ಉಡುಪಿ: ಜನರಲ್ ಬಿಪಿನ್ ರಾವತ್ಗೆ ಮೊಂಬತ್ತಿ ಬೆಳಗಿಸಿ ಗೌರವ ಶ್ರದ್ಧಾಂಜಲಿ
![ಉಡುಪಿ: ಜನರಲ್ ಬಿಪಿನ್ ರಾವತ್ಗೆ ಮೊಂಬತ್ತಿ ಬೆಳಗಿಸಿ ಗೌರವ ಶ್ರದ್ಧಾಂಜಲಿ ಉಡುಪಿ: ಜನರಲ್ ಬಿಪಿನ್ ರಾವತ್ಗೆ ಮೊಂಬತ್ತಿ ಬೆಳಗಿಸಿ ಗೌರವ ಶ್ರದ್ಧಾಂಜಲಿ](https://www.varthabharati.in/sites/default/files/images/articles/2021/12/10/317144-1639145332.jpg)
ಉಡುಪಿ, ಡಿ.10: ಹೆಲಿಕಾಪ್ಟರ್ ಪತನಗೊಂಡು ವಿಧಿವಶರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಇಂದು ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದಲ್ಲಿ ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೊಸಿಯೇಶನ್ ಉಡುಪಿ ವಲಯ, ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಮೊಂಬತ್ತಿ ಬೆಳಗಿಸಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಮಾತನಾಡಿದರು. ಎಸ್.ಕೆ.ಪಿ.ಎ ಉಪಾಧ್ಯಕ್ಷ ಸುರಭಿ ಸುಧೀರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಕೆ.ವಾಸುದೇವ ರಾವ್, ಅನಿಶ್ ಶೆಟ್ಟಿಗಾರ್, ವಾಮನ ಪಡುಕೆರೆ ,ಆಸ್ಟ್ರೋ ಮೋಹನ್, ದಾಮೋದರ್ ನಿಟ್ಟೂರ್, ಸುರಭಿ ರತನ್, ಕೃಷ್ಣ, ಪ್ರಕಾಶ್ ಕೊಡಂಕೂರ್,ಸುಕೇಶ್ ಅಮೀನ್, ಎಲ್ಲೂರು ರಮೇಶ್ ಭಟ್, ಉದಯ ನಾಯ್ಕ್, ದಯಾನಂದ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಗಣೇಶ್ ಪ್ರಸಾದ್ ಜಿ. ನಾಯಕ್, ಮಾಜಿ ಸೈನಿಕ ವಾದಿರಾಜ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೊಸಿಯೇಶನ್ ಉಡುಪಿ ವಲಯಾಧ್ಯಕ್ಷ ಜನಾರ್ದನ ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಕೊರೆಯ ನಿರೂಪಿಸಿ ವಂದಿಸಿದರು.