ಬಂಟ್ವಾಳ: ಉದ್ಯಮಿ ಆತ್ಮಹತ್ಯೆ
![ಬಂಟ್ವಾಳ: ಉದ್ಯಮಿ ಆತ್ಮಹತ್ಯೆ ಬಂಟ್ವಾಳ: ಉದ್ಯಮಿ ಆತ್ಮಹತ್ಯೆ](https://www.varthabharati.in/sites/default/files/images/articles/2021/12/19/318269-1639935736.jpeg)
ಬಂಟ್ವಾಳ, ಡಿ.19: ಸಾಲ ಬಾಧೆ ಎಂಬ ಕಾರಣಕ್ಕಾಗಿ ಡೆತ್ ನೋಟ್ ಬರೆದು ಉದ್ಯಮಿಯೊಬ್ಬರು ಲಾಡ್ಜ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಕನಪಾದೆ ನಿವಾಸಿ ಕೃಷ್ಣ ಟಿ. ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನ ಕೃಷ್ಣ ಪ್ರೈಮ್ ಹೋಟೆಲ್ ನ ರೂಮ್ ನಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಇವರು ಐಸ್ ಕ್ರೀಂ ಸಂಸ್ಥೆಯೊಂದರ ಮಾಲಕರಾಗಿದ್ದು ಜೊತೆಗೆ ಕ್ಲಬ್ ಕೂಡಾ ನಡೆಸುತ್ತಿದ್ದು, ಉದ್ಯಮದಲ್ಲಿ ನಷ್ಟವಾಗಿದ್ದು ಸಾಲದ ಬಾಧೆಯಿಂದ ಬಳಲುತ್ತಿದ್ದರು ಎಂಬ ಕಾರಣವನ್ನು ಚೀಟಿಯಲ್ಲಿ ಬರೆದು ಕಿಸೆಯಲ್ಲಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಎಸ್ಸೈ ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story