ಹೇರಾಡಿ ಬಳಿ ಕಾರು ಪಲ್ಟಿ: ಓರ್ವ ಮೃತ್ಯು: ಮಹಿಳೆಗೆ ಗಾಯ
![ಹೇರಾಡಿ ಬಳಿ ಕಾರು ಪಲ್ಟಿ: ಓರ್ವ ಮೃತ್ಯು: ಮಹಿಳೆಗೆ ಗಾಯ ಹೇರಾಡಿ ಬಳಿ ಕಾರು ಪಲ್ಟಿ: ಓರ್ವ ಮೃತ್ಯು: ಮಹಿಳೆಗೆ ಗಾಯ](https://www.varthabharati.in/sites/default/files/images/articles/2021/12/21/318500-1640102864.jpg)
ಬ್ರಹ್ಮಾವರ, ಡಿ.21: ಕಾರೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಹೇರಾಡಿ ಗ್ರಾಮದ ಕೂಡ್ಲಿ ದುರ್ಗಾಪರಮೇಶ್ವರಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಕ್ರಾಸ್ ಸಮೀಪ ಮಂಗಳವಾರ ನಡೆದಿದೆ.
ಮೃತರನ್ನು ಕಾರಿನಲ್ಲಿದ್ದ ಯು.ಬಿ.ಪ್ರಭಾಕರ್ ರಾವ್ ( 80) ಎಂದು ಗುರುತಿಸಲಾಗಿದೆ.
ಮಂದಾರ್ತಿ-ಬಾರ್ಕೂರು ಮುಖ್ಯ ರಸ್ತೆಯಲ್ಲಿ ಬಾರ್ಕೂರು ಕಡೆಗೆ ಹೋಗುತ್ತಿದ್ದ ಕಾರು, ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಾಡಿಗೆ ನುಗ್ಗಿ, ಅಲ್ಲಿದ್ದ ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತ್ತೆನ್ನಲಾಗಿದೆ.
ಇದರಿಂದ ಕಾರು ಜಖಂಗೊಂಡಿದ್ದು, ಇದರ ಪರಿಣಾಮ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಪ್ರಭಾಕರ್ ರಾವ್ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇವರೊಂದಿಗೆ ಕುಳಿತಿದ್ದ ಇವರ ಪತ್ನಿ ಉಷಾ ಪಿ.ರಾವ್ ತೀವ್ರವಾಗಿ ಗಾಯ ಗೊಂಡಿದ್ದಾರೆ.
ಅದೇ ರೀತಿ ಕಾರು ಚಾಲಕ ವಿಶ್ವ ಪ್ರಸಾದ್ ರಾವ್ ಮತ್ತು ಮುಂದಿನ ಸೀಟಿನಲ್ಲಿ ಕುಳಿತಿದ್ದ ಶಿವ ಪ್ರಸಾದ್ ರಾವ್ ಎಂಬವರಿಗೆ ಯಾವುದೇ ಗಾಯ ಗಳಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.