ಕ್ಷೌರಿಕನ ದುಡಿಮೆಯ ಉಳಿತಾಯ ಹಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶಾಲೆಗೆ ದೇಣಿಗೆ
![ಕ್ಷೌರಿಕನ ದುಡಿಮೆಯ ಉಳಿತಾಯ ಹಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶಾಲೆಗೆ ದೇಣಿಗೆ ಕ್ಷೌರಿಕನ ದುಡಿಮೆಯ ಉಳಿತಾಯ ಹಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶಾಲೆಗೆ ದೇಣಿಗೆ](https://www.varthabharati.in/sites/default/files/images/articles/2021/12/8/316882-1638973918.jpg)
ಉಡುಪಿ, ಡಿ.8: ಆದಿ ಉಡುಪಿಯ ಕ್ಷೌರಿಕರೊಬ್ಬರು ತನ್ನ ದುಡಿಮೆಯಲ್ಲಿ ಉಳಿತಾಯ ಮಾಡಿದ ಹಣವನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ಆದಿಉಡುಪಿಯ ಗೌರವ್ ಸೆಲೂನಿನ ಮಾಲಕ ಸತೀಶ್ ಸುವರ್ಣ, ತನ್ನ ದುಡಿಮೆಯಲ್ಲಿ 2220ರೂ. ಉಳಿತಾಯ ಮಾಡಿದ್ದು, ಆ ಹಣವನ್ನು ಮಂಗಳವಾರ ಹರೇಕಳ ನ್ಯೂ ಪಡ್ಟುವಿನಲ್ಲಿರುವ ಶಾಲೆಗೆ ಭೇಟಿ ನೀಡಿ, ಹಾಜಬ್ಬ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಸುಷಿಮ್ ಶೆಟ್ಟಿ ಇದ್ದರು.
Next Story