Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅಜ್ಞಾತವಾಸದಿಂದ ‘ಅರಣ್ಯ’ವಾಸದೆಡೆಗೆ...

ಅಜ್ಞಾತವಾಸದಿಂದ ‘ಅರಣ್ಯ’ವಾಸದೆಡೆಗೆ ರವೀನಾ ಟಂಡನ್

ವಾರ್ತಾಭಾರತಿವಾರ್ತಾಭಾರತಿ10 Dec 2021 12:48 PM IST
share
ಅಜ್ಞಾತವಾಸದಿಂದ ‘ಅರಣ್ಯ’ವಾಸದೆಡೆಗೆ ರವೀನಾ ಟಂಡನ್

1990ರ ದಶಕದ ತಾರೆ ರವೀನಾ ಟಂಡನ್‌ಒಟಿಟಿ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ನೆಟ್‌ಫ್ಲಿಕ್ಸ್ ಸರಣಿಯ ‘ಅರಣ್ಯಕ್’ ಅವರ ಚೊಚ್ಚಲ ಸರಣಿ. ತನ್ನ ಮೊದಲ ಚಿತ್ರ ‘ಪತ್ತರ್ ಕೇ ಫೂಲ್’ನ 30 ವರ್ಷಗಳ ಬಳಿಕ ಅವರು ಈ ಹೊಸ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಮುಂಬರುವ ‘ಕೆಜಿಎಫ್: ಚಾಪ್ಟರ್ 2’ರಲ್ಲಿಯೂ ಟಂಡನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಚಾರುದತ್ತ್ ಆಚಾರ್ಯ ಮತ್ತು ರೋಹನ್ ಸಿಪ್ಪಿ ಬರೆದ ಹಾಗೂ ವಿನಯ್ ವೈಕುಲ್ ನಿರ್ದೇಶಿಸಿದ ಅರಣ್ಯಕ್‌ನಲ್ಲಿ ಟಂಡನ್ ಕಸ್ತೂರಿ ದೋಗ್ರ ಎಂಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ. ಪರ್ವತದ ಪಕ್ಕದ ಪಟ್ಟಣವೊಂದರಿಂದ ಪ್ರವಾಸಿಗ ವ್ಯಕ್ತಿಯೊಬ್ಬರ ನಾಪತ್ತೆಯ ಬಗ್ಗೆ ಅವರು ತನಿಖೆ ನಡೆಸುತ್ತಾರೆ. ಪಾತ್ರವರ್ಗದಲ್ಲಿ ಪರಂಬ್ರತ ಚಟರ್ಜಿ, ಆಶುತೋಷ್ ರಾಣಾ, ಮೇಘನಾ ಮಲಿಕ್ ಮತ್ತು ಝಾಕಿರ್ ಹುಸೈನ್ ಇದ್ದಾರೆ.

ಇದು ಪ್ರಭಾವಿ ಸಾಮಾಜಿಕ ಸಂದೇಶವೊಂದರ ಜೊತೆಗೆ ಮನರಂಜನೆ ನೀಡಲು ನನಗೆ ಲಭಿಸಿದ ಉತ್ತಮ ಅವಕಾಶವಾಗಿದೆ ಎಂದು ರವೀನಾ ಟಂಡನ್ ಅಭಿಪ್ರಾಯ ಪಡುತ್ತಾರೆ. ‘‘ನೀವು ನನ್ನ ಹಿಂದಿನ ಚಿತ್ರಗಳನ್ನು ನೋಡಿದರೆ ನಾಯಕಿ ಪ್ರಧಾನ ಕತಾ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು ನೀವು ಗಮನಿಸಿರಬಹುದು. ಸ್ವಲ್ಪವಾದರೂ ನಿಶ್ಚಿತ ಸಂದೇಶವಿರುವ ಚಿತ್ರಗಳನ್ನು ಮಾಡಲು ನಾನು ಪ್ರಯತ್ನಿಸುತ್ತಾ ಬಂದಿದ್ದೇನೆ.

‘ಅರಣ್ಯಕ್’ ಚಿತ್ರದಲ್ಲಿ ನಾನು ಮಾಡುವ ಕಸ್ತೂರಿ ದೋಗ್ರರ ಪಾತ್ರ ಮಹಿಳೆಯರ ಕನಸಾಗಿದೆ. ಮಹಿಳೆಯರು ಬಹುಮುಖಿ ಕೆಲಸಗಾರರು. ನಾವು ಶ್ರೇಷ್ಠ ತಾಯಂದಿರು, ಶ್ರೇಷ್ಠ ಮಗಳಂದಿರು ಮತ್ತು ಶ್ರೇಷ್ಠ ಪತ್ನಿಯಂದಿರಾಗಬೇಕೆಂದು ಬಯಸುತ್ತೇವೆ ಹಾಗೂ ನಮ್ಮ ಆಯ್ಕೆಯ ವೃತ್ತಿ ಬದುಕಿನಲ್ಲೂ ಉತ್ತಮ ನಿರ್ವಹಣೆ ನೀಡುತ್ತೇವೆ. ಕೆಲವು ಸಲ ಮನೆ ನಡೆಸುವುದಕ್ಕಿಂತ ಸಿನೆಮಾ ಸೆಟ್‌ನಲ್ಲಿರುವುದೇ ಹೆಚ್ಚು ಸಮಾಧಾನ ನೀಡುತ್ತದೆ ಎಂದು ನಾನು ಆಗಾಗ ನನ್ನ ಗಂಡ(ಚಿತ್ರ ವಿತರಕ ಅನಿಲ್ ತಂಡಾನಿ)ನಿಗೆ ಹೇಳುತ್ತಿರುತ್ತೇನೆ.

ನನಗೆ ಬೆಂಬಲ ನೀಡುವವರು ಇದ್ದಾರೆ. ಅದು ನನ್ನ ಅದೃಷ್ಟ. ಆದರೆ ಕಸ್ತೂರಿಯಂತಹ ಹೆಚ್ಚಿನ ಮಹಿಳೆಯರಿಗೆ ಬೆಂಬಲ ಇರುವುದಿಲ್ಲ. ಅವಳು ನನ್ನ ಹೃದಯವನ್ನು ತಟ್ಟಿದಳು. ಕೆಲಸ ಮಾಡುವ ಮಹಿಳೆಯರ, ಅದರಲ್ಲೂ ಮುಖ್ಯವಾಗಿ ಸಮವಸ್ತ್ರಧಾರಿ ಮಹಿಳೆಯರ ಕುಟುಂಬಗಳು ಕೂಡ ಜವಾಬ್ದಾರಿಯನ್ನು ಹೊರಬೇಕು ಹಾಗೂ ಆ ಮೂಲಕ ಇಂತಹ ಮಹಿಳೆಯರಿಗೆ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಲು ಹಾಗೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಸಂದೇಶ ಹೊರಜಗತ್ತಿಗೆ ಹೋಗಬೇಕೆಂದು ನಾನು ಬಯಸಿದೆ’’ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. 30 ವರ್ಷಗಳ ಈ ಅವಧಿಯಲ್ಲಿ ಪ್ರೇಕ್ಷಕರ ಅಭಿರುಚಿಗಳು ಬದಲಾಗಿರುವ ಕುರಿತಂತೆಯೂ ಅವರಿಗೆ ಅರಿವಿದೆ. ‘‘ಪ್ರೇಕ್ಷಕರ ಗ್ರಹಿಕೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಒಟಿಟಿಯಿಂದಾಗಿ ನಮಗೆ ಜಾಗತಿಕ ಸಿನೆಮಾಗಳ ನಂಟು ಲಭಿಸಿದೆ ಹಾಗೂ ಇರಾನ್, ಕೊರಿಯ, ಸ್ಪೈನ್‌ನಲ್ಲಿ ಯಾವ ಚಿತ್ರಗಳು ತಯಾರಾಗುತ್ತಿವೆ ಎನ್ನುವ ಮಾಹಿತಿ ಈಗ ನಮ್ಮ ಬೆರಳ ತುದಿಯಲ್ಲಿದೆ. ಮೊದಲು ಇಂತಹ ಚಿತ್ರಗಳನ್ನು ನಾವು ಚಿತ್ರೋತ್ಸವಗಳು ಮತ್ತು ವಿದೇಶಗಳಿಂದ ಬರುವ ಡಿವಿಡಿಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಈ ತಿಳುವಳಿಕೆಯಿಂದಾಗಿ ಪ್ರೇಕ್ಷಕರು ಈಗ ತಮ್ಮ ಪೂರ್ವಾಗ್ರಹ ಪೀಡಿತ ದೃಷ್ಟಿಕೋನಗಳಿಗೆ ಆತುಕೊಂಡು ಕುಳಿತಿಲ್ಲ. ನಿರ್ದೇಶಕರು ಕೂಡ ಎಲ್ಲ ರೀತಿಯ ಕತೆಗಳನ್ನು ಹೇಳಲು ಉತ್ಸುಕರಾಗಿದ್ದಾರೆ. ಪ್ರಯೋಗಗಳನ್ನು ಮಾಡುವ ಮೂಲಕ ತಾವು ಗುರಿಯಿರಿಸಿದ ಪ್ರೇಕ್ಷಕ ವರ್ಗವನ್ನು ತಲುಪಲು ಅವರು ಈಗ ಮುಂದಾಗಿದ್ದಾರೆ. ಈಗ ಅವರು ವಾಣಿಜ್ಯ ಸೂತ್ರದ ಅವಶ್ಯಕತೆಗಳಾದ ಐಟಮ್ ಡ್ಯಾನ್ಸ್‌ಗಳು ಮತ್ತು ಶುಕ್ರವಾರದ ಬಾಕ್ಸ್ ಆಫೀಸ್ ಒತ್ತಡಕ್ಕೆ ಬದ್ಧರಾಗಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X