ಮೃಗಾಲಯದ ಚಿರತೆ ದತ್ತುಸ್ವೀಕಾರ
ಬೆಂಗಳೂರು, ಡಿ. 8: ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ, ಕೈಜೋಡಿಸುವ ಮೂಲಕ ಭಾರತೀಯ ಚಿರತೆ ಪ್ರಾಣಿಯನ್ನು ಮೈಸೂರಿನ ಲೇಡಿಸ್ ಸರ್ಕಲ್ ಇಂಡಿಯ ಅವರು ನಿಗದಿತ ಶುಲ್ಕ ಪಾವತಿಸಿ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಕ್ಕಾಗಿ ಚಾಮರಾಜೇಂದ್ರ ಮೃಗಾಲಯವು ಧನ್ಯವಾದಗಳನ್ನು ತಿಳಿಸಿದೆ.
ಪ್ರಾಣಿ ಸಂರಕ್ಷಣೆಯಂತಹ ಸತ್ಕಾರ್ಯ ಇದಾಗಿದ್ದು, ಇಂತಹ ಕಾರ್ಯವನ್ನು ಇತರೆ ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳು ಸ್ವತಃ ಮುಂದೆ ಬಂದು ಮೃಗಾಲಯದ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಲು ಭಾಗಿಯಾಗಬೇಕು ಎಂದು ಮೃಗಾಲಯದ ಅಧಿಕೃತ ಪ್ರಕಟಣೆಯಲ್ಲಿ ಕೋರಿದೆ.
Next Story





