ದತ್ತ ಪೀಠ ಸಂಬಂಧ ವಾಗ್ವಾದ; ವಿಹಿಂಪ ಮುಖಂಡಗೆ ಮಾಜಿ ಸಚಿವರಿಂದ ಹಲ್ಲೆ ಯತ್ನ: ಆರೋಪ

ತುಮಕೂರು: ನಗರದಿಂದ ಚಿಕ್ಕಮಗಳೂರು ದತ್ತ ಪೀಠಕ್ಕೆ ಯಾತ್ರೆ ತೆರಳುವ ಸಂಬಂಧ ಉಂಟಾದ ವಾಗ್ವಾದ ತಾರಕ್ಕೇರಿ, ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರ ಮೇಲೆ ಮಾಜಿ ಸಚಿವರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನಲ್ಲಿ ದತ್ತ ಮಾಲೆ ಅಭಿಯಾನದ ಬಳಿಕ, ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಯಾವ ಮಾರ್ಗದಲ್ಲಿ ಯಾತ್ರೆ ಸಾಗಬೇಕು ಎನ್ನುವ ವಿಚಾರಕ್ಕಾಗಿ ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಜಿ.ಕೆ.ಶ್ರೀನಿವಾಸ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ವಾಗ್ವಾದ ನಡೆದಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಯಾತ್ರೆ ನಡೆಸಬೇಕು ಎಂದು ತಿಳಿಸಿದ್ದು, ವಿಶ್ವ ಹಿಂದೂ ಪರಿಷತ್ ಮುಖಂಡ ಜಿ.ಕೆ.ಶ್ರೀನಿವಾಸ್ ಮೆರವಣಿಗೆ ನಡೆಸೋದು ಬೇಡ, ನೇರವಾಗಿ ಯಾತ್ರೆ ಹೋಗೋಣ ಎಂದು ತಿಳಿಸಿದ್ದಾರೆ.
ಈ ವಿಚಾರ ತುಮಕೂರಿನ ಟೌನ್ ಹಾಲ್ ಬಳಿಯಲ್ಲಿ ತಾರಕಕ್ಕೇರಿದೆ. ಈ ಸಂದರ್ಭದಲ್ಲಿಯೇ ಮಾತಿಗೆ ಮಾತು ಬೆಳೆದು, ಸಿಟ್ಟಾದಂತ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ವಿಹೆಚ್.ಪಿ ಮುಖಂಡ ಜಿ.ಕೆ.ಶ್ರೀನಿವಾಸ್ ತಳ್ಳಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ.





