ಕಾತ್ಯಾಯಿನಿ ಕುಂಜಿಬೆಟ್ಟುಗೆ ‘ಕರ್ಕಿ ಕಾವ್ಯ ಪ್ರಶಸ್ತಿ’

ಉಡುಪಿ, ಡಿ.13: ಪ್ರಸಿದ್ಧ ಕನ್ನಡ ಕವಿ ಡಾ.ಡಿ.ಎಸ್.ಕರ್ಕಿ ಅವರ ಹೆಸರಿನಲ್ಲಿ ಬೆಳಗಾವಿಯ ಡಾ.ಡಿ.ಎಸ್. ಕರ್ಕಿ ಪ್ರತಿಷ್ಠಾನವು ನೀಡುತ್ತಿರುವ 2021ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ‘ಅವನು ಹೆಣ್ಣಾಗಬೇಕು’ ಕೃತಿ ಆಯ್ಕೆಯಾಗಿದೆ.
ಡಿ.18ರಂದು ಬೆಳಗಾವಿಯಲ್ಲಿ ನಡೆಯಲಿರುವ ಡಾ.ಡಿ.ಎಸ್.ಕರ್ಕಿಯವರ 114ನೆ ಜನ್ಮದಿನದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪ್ರಕಟಿಸಿದೆ. ಪ್ರಸ್ತುತ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story





