ವಂ.ಆಲ್ಫ್ರೆಡ್ ರೋಚ್ರನ್ನು ಪುನೀತ ಪದವಿಗೇರಿಸುವ ಪ್ರಕ್ರಿಯೆಗೆ ಅನುಮತಿ

ಉಡುಪಿ, ಡಿ.24: ಬ್ರಹ್ಮಾವರ ತಾಲೂಕಿನ ಬಾರಕೂರು ಮೂಲದ ವಂ.ಗುರು ಆಲ್ಫ್ರೆಡ್ ರೋಚ್ ಅವರ ಸಾತ್ವಿಕ ಜೀವನ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್ನ ‘ಸಂತರು ಮತ್ತು ಪುನೀತರನ್ನಾಗಿ ಘೋಸುವ ವಿಭಾಗ’ ವು ವಂ.ಆಲ್ಫ್ರೆಡ್ ಗುರು ರೋಚ್ರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಿದೆ.
ಕಪುಚಿನ್ ಸಭೆಯ ಧರ್ಮಗುರು ವಂದನೀಯ ಗುರು ಆಲ್ಫ್ರೆಡ್ ರೋಚ್ 1924ರಲ್ಲಿ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಹುಟ್ಟಿ, ಬೆಳೆದು ಕ್ರೈಸ್ತ ಧರ್ಮಗುರುವಾಗಿ ಕರ್ನಾಟಕದಾದ್ಯಂತ ಸೇವೆ ಸಲ್ಲಿಸಿದರು. ಬ್ರಹ್ಮಾವರದಲ್ಲೇ 16 ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ 1996ರಲ್ಲಿ ದೈವಾಧೀನರಾದರು.
ಅವರ ಸಾತ್ವಿಕ ಜೀವನ, ಜನರಿಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ, ಬಡ ಜನರ ಅಭಿವೃದ್ಧಿಗಾಗಿ ಅವರು ಮಾಡಿದ ಸಹಾಯ, ಇನ್ನಿತರ ದಯಾಕಾರ್ಯ ಗಳಿಂದ ಅವರನ್ನು ಆಧ್ಯಾತ್ಮಿಕತೆ ಹಾಗೂ ಜನಸೇವೆಯ ಮಾದರಿಯಾಗಿ ಪರಿಗಣಿಸಿ ಜಾತಿ-ಮತ ಬೇಧಲ್ಲದೆ ಜನರು ಗೌರಸಿದರು. ಅವರ ನಿಧನರಾಗಿ 25 ವರ್ಷಗಳು ಕಳೆದರೂ, ಅವರನ್ನು ಪುನೀತ ಪದವಿಗೆ ಏರಿಸಬೇಕೆಂಬ ಜನರ ಬೇಡಿಕೆಯು ದಿನೇ ದಿನೇ ಹೆಚ್ಚಾಗ ತೊಡಗಿತು. ಅದರಂತೆ ವ್ಯಾಟಿಕನ್ನ ‘ಸಂತರು ಮತ್ತು ಪುನೀತರನ್ನಾಗಿ ಘೋಸುವ ವಿಭಾಗ’ವು ವಂ.ಆಲ್ಫ್ರೆಡ್ ಗುರು ರೋಚ್ರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಿದೆ. ಇದೊಂದು ಅತೀ ಸಂಕೀರ್ಣ ಹಾಗೂ ಬಹಳ ಕಾಲ ತಗುಲುವ ಪ್ರಕ್ರಿಯೆಯಾಗಿದ್ದು, ಕಥೋಲಿಕ ಧರ್ಮ ಸಭೆಯ ನೇಮ-ನಿಯಮಗಳ ಪ್ರಕಾರ ನಡೆಯಲಿದೆ.
ಈ ಪ್ರಕ್ರಿಯೆಯ ಅಂತ್ಯದಲ್ಲಿ, ಮೊದಲು ’ಪುನೀತ’, ಅನಂತರ ಕೊನೆಯದಾಗಿ ’ಸಂತ’ ಪದವಿಯನ್ನು ಪೋಪ್ ಜಗದ್ಗುರುಗಳು ದಯಪಾಲಿಸಲಿದ್ದಾರೆ. ಈ ಸಂಕೀರ್ಣ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿಯು ಜೀವಿಸಿದ ಪರಿಸರದಲ್ಲಿ ನಡೆಸಲಾಗುವುದು.
ವಂ.ಗುರು ಆಲ್ಫ್ರೆಡ್ ರೋಚ್ ಉಡುಪಿ ಪರಿಸರದವರು ಆಗಿರುವುದರಿಂದ ಉಡುಪಿ ಧರ್ಮಪ್ರಾಂತದ ಮಟ್ಟದ ಪ್ರಕ್ರಿಯೆಯು ಡಿ.27ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಪತ್ರ ಕುಟುಂಬ ದೇವಾಲಯದಲ್ಲಿ ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಲೋಬೊ ಚಾಲನೆಯನ್ನು ನೀಡಲಿದ್ದಾರೆ.
ಉಡುಪಿ ಜಿಲ್ಲೆಯ ಪೂಜನೀಯ ವಂ.ಗುರು ಆಲ್ಫ್ರೆಡ್ ರೋಚ್ರವರಿಗೆ ’ಪುನೀತ ಪದವಿ’ಯನ್ನು ದಯಪಾಲಿಸುವ ಕಥೋಲಿಕ ಧರ್ಮಸಭೆಯ ಈ ಪ್ರಕ್ರಿಯೆಯ ಆರಂಭದಿಂದ ವಂ.ಗುರು ಆಲ್ಫ್ರೆಡ್ ರೋಚ್ರವರ ಅಭಿಮಾನಿ ಗಳು ಹರ್ಷ ವ್ಯಕ್ತಪಡಿಸಿದ್ದಾರೆ.







