Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಾಣಾರ್ಪಣೆ ಮಾಡಿದ ಈ ಧೀರ: ಸಮಸಮಾಜದ...

ಪ್ರಾಣಾರ್ಪಣೆ ಮಾಡಿದ ಈ ಧೀರ: ಸಮಸಮಾಜದ ಕನಸುಗಾರ

ಇಂದು ಅಶ್ಫಕುಲ್ಲಾ ಖಾನ್ ಹುತಾತ್ಮ ದಿನ

ಎಲ್ದೋ ಹೊನ್ನೇಕುಡಿಗೆಎಲ್ದೋ ಹೊನ್ನೇಕುಡಿಗೆ19 Dec 2021 10:48 AM IST
share
ಪ್ರಾಣಾರ್ಪಣೆ ಮಾಡಿದ ಈ ಧೀರ: ಸಮಸಮಾಜದ ಕನಸುಗಾರ

ಭಾರತ ಸ್ವಾತಂತ್ರವನ್ನು ಗಳಿಸಿದ ನಂತರ ಬಿಳಿಯರ ಆಡಳಿತದ ಜಾಗದಲ್ಲಿ, ಬಡವ ಶ್ರೀಮಂತ ಜಮಿನ್ದಾರ ಕೂಲಿಕಾರ ಎಂಬ ಭೇದಗಳನ್ನು ಜೀವಂತವಾಗಿಟ್ಟುಕೊಂಡು ಸ್ವದೇಶಿ ಶೋಷಕರು ಅಧಿಕಾರವನ್ನು ಕೈವಶಮಾಡಿಕೊಂಡರೆ, ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ದೇವರೇ ನಮ್ಮ ಮಾತೃಭೂಮಿಯಲ್ಲಿ ಸಮಾನತೆ ಬರುವವರೆಗೂ ನಮಗೆ ಅಂತಹ ಸ್ವಾತಂತ್ರ ಕೊಡಬೇಡ. ಈ ವಿಷಯದಲ್ಲಿ ಯಾರಾದರೂ ಸಮಾಜವಾದವನ್ನು ಬೋಧಿಸುತ್ತಿದ್ದೇನೆ ಎಂದು ನನ್ನನ್ನು ದೂಷಿಸಿದರೆ ನಾನವರಿಗೆ ಹೇಳುತ್ತೇನೆ ನನ್ನನ್ನು ಒಬ್ಬ ಸಮಾಜವಾದಿ ಎಂದು ಕರೆದುಕೊಳ್ಳಲು ನನಗೆ ಹೆದರಿಕೆಯಿಲ್ಲ.

ಹೀಗೆಂದು ತಾನು ಗಲ್ಲುಗಂಬವೇರುವ ಕೆಲವೇ ದಿನಗಳ ಹಿಂದೆ ದೇಶವಾಸಿಗಳಿಗೆ ಸಂದೇಶ ನೀಡಿದ ಅಶ್ಫಕುಲ್ಲಾ ಖಾನ್‌ವಿದ್ಯಾರ್ಥಿಯಾಗಿದ್ದಾಗಲೇ ಸ್ವತಂತ್ರ ಸಂಗ್ರಾಮದ ಕಡೆಗೆ ಆಕರ್ಷಿತರಾಗಿದ್ದವರು. ಉರ್ದು ಕಾವ್ಯವೆಂದರೆ ಖಾನ್‌ಗೆ ಅಚ್ಚುಮೆಚ್ಚು. ವಾರಸಿ ಇಲ್ಲವೇ ಹಜರತ್ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು. ಅಪ್ರತಿಮ ಕ್ರಾಂತಿಕಾರಿ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಕೂಡ ಉರ್ದು ಕವಿತೆಗೆ ಹೆಸರಾಗಿದ್ದವರು ಹೀಗಾಗಿ ರಾಮ್ ಪ್ರಸಾದರ ವಿಚಾರಧಾರೆ ಕಡೆಗೆ ಆಕರ್ಷಿತರಾದ ಖಾನ್ ರಾಮಪ್ರಸಾದ್‌ರನ್ನು ಭೇಟಿ ಮಾಡಲು ಪ್ರಯತ್ನಿಸಿ ಸಫಲರಾದರು. ದಿನ ಕಳೆದಂತೆ ಅವರ ಬಾಂಧವ್ಯ ಬಲಗೊಳ್ಳುತ್ತಾ ಸಾಗಿತು.

ಈ ನಡುವೆ ಚೌರಿ ಚೌರ ಹಿಂಸಾತ್ಮಕ ಘಟನೆಯ ಕಾರಣ ನೀಡಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ವಾಪಸ್ ತೆಗೆದುಕೊಂಡರು. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಖಾನ್ ನಿರಾಶರಾದರು. ಮುಂದೆ ಭಾರತಕ್ಕೆ ಸ್ವಾತಂತ್ರವನ್ನು ಗಳಿಸಿಕೊಡಲು ಕ್ರಾಂತಿಕಾರಿ ಮಾರ್ಗವೇ ಸರಿ ಎಂದು ತೀರ್ಮಾನಿಸಿ ರಾಮ್ ಪ್ರಸಾದ್ ರವರು ತಲೆಯಾಳಗಿದ್ದ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಶಿಯೇಶನ್(H R A)

ಸೇರಲು ತವಕಿಸಿದರು. ದಿನಕಳೆದಂತೆ ಖಾನ್ ರವರ ಸ್ವಾತಂತ್ರಕ್ಕಾಗಿನ ಹಂಬಲ ಪೊಳ್ಳಲ್ಲವೆಂದು ರಾಮ್ ಪ್ರಸಾದರಿಗೆ ಮನವರಿಕೆಯಾಗಿ ಸಂಘಟನೆಗೆ ಸೇರಿಸಿಕೊಂಡರು ನಂತರ ಖಾನ್ ರಾಮ್ ಪ್ರಸಾದ್‌ರ ನಂಬಿಕೆಯ ಬಂಟನಾದ ಮತ್ತು ಸ್ನೇಹಿತನಾದ.

ಒಮ್ಮೆ ಖಾನ್ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದರು ಅವರು ಆಗಾಗ ರಾಮ್ ರಾಮ್ ಎಂದು ಕನವರಿಸುತ್ತಿದ್ದದನ್ನು ಆತನ ತಂದೆತಾಯಿ ಕಂಡು ಮರುಗಿ ರಾಮ್ ಪ್ರಸಾದರನ್ನು ಕರೆಸಿದರು. ಅವರನ್ನು ಹಾಸಿಗೆಯ ಮೇಲೆ ಕಂಡು ರಾಮ್ ಪ್ರಸಾದ್ ತಬ್ಬಿಕೊಂಡು ಬಿಟ್ಟರು. ಆಮೇಲೆ ಕನವರಿಸುವುದನ್ನು ಖಾನ್ ನಿಲ್ಲಿಸಿದರು. ಬ್ರಿಟಿಷ್ ಸರಕಾರದ ಒಡೆದು ಆಳುವ ನೀತಿಯ ಆ ಕಾಲದಲ್ಲಿ ಒಬ್ಬ ಬ್ರಾಹ್ಮಣ ಮತ್ತು ಮುಸ್ಲಿಮ್ ಹುಡುಗನ ಮಧ್ಯದ ಸ್ನೇಹ ಅದ್ವಿತೀಯವಾದುದು.

HRA ಬ್ರಿಟಿಷ್ ಪ್ರಭುತ್ವದ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದಿದ್ದ ಗೆ ಹಣಕಾಸಿನ ಮುಗ್ಗಟ್ಟು ಎದುರಾಯಿತು ಹೀಗಾಗಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ರಾಮಪ್ರಸಾದರು ನ ಕೇಂದ್ರ ಸಮಿತಿಯ ತುರ್ತು ಸಭೆ ಕರೆದರು ಮುಂದಿನ ಯೋಜನೆ ಸಿದ್ಧವಾಯಿತು. ಲಕ್ನೊದಿಂದ ಲಾಹೋರಿಗೆ ಹೋಗುತ್ತಿದ್ದ ರೈಲಿನಲ್ಲಿ ಬ್ರಿಟಿಷರು ದುಡ್ಡು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಆ ರೈಲನ್ನು ಲೂಟಿ ಮಾಡಬೇಕೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಖಾನ್‌ರಿಗೆ ಈ ವಿಚಾರ ಒಪ್ಪಿಗೆಯಾಗಲಿಲ್ಲ.

ಆ ಬಳಿಕ ತನ್ನ ಪ್ರಾಣ ಸ್ನೇಹಿತ ರಾಮ್‌ಪ್ರಸಾದ್ ಅವರು ಖಾನ್‌ರಿಗೆ ಮನವರಿಕೆ ಮಾಡುತ್ತಾರೆ. ‘ಅಶ್ಫಾಕ್...ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸ್ವತ್ತನ್ನು. ಅವರು ನಮ್ಮಿಂದ ಕೊಳ್ಳೆಹೊಡೆದ ಅತಿಸಣ್ಣ ಅಂಶವನ್ನು ಮಾತ್ರ. ಅದೂ ಯಾಕಾಗಿ? ನಮ್ಮ ಸ್ವಂತ ಲಾಭಕ್ಕಾಗಿಯೇ? ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ. ಇದರಲ್ಲಿ ಪುಣ್ಯವಲ್ಲದೆ ಅಪರಾಧವೇನಿದೆ? ‘ಇದನ್ನು ಆಳವಾಗಿ ಚಿಂತಿಸಿದ ನಂತರ ಕೇಂದ್ರ ಸಮಿತಿಯ ಸಾಮೂಹಿಕ ನಿರ್ಧಾರವನ್ನು ಖಾನ್ ಮನಸ್ಸಾರೆ ಒಪ್ಪಿಕೊಂಡದ್ದು ಮಾತ್ರವಲ್ಲ ‘ಈ ದೇಶಕ್ಕಾಗಿ ನಮ್ಮ ಸಂಘಟನೆಯ ಮೊದಲ ಹುತಾತ್ಮ ನಾನೇ ಆಗಲಿದ್ದೇನೆ’ ಎಂದು ಶಪಥಗೈದರು.

ಇಡೀ ಕಾರ್ಯಾಚರಣೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡ ಖಾನ್ ಆ ರೈಲು ಕಾಕೋರಿ ನಿಲ್ದಾಣ ತಲುಪಿದಾಗ ಪ್ರಯಾಣಿಕರ್ಯಾರಿಗೂ ತೊಂದರೆಯಾಗದಂತೆ ಅಂದುಕೊಂಡ ಕಾರ್ಯವನ್ನು ಇತರ ಕ್ರಾಂತಿಕಾರಿಗಳೊಂದಿಗೆ ಸೇರಿ ಮುಗಿಸಿದರು. ಕಾರ್ಯಾಚರಣೆಯ ನಂತರ ಖಾನ್ ಹಾಗೂ ಸಂಗಡಿಗರು ತಪ್ಪಿಸಿಕೊಂಡರು. ಘಟನೆಯ ನಂತರ ಹಲವಾರು ತಿಂಗಳುಗಳ ಕಾಲ ಮಾರುವೇಷದಲ್ಲಿ ತಲೆಮರೆಸಿಕೊಂಡಿದ್ದರು. ಮುಂದೆ ವಿದೇಶಕ್ಕೆ ಹೋಗಿ ಇಂಜಿನಿಯರಿಂಗ್ ಕಲಿತು ಬ್ರಿಟಿಷರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಕಲಿಯಬೇಕೆಂದುಕೊಂಡಿದ್ದರು ಆದರೆ ಸ್ನೇಹಿತನೊಬ್ಬನ ನಂಬಿಕೆ ದ್ರೋಹದಿಂದ ಬ್ರಿಟಿಷ್ ಪೊಲೀಸರ ಮೋಸ್ಟ್ ವಾಂಟೆಡ್ ಖಾನ್ ಸೆರೆಯಾಗಬೇಕಾಯಿತು. ಪೊಲೀಸರ ವಶದಲ್ಲಿದ್ದ ಖಾನ್‌ರನ್ನು ಜೈಲಿಗೆ ಕರೆದೊಯ್ಯುತ್ತಿದ್ದಾಗ ಅವರನ್ನು ನೋಡಲೆಂದೇ ಸಾವಿರಾರು ಜನ ನೆರೆದಿದ್ದರು! ವಿಚಾರಣೆ ಎಂಬ ನಾಟಕ ನಡೆದು ಖಾನ್‌ರಿಗೆ ಗಲ್ಲು ಶಿಕ್ಷೆ ಘೋಷಿಸಲಾಯಿತು. ಅದಾಗಲೇ ಬ್ರಿಟಿಷರಿಗೆ ಸೆರೆಸಿಕ್ಕಿದ್ದ ರಾಮ್ ಪ್ರಸಾದರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು. 1927ರ ಡಿಸೆಂಬರ್ 19ರಂದು ಫೈಜಾಬಾದ್ ಜೈಲಿನಲ್ಲಿ ತಮ್ಮ ಮುಖಕ್ಕೆ ಮುಸುಕನ್ನು ತಾವೇ ಧರಿಸಿಕೊಂಡು ಕೇವಲ 27 ವರ್ಷದ ಖಾನ್ ನಗುನಗುತ್ತಾ ಗಲ್ಲಿಗೇರಿದರು. ಅದೇ ದಿನ ರಾಮ್ ಪ್ರಸಾದರನ್ನೂ ಗಲ್ಲಿಗೇರಿಸಲಾಯಿತು. ಹೀಗೆ ಪ್ರಾಣ ಸ್ನೇಹಿತರಿಬ್ಬರೂ ಸಾವಿನಲ್ಲೂ ಜೊತೆಯಾದರು. ಇತರ ಕ್ರಾಂತಿಕಾರಿಗಳಾದ ರೋಷನ್ ಸಿಂಗ್, ರಾಜೇಂದ್ರ ಲಾಹಿರಿಯನ್ನೂ ಗಲ್ಲಿಗೇರಿಸಲಾಯಿತು. ಉಳಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು.

ತಾವು ಜೈಲಿನಲ್ಲಿದ್ದಾಗ ಖಾನ್ ದೇಶವಾಸಿಗಳನ್ನು ಉದ್ದೇಶಿಸಿ ಹೀಗೆಂದಿದ್ದರು ‘ಹಿಂದೂಸ್ಥಾನದ ಸಹೋದರರೇ ನೀವು ಯಾವುದೇ ಧರ್ಮದವರಾಗಿರಲಿ ದೇಶದ ಕೆಲಸದಲ್ಲಿ ಭಾಗಿಗಳಾಗಿ, ವ್ಯರ್ಥವಾಗಿ ನಿಮ್ಮಾಳಗೆ ಜಗಳವಾಡಬೇಡಿ ದಾರಿ ಬೇರೆಬೇರೆಯದ್ದಾಗಿರಬಹುದು ಆದರೆ ಎಲ್ಲರ ಉದ್ದೇಶವೂ ಒಂದೇ. ನಾವು ಒಂದೇ ಉದ್ದೇಶವನ್ನು ಪೂರೈಸಲೋಸುಗ ಎಲ್ಲಾ ಕಾರ್ಯಗಳನ್ನು ಮಾಡುತ್ತಿರುವಾಗನಮ್ಮಲ್ಲೇ ಈ ಒಳ ಜಗಳವೇಕೆ ನೀವೆಲ್ಲರೂ ಒಂದಾಗಿ ದೇಶವನ್ನು ಸ್ವತಂತ್ರಗೊಳಿಸಿ.ಏಳು ಕೋಟಿ ಮುಸಲ್ಮಾನರಲ್ಲಿ ದೇಶಕ್ಕಾಗಿ ಗಲ್ಲಿಗೆೇರುವವರಲ್ಲಿ ನಾನು ಮೊದಲನೆ ಯವನು ಎಂಬುದನ್ನು ನೆನೆಸಿಕೊಂಡರೆ ನನಗೆ ಬಹಳಷ್ಟು ಹೆಮ್ಮೆಯೆನಿಸುತ್ತದೆ.

ಒಂದೊಮ್ಮೆ ಯುವಕ ಖಾನ್ ಸೋವಿಯತ್ ರಶ್ಯದ ಮಹಾನ್ ಕ್ರಾಂತಿಕಾರಿ ಕಾರ್ಮಿಕ ನಾಯಕ ಕಾಮ್ರೇಡ್ ಲೆನಿನ್‌ಗೆ ಪತ್ರ ಬರೆಯಲು ಬಯಸಿದ್ದರು. ಅವರನ್ನು ಗಲ್ಲಿಗೇರಿಸುವ ದಿನ ಅವರ ಸಂದೇಶವನ್ನು ಬ್ರಿಟಿಷರು ಜೈಲಿನಿಂದ ಹೊರಸಾಗಿಸಿ ಬಿಟ್ಟಿದ್ದರು. ಭಾರತೀಯ ಸಮ ಸಮಾಜವನ್ನು ಕಟ್ಟಲು ಸದಾ ಹಾತೊರೆಯುತ್ತಿದ್ದ ಖಾನ್ ಹೀಗೆನ್ನುತ್ತಿದ್ದರು ‘ಬಡವರು ಸಂತಸದಿಂದ ಸಲೀಸಾಗಿ ಬಾಳುವೆ ಮಾಡಲು ಸಾಧ್ಯವಿರುವಂತಹ ಸ್ವಾತಂತ್ರ ಹಿಂದೂಸ್ಥಾನಕ್ಕೆ ಬೇಕಿದೆ.

ವರ್ಕ್ ಶಾಪಿನಲ್ಲಿ ಕೆಲಸ ಮಾಡುವ ಮೆಕಾನಿಕ್ ಅಬ್ದುಲ್ಲಾ, ಚಪ್ಪಲಿ ಹೊಲಿಯುವ ಧನಿಯಾ ಹಾಗೂ ಸಾಧಾರಣ ರೈತರು ಲಕ್ನೊದ ನವಾಬರ ಮನೆಯಲ್ಲಿ ಗಣ್ಯರ ಮುಂದಿನ ಸಾಲುಗಳ ಕುರ್ಚಿಗಳಲ್ಲಿ ಎದಿರುಬದಿರಾಗಿ ಕುಳಿತುಕೊಳ್ಳುವ ದಿನಗಳು ಬರಬೇಕೆಂದು ಆಶಿಸುವೆ. ಕಮ್ಯುನಿಸ್ಟ್ಟ್‌ರೊಂದಿಗೆ ನನ್ನ ಸಹಮತವಿದೆ ಬಡ ರೈತರು ಮತ್ತು ಅಸಹಾಯಕ ಕಾರ್ಮಿಕರಿಗಾಗಿ ನನ್ನ ಹೃದಯ ಸದಾ ಅಳುತ್ತಿರುತ್ತದೆ.

ಕಾಕೋರಿ ದರೋಡೆ ಪ್ರಕರಣದ ನಂತರ ತಲೆಮರೆಸಿಕೊಂಡು ತಿರುಗುತ್ತಿದ್ದಾಗ ಇಂತಹ ಕುಟುಂಬಗಳೊಂದಿಗೆ ವಾಸವಿದ್ದೆ ಅವರ ಬವಣೆ ನನ್ನ ಕಣ್ಣುಗಳನ್ನು ತೇವವಾಗಿಸಿತು. ನಮ್ಮ ಪೇಟೆ ಪಟ್ಟಣಗಳು, ನಗರಗಳು ಥಳಗುಟ್ಟುವುದು ಇವರಿಂದಾಗಿಯೇ. ನಮ್ಮ ಗಿರಣಿಗಳು ಕಾರ್ಖಾನೆಗಳು ನಡೆಯುವ ಹಿಂದಿನ ಶ್ರಮ ಇವರದ್ದೆ. ಪ್ರಪಂಚದ ಪ್ರತಿ ಕಾಮಗಾರಿಯ ಹಿಂದೆ ಇರುವುದು ಇವರದ್ದೇ ಬೆವರು. ಬೆಳೆಯುವ ಉತ್ಪಾದಿಸುವ ಈ ಶ್ರಮಿಕರನ್ನು ದುಃಖ ದುಸ್ಥಿತಿ ಗಳು ಬಿಡದೆ ಬೆಂಬತ್ತಿವೆ. ಅವರ ಈ ಕಷ್ಟ ಕಣ್ಣೀರಿನ ಮೂಲ ಕಾರಣ ಬಿಳಿ ತೊಗಲಿನ ಒಡೆಯರು ಮತ್ತು ಅವರ ಏಜೆಂಟರು. ಹಳ್ಳಿಹಳ್ಳಿಗೆ ಹೋಗಿ ಗಿರಣಿ ಕಾರ್ಖಾನೆಗಳಿಗೆ ತೆರಳಿ ಅವರನ್ನು ಅಧ್ಯಯನ ಮಾಡಬೇಕು ಮತ್ತು ಅವರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಬೇಕು.

ಎಲ್ಲಾ ಬಗೆಯ ಪರಕೀಯ ಆಳ್ವಿಕೆ ನ್ಯಾಯ ಬಾಹಿರ. ಅಂಚಿನಲ್ಲಿ ಜೋತು ಬಿದ್ದು ಜೀವ ಹಿಡಿದ ದೀನ ದರಿದ್ರರ ಹಕ್ಕುಗಳನ್ನು ಮಾನ್ಯ ಮಾಡದಿರುವ, ಬಂಡವಾಳಶಾಹಿಗಳು ಮತ್ತು ಜಮೀನುದಾರರ ಹಿತವನ್ನು ಕಾಪಾಡುವ, ಕಾರ್ಮಿಕರು ಮತ್ತು ರೈತರ ಸಮಾನ ಭಾಗವಹಿಸುವಿಕೆ ಇಲ್ಲದಿರುವ ಯಥಾಸ್ಥಿತಿವಾದಿ ತಾರತಮ್ಯಗಳು ಮತ್ತು ವಿಶೇಷಾಧಿಕಾರಗಳನ್ನು ಕಾಪಾಡಲು ಕಾಯ್ದೆ ಕಾನೂನು ಮಾಡುವ ಯಾವುದೇ ಸರಕಾರ ಕೂಡ ನ್ಯಾಯಬಾಹಿರ. ಎಂಬ ಖಾನ್ ಮಾತುಗಳಲ್ಲಿ ಅಪ್ಪಟ ಮಾನವೀಯ ಮೌಲ್ಯಗಳು ಹುದುಗಿವೆ. ಹಿಂದೂ-ಮುಸ್ಲಿಮರನ್ನು ಒಡೆವ ಪಿತೂರಿಯ ಕುರಿತು ಅವರು ಮಾತನಾಡಿದ್ದರು. ಅಂತಹವರೆ ದೇಶದ ನಿಜ ಶತ್ರುಗಳು ಎಂದು ಬಣ್ಣಿಸಿದ್ದರು. ಭಗತ್ ಸಿಂಗರಂತೂ ಖಾನ್ ಮತ್ತು ರಾಮ್ ಪ್ರಸಾದರ ಬಾಂಧವ್ಯವನ್ನು ಕಂಡು ‘ಈ ಐಕ್ಯತೆಯೇ ನಮ್ಮ ಸ್ವಾತಂತ್ರ ಸಂಗ್ರಾಮದ ಸ್ಫೂರ್ತಿಯಾಗಬೇಕು’ ಎಂದಿದ್ದರು.

ನಮ್ಮ ಸ್ವಾತಂತ್ರ ಸಂಗ್ರಾಮದ ಮಿನುಗುತಾರೆಗಳೆನಿಸಿಕೊಂಡ ಕಾಕೋರಿ ಹುತಾತ್ಮರ ಮರಣ ದಿನವನ್ನು ನಾವು ಸ್ಮರಿಸುವಾಗ ಅವರೆಲ್ಲರ ನನಸಾಗದ ಕನಸಿನ ಭಾರತವನ್ನು ನನಸು ಮಾಡಲು ಮುಂದೊಡಗುವುದೇ ನಾವವರಿಗೆ ನೀಡಬಹುದಾದ ಗರಿಷ್ಠ ಗೌರವ!

share
ಎಲ್ದೋ ಹೊನ್ನೇಕುಡಿಗೆ
ಎಲ್ದೋ ಹೊನ್ನೇಕುಡಿಗೆ
Next Story
X