Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಬಾಲವನದ ಕಾರಂತರ ಹೆಜ್ಜೆ ಗುರುತುಗಳು....

ಬಾಲವನದ ಕಾರಂತರ ಹೆಜ್ಜೆ ಗುರುತುಗಳು....

ವಾರ್ತಾಭಾರತಿವಾರ್ತಾಭಾರತಿ9 Dec 2021 12:27 PM IST
share
ಬಾಲವನದ ಕಾರಂತರ ಹೆಜ್ಜೆ ಗುರುತುಗಳು....

ಪುತ್ತೂರು ಮತ್ತು ಶಿವರಾಮ ಕಾರಂತರಿಗೆ ಅವಿನಾಭಾವ ಸಂಬಂಧ. ‘ಬಾಲವನ’ ಇಂದಿಗೂ ಶಿವರಾಮ ಕಾರಂತರ ಹೆಜ್ಜೆಗುರುತುಗಳನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲವನದ ಶಿವರಾಮ ಕಾರಂತರನ್ನು ಪರಿಚಯಿಸುವ ದೃಷ್ಟಿಯಿಂದ ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಉಪವಿಭಾಗ ಇವರ ಪ್ರಕಾಶನದ ಮೂಲಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಬಾಲವನದಲ್ಲಿ ಭಾರ್ಗವ’ ಎನ್ನುವ ಸಂಪಾದಿತ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಹೊರ ತರಲು ಡಾ. ಯತೀಶ್ ಉಳ್ಳಾಲ್ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಂಪಾದಕರಾಗಿ ಡಾ. ಸುಂದರ ಕೇನಾಜೆ ಕಾರ್ಯನಿರ್ವಹಿಸಿದ್ದಾರೆ. ಗೌರವ ಸಂಪಾದಕರಾಗಿ ಡಾ. ರಾಜೇಂದ್ರ ಕೆ. ವಿ. ಅವರು ಉಸ್ತುವಾರಿ ವಹಿಸಿದ್ದಾರೆ.

‘ಬಾಲವನದ ವಿಸ್ತಾರ ಸ್ಥಳ, ಅಲ್ಲಿರುವ ಸ್ಮಾರಕ ಹಾಗೂ ಕಲಾ ಚಟುವಟಿಕೆಯ ದಾಖಲೆಯ ಹೊರತಾಗಿ ಈ ಸ್ಥಳದ ಪರಿಕಲ್ಪನೆ ಇಲ್ಲದ ಮತ್ತು ಡಾ. ಕಾರಂತರನ್ನು ವಿಸ್ತೃತವಾಗಿ ಅರಿಯದ ಯಾರಿಗೇ ಆದರೂ ಪರಿಚಯಿಸುವ ದಾಖಲೆಯೊಂದರ ಕೊರತೆ ಬಾಲವನದಲ್ಲಿದೆ. ಕಾರಂತರು ಇರುವಾಗ ನಡೆಯುತ್ತಿದ್ದ ನೂರಾರು ಚಟುವಟಿಕೆ, ಅವರು ಬಾಲವನವನ್ನು ಬಿಟ್ಟು ಹೋದ ನಂತರವೂ ನಡೆಯುತ್ತಿದ್ದ ನೂರಾರು ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ, ಬಾಲವನ ತನ್ನನ್ನು ತಾನು ಪರಿಚಯಿಸಿಕೊಳ್ಳುವ ಅಗತ್ಯದಿಂದ ದೂರ ಉಳಿದಿದೆ ಎನ್ನುವುದು ಪ್ರಾಜ್ಞರ ಮಾತು. ಈ ಹಿನ್ನೆಲೆಯಲ್ಲಿ ‘ಬಾಲವನದಲ್ಲಿ ಭಾರ್ಗವ’ ಕೃತಿಯನ್ನು ಹೊರತರಲಾಗಿದೆ’ ಎಂದು ಸಂಪಾದಕ ಸುಂದರ ಕೇನಾಜೆಯವರು ಅಭಿಪ್ರಾಯ ಪಡುತ್ತಾರೆ.

ಕಾರಂತರನ್ನು ಬೇರೆ ಬೇರೆ ನೆಲೆಗಳಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಬಾಲವನದ ಆಡಳಿತ ವರ್ಗ ಬಾಲವನದ ಕುರಿತಂತೆ ಪ್ರತ್ಯೇಕವಾಗಿ ಬರೆಯುತ್ತಾರೆ. ಬಾಲವನದಲ್ಲಿ ಬಾಲ್ಯವನ್ನು ಕಳೆದ ಪೊ. ಮಾಲವಿಕಾ ಕಪೂರ, ಡಾ. ಉಲ್ಲಾಸ ಕಾರಂತ, ಕ್ಷಮಾರಾವ್ ಅವರ ನೆನಪುಗಳೂ ಇಲ್ಲಿವೆ. ಬಾಲವನದೊಳಗಿನ ಜೀವ ವೈವಿಧ್ಯ, ಭೌತಿಕ ಪರಿಸರ, ಸಾಂಸ್ಕೃತಿಕ ಚಟುವಟಿಕೆಗಳು, ಕಲೆ, ಈಜುಕೊಳ, ಬಾಲವನದ ಪ್ರಗತಿಯ ಹಾದಿಯನ್ನು ಕೆಲವರು ಹಂಚಿಕೊಂಡಿದ್ದಾರೆ. ಕಾರಂತರ ವಿಚಾರಗಳ ಅಧ್ಯಾಯ ಹಲವು ಪ್ರಮುಖ ಲೇಖಕರ ಗಂಭೀರ ಬರಹಗಳನ್ನು ಒಳಗೊಂಡಿವೆ. ತಾಳ್ತಜೆ ವಸಂತಕುಮಾರ್, ಅಮೃತ ಸೋಮೇಶ್ವರ, ಡಾ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ನಾಗೇಶ್ ಹೆಗಡೆ, ಪುರುಷೋತ್ತಮ ಬಿಳಿಮಲೆ, ಲಕ್ಷ್ಮೀಶ ತೋಳ್ಪಾಡಿ, ಪ್ರಭಾಕರ ಶಿಶಿಲ, ಐಕೆ ಬೊಳುವಾರು, ನರೇಂದ್ರ ರೈ ದೇರ್ಲ, ವೈದೇಹಿ, ಡಾ. ಜಯಪ್ರಕಾಶ ಮಾವಿನ ಕುಳಿ ಮೊದಲಾದವರು ಕಾರಂತರು ಕೈಯಾಡಿಸಿದ ವಿವಿಧ ಕ್ಷೇತ್ರಗಳ ಬಗ್ಗೆ ಬರೆದಿದ್ದಾರೆ.

ಪಡಾರು ಮಹಾಬಲೇಶ್ವರ ಭಟ್, ಸುಬ್ರಾಯ ಚೊಕ್ಕಾಡಿ, ಡಾ. ಬಿ.ಎ. ವಿವೇಕ ರೈ, ಪಾಲ್ತಾಡಿ ರಾಮಕೃಷ್ಣ ಆಚಾರ್, ಮಾಲಿನಿ ಮಲ್ಯ ಮೊದಲಾದವರು ಕಾರಂತರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಬೊಳುವಾರು ಮುಹಮದ್ ಕುಂಞಿ ಅವರ ಕಾರಂತರ ಎರಡು ಮುಖ, ಜಯಂತ ಕಾಯ್ಕಿಣಿಯವರ ‘ಬಾಲವನದ ಕೊಂಬೆಯಲ್ಲಿ ಒಂಟಿ ಜೋಕಾಲಿ’ ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ‘ಕಾರಂತರೆಂಬ ಹಸಿರು ಬೆಟ್ಟ’, ದೇರಾಜೆಯವರ ‘ಶಿವರಾಮ ಕಾರಂತ ಎಂಬ ಬೆರಗು’ ಲೇಖನಗಳು ಕಾರಂತರನ್ನು ಭಿನ್ನವಾಗಿ ಕಟ್ಟಿಕೊಡುತ್ತದೆ. ಕೃತಿಯಲ್ಲಿ ಬಾಲವನಕ್ಕೆ ಸಂಬಂಧಪಟ್ಟ ಸುಂದರ ಛಾಯಾ ಚಿತ್ರಗಳೂ ಇವೆ.

ಕೃತಿ: ಬಾಲವನದಲ್ಲಿ ಭಾರ್ಗವ

ಸಂಪಾದಕರು: ಡಾ. ಸುಂದರ ಕೇನಾಜೆ

ಪುಟಗಳು: 274

ಬೆಲೆ: 250 ರೂಪಾಯಿ.

ಪ್ರಕಾಶನ: ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಉಪವಿಭಾಗ, ದ.ಕ. ಜಿಲ್ಲೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X