Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ13 Dec 2021 12:05 AM IST
share
ಓ ಮೆಣಸೇ...

ಬೇಡವೆಂದರೂ ದಿಲ್ಲಿಯಿಂದ ಒತ್ತಡ ಹಾಕಿ ಕಾಂಗ್ರೆಸ್‌ನವರು ನನ್ನನ್ನು ಮುಖ್ಯಮಂತ್ರಿ ಮಾಡಿ ಕಿರುಕುಳ ನೀಡಿದರು
 -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
   ನಾಡೆಲ್ಲಾ ಬೇಡ ಬೇಡವೆಂದರೂ ನೀವಿನ್ನೂ ರಾಜಕೀಯದಲ್ಲಿ ಉಳಿದಿದ್ದೀರಿ. ಜನರು ಕಿರುಕುಳ ಕೊಡದೆ ಇರುತ್ತಾರೆಯೇ?


  
ಮಾಜಿ ಪ್ರಧಾನಿ ದೇವೇಗೌಡರು ನಾಯಕರನ್ನು ಸೃಷ್ಟಿಸುವ ಕಾರ್ಖಾನೆ - ಡಿ.ಸಿ.ತಮ್ಮಣ್ಣ, ಶಾಸಕ
ಆ ಪೈಕಿ ಊರವರಿಗೆ ಕಂಡಿರುವುದು, ಅವರು ತಮ್ಮ ಮನೆಯಲ್ಲಿ ಸೃಷ್ಟಿಸಿದ ಒಬ್ಬಿಬ್ಬರು ಅಸ್ವಸ್ಥ ನಾಯಕರು ಮಾತ್ರ.


ದೇಶದ ರಕ್ಷಣಾ ನೀತಿಗಳನ್ನು ವಿದೇಶಿ ನೀತಿಗಳ ಕರಿನೆರಳಿನಿಂದ ಹೊರತರಲಾಗಿದೆ - ಅಮಿತ್ ಶಾ, ಕೇಂದ್ರ ಸಚಿ

  ಅಂದರೆ ಅದನ್ನೂ ಅದಾನಿ ತರದವರ ಕೈಗೆ ಮಾರಿ ಬಿಟ್ಟಿರಾ?


ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಫಸಲು ತೆಗೆಯುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಹಾಗೆಂದು ಎಲ್ಲರೂ ದಕ್ಷಿಣೆಯನ್ನು ಅವಲಂಬಿಸಿ ಬದುಕಲಿಕ್ಕಾಗುತ್ತದೆಯೇ?


ಕಾಂಗ್ರೆಸ್ ವರಿಷ್ಠ ನಾಯಕರಿಗೆ ಸಲಹೆ ನೀಡುವುದೇ ಅಪರಾಧವಾಗಿ ಕಾಣುತ್ತದೆ - ಗುಲಾಮ್ ನಬಿ ಆಝಾದ್, ಕಾಂಗ್ರೆಸ್ ಮುಖಂಡ
  ಇದು, ನಿಮಗೆ ಸಲಹೆ ನೀಡಿದ ಜೂನಿಯರ್‌ಗಳ ನಿತ್ಯಾನುಭವ.


   ರಾಜ್ಯದಲ್ಲಿ ಒಬ್ಬಿಬ್ಬರಿಂದಾಗಿ ಕಾಂಗ್ರೆಸ್ ಉಸಿರಾಡುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
   ಆ ಇಬ್ಬರಲ್ಲಿ ಒಬ್ಬರು ನೀವೇ ಇರಬೇಕು.


ಕಾಂಗ್ರೆಸ್ ವಯಸ್ಸಾದ ಪಕ್ಷ. ಅದನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

  ಕಾಂಗ್ರೆಸ್‌ನ ವಯಸ್ಸಾದವರಿಗೆ ಬಿಜೆಪಿಯಲ್ಲಿ ಪ್ರತ್ಯೇಕ ಗೋಶಾಲೆಗಳಿವೆಯಂತೆ.


   ಮುಂದಿನ ಚುನಾವಣೆಯವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ -ಈಶ್ವರಪ್ಪ, ಸಚಿವ
ಹಾಗೆಲ್ಲಾ ನಿರಾಶರಾಗಿ ಜೀವನದಲ್ಲಿ ಜಿಗುಪ್ಸೆ ಬೆಳೆಸಿಕೊಳ್ಳಬೇಡಿ. ಬದುಕಿನ ಈ ಹಂತದಲ್ಲಿ ಆಶಾವಾದವನ್ನು ಉಳಿಸಿಕೊಳ್ಳಿ.


   ಸಿನೆಮಾದವರು ಮಾಡುವಷ್ಟು ಕನ್ನಡದ ಕೊಲೆಯನ್ನು ಬೇರೆ ಯಾರೂ ಮಾಡುವುದಿಲ್ಲ - ಅನಂತ್ ನಾಗ್, ನಟ
  ಸಂಸ್ಕೃತ ಪ್ರಿಯರು ಬೇರೆ ಕ್ಷೇತ್ರಗಳಲ್ಲೂ ಅಷ್ಟೇ ದಕ್ಷವಾಗಿ ಆ ಕ್ರೌರ್ಯ ಮೊೆಯುತ್ತಿದ್ದಾರೆ.


   ಶಾಸಕರಾಗಿ ಆಯ್ಕೆಯಾಗುವ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ - ಅರವಿಂದ ಬೆಲ್ಲದ್, ಶಾಸಕ
  ಇಲ್ಲಿ ವಿಶೇಷ ಎಂದರೆ, ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುವುದು.

 
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವಳಲ್ಲ. ಯಾರು ರಾಷ್ಟ್ರೀಯವಾದಿಯಾಗಿರುತ್ತಾರೋ ಅವರ ಪರ - ಕಂಗನಾ ರಣಾವತ್, ನಟಿ
  ವಿದೂಷಕರು ಯಾರ ಪರವಾಗಿದ್ದರೇನಂತೆ, ತಮ್ಮ ಪಾತ್ರ ನಿರ್ವಹಿಸುತ್ತಿದ್ದರೆ ಸಾಕು.


   ನಾವು ಕಷ್ಟ ಬಂದಾಗ ದೇವರ ಬಳಿ ಹೋಗುವಂತೆ ದೇವೇಗೌಡರು ಚುನಾವಣೆ ಬಂದಾಗ ಪ್ರಧಾನಿಯನ್ನು ಭೇಟಿಯಾಗಿ ಬರುತ್ತಾರೆ - ಸಿ.ಪಿ.ಯೋಗೇಶ್ವರ್, ವಿ.ಪ.ಸದಸ್ಯ
  ಈ ಬಾರಿ, ಮಾಜಿಪ್ರಧಾನಿಯಾಗಲು ಸಿದ್ಧತೆ ನಡೆಸುತ್ತಿರುವ ಮೋದಿಯವರೇ, ಆ ಬದುಕು ಹೇಗಿರುತ್ತದೆಂದು ಅರಿಯಲು ಗೌಡರನ್ನು ಕರೆಸಿಕೊಂಡಿದ್ದರಂತೆ.

 



ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ -ದೇವೇಗೌಡ, ಮಾಜಿ ಪ್ರಧಾನಿ
   ಎಂದೋ ಮುಗಿದದ್ದನ್ನು ಯಾರಾದರೂ ಮತ್ತೆ ಮುಗಿಸೋದು ಹೇಗೆ ಸಾರ್?


 ಒಂದು ವೇಳೆ ಕೋವಿಡ್‌ನಿಂದಾಗಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾದರೆ ಆ ವಿಷಯದಲ್ಲಿ ಹಿಂದೇಟು ಹಾಕುವುದಿಲ್ಲ - ಬಿ.ಸಿ.ನಾಗೇಶ್, ಸಚಿವ
  ನೀವು ಹಿಂದೇಟು ಹಾಕುವುದು ಉಪಯುಕ್ತವಾದುದನ್ನು ತೆರೆಯುವ ವಿಷಯದಲ್ಲೇ ಹೊರತು ಮುಚ್ಚುವ ವಿಷಯದಲ್ಲಿ ಅಲ್ಲ ಎಂಬುದು ನಾಡಿಗೆಲ್ಲಾ ಗೊತ್ತಿದೆ.


 ನಾವು ಯಾವತ್ತೂ ಯಂತ್ರದ ಗುಲಾಮರಾಗಬಾರದು -ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
  ಮಂತ್ರದ ಮೂಲಕ ಸಮಾಜವನ್ನು ದಾಸ್ಯಕ್ಕೊಳಪಡಿಸುವಲ್ಲಿ ಯಶಸ್ವಿಯಾದವರಿಗೆ ಯಂತ್ರದ ಅಗತ್ಯವೇ ಎಲ್ಲಿದೆ?


   ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ - ಅನ್ವರ್ ಮಾಣಿಪ್ಪಾಡಿ, ರಾಜ್ಯ ಬಿಜೆಪಿ ವಕ್ತಾರ
  ನೀವು ನಿರೀಕ್ಷಿಸಿದ್ದ ಯಾವುದಾದರೂ ಸ್ಥಾನ ನಿಮಗೆ ಸಿಕ್ಕಿದ್ದರೆ ಈ ದುರಂತ ಸಂಭವಿಸುತ್ತಿತ್ತೇ?


ನನ್ನದು ಮಾತೃ ಹೃದಯ. ಜನ ಕಷ್ಟ ಹೇಳಿದಾಗ ಕಣ್ಣೀರು ಬರುತ್ತದೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಪಾಪ ಪ್ರಜ್ಞೆ ಅಷ್ಟರ ಮಟ್ಟಿಗೆ ಕಾಡುತ್ತಿರಬೇಕು.


ಬಿಜೆಪಿಗೆ ಸೇರುವುದಿಲ್ಲ ಎಂದಿದ್ದಕ್ಕೆ ನನ್ನನ್ನು ಜೈಲಿಗೆ ಕಳುಹಿಸಿದರು - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಜೈಲಿನಿಂದ ಬಿಟ್ಟದ್ದು ಯಾವ ಕಾರಣಕ್ಕೆ ಎನ್ನುವ ಗುಟ್ಟನ್ನು ಬಹಿರಂಗ ಪಡಿಸಿ.


2022ರ ಉ.ಪ್ರ.ವಿಧಾನ ಸಭೆ ಚುನಾವಣೆಯಲ್ಲಿ ನನ್ನ ಪಕ್ಷ ಸ್ಪಷ್ಟ ಬಹುಮತ ಪಡೆದು ದೃಢ ಸರಕಾರ ರಚಿಸಲಿದೆ - ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

ಬಹುಷಃ ಬಿಜೆಪಿಯೊಂದಿಗೆ ವಿಲೀನವಾಗುವ ಯೋಜನೆ ಇರಬೇಕು.


ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೋಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ - ಯು.ಟಿ.ಖಾದರ್, ಮಾಜಿ ಸಚಿವ
ಜನತೆ ಹಸಿವಿನಿಂದ ಸಾಯುತ್ತಿರುವ ನಾಡಿನಲ್ಲಿ ಗೋವುಗಳ ಸೌಭಾಗ್ಯ ನೋಡಿ.


ಆಳುವವರಿಗೂ ಗೋಚಿಂತೆ, ಪ್ರತಿಪಕ್ಷದವರಿಗೂ ಗೋಚಿಂತೆ. ದಲಿತರು ನಮಗೆ ಕೇವಲ ಮತಬ್ಯಾಂಕ್ ಅಲ್ಲ, ನಮ್ಮ ಆಡಳಿತದ ಪಾಲುದಾರರು - ಸಿ.ಟಿ.ರವಿ, ಶಾಸಕ

 ನಿಮ್ಮ ಸಂಪುಟದಲ್ಲಿ ದಲಿತರಿಗೆ ಎಷ್ಟು ಪಾಲು ಕೊಟ್ಟಿದ್ದೀರಿ?


ನಾನು ಪ್ರಧಾನಿ ಮೋದಿಯ ವಿರೋಧಿಯಲ್ಲ, ಅವರು ಅನುಸರಿಸುತ್ತಿರುವ ನೀತಿಯ ವಿರೋಧಿ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

  ನಿಮ್ಮಂಥವರು ವಿರೋಧಿಸಿದಾಗಲೆಲ್ಲ, ಮೋದಿಯವರಲ್ಲಿ ಏನೋ ಒಳ್ಳೆಯತನ ಇರಬೇಕೆಂದು ಜನರು ಸಂಶಯಿಸಲಾರಂಭಿಸುತ್ತಾರೆ.


ಅಸದುದ್ದೀನ್ ಉವೈಸಿಯ ಎಐಎಂಐಎಂ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಯ ‘ಬಿ’ಟೀಂ ಎಂಬುದರಲ್ಲಿ ಅನುಮಾನವೇ ಇಲ್ಲ - ಎಂ.ಬಿ.ಪಾಟೀಲ್, ಶಾಸಕಕಾಂಗ್ರೆಸ್ ’ಸಿ’ ಟೀಮ್ ಆಗಿ ಬಿಟ್ಟಿತಲ್ಲ?


ಕಾಂಗ್ರೆಸ್ ಇಲ್ಲದೆ ವಿಪಕ್ಷಗಳ ಒಕ್ಕೂಟ ಸಾಧ್ಯವಿಲ್ಲ - ಸಂಜಯ್ ರಾವತ್, ಶಿವಸೇನೆ ವಕ್ತಾರ

ಬಹುಷಃ ಕಾಂಗ್ರೆಸ್ ಇಲ್ಲದೆ ಶಿವಸೇನೆ ಇಲ್ಲ ಎನ್ನುವುದು ನಿಮಗೆ ಖಚಿತ ಆಗಿರಬೇಕು.


ನಾನು ರಾಜಕೀಯಕ್ಕೆ ಶ್ರಮಿಕನ ಮಗನಾಗಿ ಬಂದೆ, ಧನಿಕನ ಮಗನಾಗಿ ಅಲ್ಲ - ರಮೇಶ್ ಜಾಧವ್, ಸಂಸದ

ಈಗ ಮಾತ್ರ ಧನಿಕನ ಅಪ್ಪಆಗಿದ್ದೀರಿ.


ರೈತರ ಹೆಸರು ಹೇಳಿ ತಲೆಮಾರು ಬೆಳೆಸುವ ಅಗತ್ಯ ನಮಗಿಲ್ಲ - ಎಚ್.ಡಿ.ರೇವಣ್ಣ, ಶಾಸಕ

 ರೈತರ ಹೆಸರಲ್ಲಿ ರಾಜಕೀಯ ಮಾಡಿದರೆ ಮತ ಸಿಗುವುದಿಲ್ಲ ಎನ್ನುವುದು ಗೊತ್ತಾಗಿರಬೇಕು.


ಮನಃಪೂರ್ವಕ ಮತಾಂತರ ಓಕೆ, ಒತ್ತಡ, ಆಮಿಷ ಹೇರಿದರೆ ಜೋಕೆ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

   ಎಷ್ಟೋ ಮಂದಿ ಬ್ರಾಹ್ಮಣ ಪುರೋಹಿತರಾಗಿ ಮತಾಂತರಗೊಳ್ಳಲು ಮನಃಪೂರ್ವಕ ತವಕಿಸುತ್ತಿದ್ದಾರಲ್ಲಾ!


ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಡಿಕೆಶಿ ಸೋಲಿಸುತ್ತಾರೆ. ಖರ್ಗೆಯವರನ್ನು ಪರಮೇಶ್ವರ್ ಸೋಲಿಸುತ್ತಾರೆ - ನಳೀನ್‌ಕುಮಾರ್ ಕಟೀಲು, ಸಂಸದ
ನಿಮ್ಮ ಪಾಳಯದಲ್ಲಿ ಯಾರನ್ನು ಯಾರು ಸೋಲಿಸುತ್ತಾರೆಂಬ ಪಟ್ಟಿಯನ್ನು ಯಾವಾಗ ಬಿಡುಗಡೆ ಗೊಳಿಸುತ್ತೀರಿ

share
ಪಿ.ಎ.ರೈ
ಪಿ.ಎ.ರೈ
Next Story
X