ಬ್ರಹ್ಮಾವರ: ಮನೆಗೆ ನುಗ್ಗಿ ಸೊತ್ತು ಕಳವು
ಬ್ರಹ್ಮಾವರ, ಡಿ.10: ಮನೆಗೆ ನುಗ್ಗಿದ ಕಳ್ಳರು ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಪಾರು ಮೂಲದ ಮಹೇಶ್ ಶೆಟ್ಟಿ ಎಂಬವರು ವಾಸವಾಗಿರುವ ಬಾಡಿಗೆ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ದೇವರ ಪೂಜೆಗೆ ಇರಿಸಿದ ಹಾಗೂ ಮನೆಯ ನಿರ್ಮಾಣದ ಬಗ್ಗೆ ಇರಿಸಿದ್ದ 25,000ರೂ. ನಗದು ಹಾಗೂ ಚಿನ್ನದ ಸರ, ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಓಲೆ, 3 ಜೊತೆ ಬೆಳ್ಳಿಯ ಕಾಲುಚೈನ್, ದೃಷ್ಟಿಯ ಚೈನ್, ಎರಡು ಜೊತೆ ಬೆಳ್ಳಿಯ ಕುಂಕುಮ ಬಟ್ಟಲು, 2 ಜೊತೆ ಬೆಳ್ಳಿಯ ದೀಪ ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 1.23ಲಕ್ಷ ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story