ಕುಂದಾಪುರದಲ್ಲಿ ಪಿಎಫ್ಐ ಪ್ರತಿಭಟನೆ
ಕುಂದಾಪುರ, ಡಿ.15: ಉಪ್ಪಿನಂಗಡಿಯಲ್ಲಿ ಪ್ರತಿಭಟನ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಕ್ರಮ ಖಂಡಿಸಿ ಪಿಎಫ್ಐ ಕುಂದಾಪುರ ವತಿಯಿಂದ ಬುಧವಾರ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಪಿಎಫ್ಐ ಕುಂದಾಪುರ ತಾಲೂಕಿನ ಕಾರ್ಯದರ್ಶಿ ಲಿಯಾಕತ್ ಕಂಡ್ಲೂರು ಮಾತನಾಡಿದರು. ಈ ಸಂದರ್ಭದಲ್ಲಿ ಪಿಎಫ್ಐ ಮುಖಂಡರಾದ ಖಲೀಲ್ ಗಂಗೊಳ್ಳಿ, ಸೌಹುದು ಶಿರೂರು ಮೊದಲಾದವರು ಉಪಸ್ಥಿತರಿದ್ದರು.
Next Story





