Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ʼಆಗ್ರಾದಿಂದ ಪ್ರಯಾಗರಾಜ್‌ ವರೆಗೆʼ:...

ʼಆಗ್ರಾದಿಂದ ಪ್ರಯಾಗರಾಜ್‌ ವರೆಗೆʼ: ಕೋವಿಡ್ ಕಾಲದ ಉದ್ಯಮ ಸಂಕಷ್ಟಗಳನ್ನು ತೆರೆದಿಡುತ್ತಿರುವ ಆತ್ಮಹತ್ಯಾ ಹೆಚ್ಚಳ

Theprint.in ವರದಿ

ವಾರ್ತಾಭಾರತಿವಾರ್ತಾಭಾರತಿ15 Dec 2021 7:10 PM IST
share
ʼಆಗ್ರಾದಿಂದ ಪ್ರಯಾಗರಾಜ್‌ ವರೆಗೆʼ: ಕೋವಿಡ್ ಕಾಲದ ಉದ್ಯಮ ಸಂಕಷ್ಟಗಳನ್ನು ತೆರೆದಿಡುತ್ತಿರುವ ಆತ್ಮಹತ್ಯಾ ಹೆಚ್ಚಳ

ಲಕ್ನೋ,ಡಿ.14: ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿವೆ. ಉತ್ತರ ಪ್ರದೇಶದ ಸಣ್ಣ ಪಟ್ಟಣಗಳು ಪ್ರತಿ ದಿನ ಆತಂಕದೊಂದಿಗೇ ಎದ್ದೇಳುತ್ತಿವೆ ಎಂದು Theprint.in ವರದಿ ಮಾಡಿದೆ.

ಡಿ.3ರಂದು ಆಗ್ರಾದ ಉದ್ಯಮಿ ಯೋಗೇಶ ಮಿಶ್ರಾ (46) ಅವರು ಪತ್ನಿ ಪ್ರತೀಚಿ (43) ಮತ್ತು ಪುತ್ರಿ ಕಾವ್ಯಾ (5) ಜೊತೆ ತನ್ನ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘೋರ ಸಾಮೂಹಿಕ ಆತ್ಮಹತ್ಯೆ ಇಡೀ ಆಗ್ರಾ ನಗರವನ್ನೇ ನಡುಗಿಸಿತ್ತು. ಅಂದು ಅಜ್ಜಿಯೊಂದಿಗೆ ಮಲಗಿದ್ದ 11ರ ಹರೆಯದ ಪುತ್ರಿ ಮಾತ್ರ ಬದುಕುಳಿದಿದ್ದಾಳೆ. "ಸಾಮೂಹಿಕ ಆತ್ಮಹತ್ಯೆಗೆ ನಾವೇ ಹೊಣೆಗಾರರು" ಎಂದು ಮಿಶ್ರಾ ಬರೆದಿಟ್ಟಿದ್ದ ಪತ್ರವು ಸ್ಥಳದಲ್ಲಿ ಪತ್ತೆಯಾಗಿತ್ತು.

ಕಳೆದ ಎರಡೂವರೆ ದಶಕಗಳಿಂದ ಆಗ್ರಾದಲ್ಲಿ ವಾಸವಿದ್ದ ಮೂಲತಃ ಇಟಾವಾ ಜಿಲ್ಲೆಯವರಾಗಿದ್ದ ಮಿಶ್ರಾ ಮಧ್ಯಮ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದರು.
ಹಣಕಾಸು ಮುಗ್ಗಟ್ಟಿತ್ತು ನಿಜ,ಆದರೆ ಅವರೆಂದೂ ನಮ್ಮಿಂದಿಗೆ ಆ ಬಗ್ಗೆ ಚರ್ಚಿಸಿರಲಿಲ್ಲ ಎಂದು ಮಿಶ್ರಾರ ಹಿರಿಯ ಸೋದರ ವಿಶಾಲ ಮಿಶ್ರಾ ತಿಳಿಸಿದರು.
 
ನಾವಿನ್ನೂ ತನಿಖೆಯನ್ನು ನಡೆಸುತ್ತಿದ್ದೇವೆ,ಆದರೆ ಹಣಕಾಸು ತೊಂದರೆ ಸಾಮೂಹಿಕ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
 
ಕೋವಿಡ್ ಸಾಂಕ್ರಾಮಿಕವು ಪ್ರತಿಯೊಬ್ಬರನ್ನೂ ಸಂಕಷ್ಟಕ್ಕೆ ತಳ್ಳಿದೆ. ಸಣ್ಣ ಅಥವಾ ದೊಡ್ಡ ಉದ್ಯಮವಾಗಲಿ,ನಷ್ಟದಿಂದ ಯಾರೂ ಪಾರಾಗಿಲ್ಲ. ಸರಕಾರವೂ ನೆರವಾಗುತ್ತಿಲ್ಲ ಎಂದು ಆಗ್ರಾ ಟೂರಿಸಂ ವೆಲ್ಫೇರ್ ಚೇಂಬರ್‌ನ ಅಧ್ಯಕ್ಷ ಪಿ.ಕೆ.ಅಗರವಾಲ್ ಹೇಳಿದರು. 2020ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಬಿಡುಗಡೆಗೊಳಿಸಿದ್ದ ಅಂಕಿಅಂಶಗಳಂತೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾರಣಾಸಿ ಮತ್ತು ಪ್ರಯಾಗರಾಜ್ ಧಾರ್ಮಿಕ ನಗರಗಳಾಗಿವೆ. ಕೋವಿಡ್‌ನಿಂದಾಗಿ ಪ್ರವಾಸೋದ್ಯಮವು ನೆಲ ಕಚ್ಚಿದ್ದು, ಹಲವಾರು ತಿಂಗಳುಗಳ ಕಾಲ ಹೆಚ್ಚಿನ ಹೋಟೆಲ್ ಗಳು ಮುಚ್ಚಿದ್ದವು ಎಂದು ಸಿವಿಲ್ ಉದ್ಯೋಗ ವ್ಯಾಪಾರ ಮಂಡಲ್ ನ ಅಧ್ಯಕ್ಷ ನೀರಜ ಜೈಸ್ವಾಲ್ ಹೇಳಿದರು.

ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಮೇಲಿನ ನಿರ್ಬಂಧದಿಂದಾಗಿ ಆಗ್ರಾದಂತಹ ನಗರಗಳು ಸಂಕಷ್ಟಕ್ಕೀಡಾಗಿವೆ. ನಿರ್ದಿಷ್ಟ ವ್ಯವಹಾರವನ್ನು ನಡೆಸುತ್ತಿರುವರು ನಷ್ಟವನ್ನು ಅನುಭವಿಸುತ್ತಿದ್ದರೂ ರಾತ್ರಿ ಬೆಳಗಾಗುವುದರಲ್ಲಿ ಅದನ್ನು ಬದಲಿಸಲು ಸಾಧ್ಯವಿಲ್ಲ. ಸರಕಾರವು ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದನ್ನು ನಾವು ಕಳೆದೆರಡು ವರ್ಷಗಳಿಂದಲೂ ಕಾಯುತ್ತಿದ್ದೇವೆ. ಆಗ್ರಾದಲ್ಲಿ ದೇಶಿಯ ಪ್ರವಾಸಿಗಳನ್ನು ನಂಬಿಕೊಂಡು ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ. ನಾವು ಜಿಎಸ್‌ಟಿ ಪಾವತಿಸುತ್ತಿದ್ದೇವೆ ಮತ್ತು ಪ್ರವಾಸೋದ್ಯಮವು ದೇಶದ ಜಿಡಿಪಿಗೆ ಪಾಲು ಸಲ್ಲಿಸುತ್ತಿದ್ದರೂ ಸರಕಾರವು ನಮಗೆ ಯಾವುದೇ ಪರಿಹಾರವನ್ನು ಒದಗಿಸಿಲ್ಲ ಎಂದು ಆಗ್ರಾ ಟೂರಿಸಂ ವೆಲ್ಫೇರ್ ಚೇಂಬರ್ ನ ಕಾರ್ಯದರ್ಶಿ ಅನೂಪ್ ಗೋಯಲ್ ತಿಳಿಸಿದರು.

ನರೇಂದ್ರ ಮೋದಿ ಸರಕಾರವು ಲಾಕ್‌ಡೌನ್‌ಗಳನ್ನು ಸಡಿಲಿಸಿದಾಗಿನಿಂದಲೂ ಪ್ರಯಾಗರಾಜ್‌ನಲ್ಲಿಯ ದೈನಿಕಗಳು ಪ್ರತಿದಿನವೂ ಆತ್ಮಹತ್ಯೆಗಳನ್ನು ವರದಿ ಮಾಡುತ್ತಿವೆ. ಈ ವರ್ಷ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಣಕಾಸು ಮುಗ್ಗಟ್ಟು,ಸಾಲಬಾಧೆ,ಕೌಟುಂಬಿಕ ಸಮಸ್ಯೆಗಳು ಇತ್ಯಾದಿಗಳು ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಎರಡು ಸತತ ಲಾಕ್‌ಡೌನ್‌ಗಳ ಸಂದರ್ಭ ಪತಿ-ಪತ್ನಿಯರ ನಡುವಿನ ಭಿನಾಭಿಪ್ರಾಯಗಳು ತಾರಕಕ್ಕೇರಿದ್ದವು ಎನ್ನುತ್ತಾರೆ ಮನಃಶಾಸ್ತ್ರಜ್ಞ ಡಾ.ರಾಕೇಶ ಪಾಸ್ವಾನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X