ಸೇನಾ ಕಾರ್ಯಾಚಾರಣೆ ಸಮರ್ಥನೆಗೆ ಯತ್ನ

ಹೊಸದಿಲ್ಲಿ: ಡಿಸೆಂಬರ್ 4ರಂದು ನಾಗಾಲ್ಯಾಂಡ್ ಮೊನ್ ಜಿಲ್ಲೆಯ ಗ್ರಾಮದಲ್ಲಿ ಸೇನಾ ಕಾರ್ಯಾಚರಣೆಯೊಂದರ ವೇಳೆ  ತಪ್ಪಾದ ಗುರುತಿಸುವಿಕೆಯಿಂದ  ಕನಿಷ್ಠ 15 ನಾಗರಿಕರು ಹತ್ಯೆಗೀಡಾದ ಘಟನೆಯ ಬೆನ್ನಲ್ಲೇ ಮಾಜಿ ರಕ್ಷಣಾ ಅಧಿಕಾರಿ ಹಾಗೂ ಲೈಫ್ ಕೋಚ್ ಎ ಕೆ ನೈಥಾನಿ ಎಂಬವರು ಒಂದು ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. ನಾಗರಿಕರ ಮೇಲೆ ಗುಂಡು ಹಾರಿಸಿದ್ದನ್ನು ಸಮರ್ಥಿಸುವಂತಿರುವ ಆ ವೀಡಿಯೋ ನಾಗಾಲ್ಯಾಂಡ್‌ ನದ್ದಲ್ಲ, ಅದು ಕೊಲಂಬಿಯಾದ ವೀಡಿಯೋವಾಗಿದೆ ಎಂದು altnews.in ಸತ್ಯಶೋಧನಾ ವರದಿಯ ಮೂಲಕ ಪತ್ತೆ ಹಚ್ಚಿದೆ. 

ವೀಡಿಯೋದಲ್ಲಿ ಇಬ್ಬರು ನಾಗರಿಕರು ಸೇನಾ ವಸ್ತ್ರದಲ್ಲಿರುವವರಿಗೆ ಚೂರಿ ತೋರಿಸಿ ಬೆದರಿಸುತ್ತಿರುವುದು ಹಾಗೂ ನಂತರ ಸೇನಾ ಪಡೆಗಳು ನೆಲಕ್ಕೆ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ.

"ಈ ರೀತಿಯ ಪ್ರಚೋದನೆಗೆ ಒಬ್ಬರು ಹೇಗೆ ಪ್ರತಿಕ್ರಿಯಿಸಬಹುದು?" ಎಂಬರ್ಥದ ಟ್ವೀಟ್ ಅನ್ನು ನೈಥಾನಿ ಮಾಡಿದ್ದಾರೆ. ಇದು ನಾಗಾಲ್ಯಾಂಡ್ ವೀಡಿಯೋ ಹೌದೇ ಎಂದು ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ನೈಥಾನಿ. ಅಲ್ಲಿನದಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದಿದ್ದರು.

ಕೆಲ ಟ್ವಿಟ್ಟರ್ ಬಳಕೆದಾರರು ಹಾಗೂ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಕೆಲ ಖ್ಯಾತನಾಮರು ಕೂಡ ಇದೇ ವೀಡಿಯೋ ಆಧಾರವಾಗಿಸಿ ನಾಗರಿಕರ ಪ್ರಚೋದನೆಯಿಂದಾಗಿ ಸೇನಾ ಪಡೆಗಳು ಸ್ವರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂಬರ್ಥದ ಟ್ವೀಟ್‍ಗಳನ್ನು ಮಾಡಿದ್ದಾರೆ.

ಈ ನಿರ್ದಿಷ್ಟ ವೀಡಿಯೋವನ್ನು ಆಲ್ಟ್ ನ್ಯೂಸ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವೀಡಿಯೋವನ್ನು ಕೊಲಂಬಿಯಾ ಮೂಲದ ಸುದ್ದಿ ಸಂಸ್ಥೆ ನೋಟಿಸಿಯಾಸ್ ಕರಾಕೋಲ್ ಟಿವಿ 2018ರಲ್ಲಿ ಪ್ರಸಾರ ಮಾಡಿತ್ತು ಹಾಗೂ ಈ ಘಟನೆ ಗ್ರಾಮೀಣ ಭಾಗವಾದ ಕೊರಿಂಟೋ ಎಂಬಲ್ಲಿನ ಹಸೀಂಡ ಮಿರಾಫ್ಲೋರೆಸ್ ಎಂಬಲ್ಲಿ ನಡೆದಿತ್ತು ಎಂದು ತಿಳಿದು ಬಂದಿದೆ. ಕೊಲಂಬಿಯಾದ ಹಲವು ಸುದ್ದಿ ಸಂಸ್ಥೆಗಳು ಇದೇ ಸುದ್ದಿಯನ್ನು ಪ್ರಸಾರ ಮಾಡಿದ್ದವು.

ಹಳೆಯ ವೀಡಿಯೋವನ್ನು ಬಳಸಿಕೊಂಡು ನಾಗಾಲ್ಯಾಂಡ್‍ನಲ್ಲಿನ ಸೇನಾ ಕಾರ್ಯಾಚರಣೆಯಲ್ಲಿ ನಾಗರಿಕರ ಹತ್ಯೆಯನ್ನು ಸಮರ್ಥಿಸುವ ಯತ್ನ ನಡೆದಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

How does one react to such provocation ? Notice the restraint shown by the armed soldiers ...... *NOT TRIGGER HAPPY !* ...._may draw your own conclusion._ pic.twitter.com/zrYM2L6LI2

— A K Naithani (@Anju1304) December 7, 2021

Rechazamos rotundamente el uso desmedido de las armas en contra de nuestros hermanos en Miraflores Corinto, liberación de las tierras ya @JuanManSantos, @ONIC_Colombia @marthaperalta11 @luiskankui @FelicianoValen @CRIC_Cauca @FiscaliaCol @PGN_COL pic.twitter.com/qMouX4gmCH

— Movimiento MAIS (@MovimientoMAIS) January 5, 2018
share
ವಾರ್ತಾಭಾರತಿ
ವಾರ್ತಾಭಾರತಿ
Next Story
X