Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ...

ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ಹತ್ಯಾಕಾಂಡ ‘ಕಿಲ್ವೇನ್ಮಣಿ ಹತ್ಯಾಕಾಂಡ’

ಈ ನೆಲದ ಮೇಲೆ ದಲಿತರ ರಕ್ತ ಹರಿಯುತ್ತಲೇ ಇದೆ...

ನರಸಿಂಹಮೂರ್ತಿ ವಿ.ಎಲ್ನರಸಿಂಹಮೂರ್ತಿ ವಿ.ಎಲ್28 Dec 2021 10:08 AM IST
share
ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ಹತ್ಯಾಕಾಂಡ ‘ಕಿಲ್ವೇನ್ಮಣಿ ಹತ್ಯಾಕಾಂಡ’

ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ. ಹಾಗಾಗಿಯೇ ಕಿಲ್ವೇನ್ಮಣಿ, ಕರಂಚೇಡು, ಚಂಡೂರು, ಬೆಲ್ಚಿ, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಮಾಲಪಲ್ಲಿ, ಹಾಥರಸ್ ಹತ್ಯಾಕಾಂಡಗಳು ಒಂದಾದಮೇಲೊಂದರಂತೆ ನಡೆಯುತ್ತಲೇ ಇವೆ...

ಐವತ್ತೆರಡು ವರ್ಷಗಳ ಹಿಂದೆ ಅಂದರೆ, ಡಿಸೆಂಬರ್ 25, 1968ರಿಂದ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ಹತ್ಯಾಕಾಂಡವಾದ ‘ಕಿಲ್ವೇನ್ಮಣಿ ಹತ್ಯಾಕಾಂಡ’ ನಡೆಯಿತು. ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕಿಲ್ವೇನ್ಮಣಿಯಲ್ಲಿ 44 ಜನ ದಲಿತರನ್ನು ಜೀವಂತವಾಗಿ ಸುಟ್ಟು ಹತ್ಯೆಮಾಡಲಾಯಿತು.

ಮೇಲ್ಜಾತಿಯ ಭೂಮಾಲಕರ ಭೂಮಿಯಲ್ಲಿ ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದ ಕಿಲ್ವೇನ್ಮಣಿಯ ದಲಿತರು ತಮಗೆ ಕೊಡುತ್ತಿದ್ದ ಕೂಲಿಯನ್ನು ಹೆಚ್ಚಿಸುವಂತೆ ಕೇಳಿದ್ದು ಭೂಮಾಲಕರು ಮತ್ತು ದಲಿತರ ನಡುವಿನ ಘರ್ಷಣೆಗೆ ಕಾರಣವಾಗುತ್ತದೆ. ಅಷ್ಟಕ್ಕೂ ಆಗ ದಲಿತರು ಹೆಚ್ಚುವರಿ ಕೂಲಿಯಾಗಿ ಕೇಳಿದ್ದು ಒಂದಷ್ಟು ಭತ್ತವನ್ನು ಮಾತ್ರ. ಆದರೆ ತಾವು ಕೊಡುವುದನ್ನು ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗದೆ ದಲಿತರು ಕೂಲಿ ಹೆಚ್ಚಿಸುವಂತೆ ‘ಕೇಳಿದ್ದು’ ಭೂಮಾಲಕರು ದಲಿತರಿಗೆ ‘ಬುದ್ದಿ ಕಲಿಸುವುದಕ್ಕೆ’ ಪ್ರಚೋದಿಸುತ್ತದೆ. ರೂಢಿಯಂತೆ ಆ ಊರಿನ ಭೂಮಾಲಕರು ಕಿಲ್ವೇನ್ಮಣಿಯ ದಲಿತರನ್ನು ಕೂಲಿಗೆ ಕರೆಯುವುದನ್ನು ನಿಲ್ಲಿಸಿ ಬೇರೆ ಊರಿಂದ ಕೂಲಿಯಾಳುಗಳನ್ನು ಕರೆತರುವುದಕ್ಕೆ ಶುರು ಮಾಡುತ್ತಾರೆ. ಆಗ ಕಿಲ್ವೇನ್ಮಣಿಯ ದಲಿತರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯುತ್ತಾರೆ. ಈ ಘರ್ಷಣೆಯಲ್ಲಿ ಬೇರೆ ಊರಿನಿಂದ ಕೂಲಿಯಾಳುಗಳನ್ನು ಕರೆತರುತ್ತಿದ್ದ ಕೂಲಿಕಾರ್ಮಿಕರ ಏಜೆಂಟನೊಬ್ಬನು ಸಾವನ್ನಪ್ಪುತ್ತಾನೆ. ದಲಿತರು ಹೆಚ್ಚುವರಿ ಕೂಲಿ ಕೇಳಿದ್ದಷ್ಟೇ ಅಲ್ಲದೆ ತಮ್ಮ ವಿರುದ್ಧ ನಿಲ್ಲುವುದಕ್ಕೆ ಮುಂದಾಗಿದ್ದನ್ನು ನೋಡಿ ಕೆರಳಿದ ಮೇಲ್ಜಾತಿಯ ಜನ ದಲಿತರಿಗೆ ತಕ್ಕ ಪಾಠ ಕಲಿಸುವುದಕ್ಕೆ ಮುಂದಾಗುತ್ತಾರೆ. ಭೂಮಾಲಕರ ಕಡೆಯ ಮೇಲ್ಜಾತಿಯ ನೂರಾರು ಜನ 1968 ರ ಕ್ರಿಸ್‌ಮಸ್ ರಾತ್ರಿ ಕಿಲ್ವೇನ್ಮಣಿಯ ದಲಿತ ಕೇರಿಗೆ ನುಗ್ಗಿ ಧಾಂದಲೆ ಶುರು ಮಾಡುತ್ತಾರೆ. ಆ ದಲಿತ ಕೇರಿಯಿಂದ ತಪ್ಪಿಸಿಕೊಂಡು ಹೋಗದಂತೆ ಅಲ್ಲಿದ್ದ ಎಲ್ಲ ದಾರಿಗಳನ್ನು ಬಂದು ಮಾಡಿ ದಲಿತರ ಮೇಲೆ ಹಲ್ಲೆ ಮಾಡಲಾರಂಭಿಸುತ್ತಾರೆ. ಮೇಲ್ಜಾತಿಯ ಗೂಂಡಾಗಳ ಹಲ್ಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇರಿಯಲ್ಲಿದ್ದ ಹೆಂಗಸರು, ಮಕ್ಕಳು ಮತ್ತು ಮುದುಕರು ತಮ್ಮ ಗುಡಿಸಲುಗಳ ಒಳಕ್ಕೆ ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಆಗ ಮೇಲ್ಜಾತಿಯ ಜನ ಆ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಲವತ್ತನಾಲ್ಕು ಮಂದಿ ದಲಿತರನ್ನು(ಅವರಲ್ಲಿ ಹೆಚ್ವಿನವರು ಮಹಿಳೆಯರು, ಮಕ್ಕಳು ಮತ್ತು ಒಂದಿಬ್ಬರು ವಯಸ್ಸಾದವರು) ಸಜೀವವಾಗಿ ಸುಟ್ಟುಬಿಡುತ್ತಾರೆ. ಜಾತಿ ವಿಕಾರಕ್ಕೆ ನಲವತ್ತನಾಲ್ಕು ಜನ ದಲಿತರು ತಮ್ಮಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ.

ಅಲ್ಲಿ ಮೇಲ್ಜಾತಿಯ ಜನ ರೊಚ್ಚಿಗೆದ್ದಿದ್ದು ಕೇವಲ ದಲಿತರು ಕೂಲಿ ಹೆಚ್ಚಿಸಿ ಅಂತ ಕೇಳಿದ್ದಕ್ಕಲ್ಲ. ಪರಂಪರಾತವಾಗಿ ವಿಧೇಯತೆಯಿಂದ ಬದುಕುತ್ತಿದ್ದವರು ಎದುರು ನಿಂತು ಮಾತಾಡುವ ಧೈರ್ಯ ಮಾಡಿದ್ದಕ್ಕಾಗಿ. ಇದು ಕೇವಲ ಭೂಮಾಲಕರು ಮತ್ತು ಕೂಲಿಕಾರ್ಮಿಕರ ನಡುವೆ ತಮ್ಮ ದುಡಿಮೆಗೆ ತಕ್ಕ ಕೂಲಿಗಾಗಿ ನಡೆದ ವರ್ಗ ಹೋರಾಟ ಮಾತ್ರವಲ್ಲ. ಸಾಂಪ್ರದಾಯಿಕ ಸಮಾಜದಲ್ಲಿ ದಲಿತರು ಸೆಟೆದು ನಿಲ್ಲುವುದಕ್ಕೆ ಶುರು ಮಾಡಿ ಕೆರಳುವ ಜಾತಿವಿಕಾರದ ವಿರುದ್ಧದ ಹೋರಾಟ.

ಹದಿನೈದು ವರ್ಷಗಳ ಕಾಲ ಕೋರ್ಟಿನಲ್ಲಿ ಕೇಸು ನಡೆಯುತ್ತದೆ. ಯಥಾಪ್ರಕಾರ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆದಾಗ ಆಗುವಂತೆ ಸಾಕ್ಷಿಗಳ ಕೊರತೆ, ಆ ಹತ್ಯಾಕಾಂಡಕ್ಕೆ ಕಾರಣ ಜಾತಿ ಅಲ್ಲ ಅನ್ನುವ ವಾದ, ಪತ್ರಿಕೆಗಳ ನಿರ್ಲಕ್ಷ್ಯದ ಕಾರಣಗಳಿಂದಾಗಿ ಹತ್ಯಾಕಾಂಡದ ಆರೋಪಿಗಳಿಗೆ ಅವರು ಎಸಗಿದ ಕ್ರೌರ್ಯಕ್ಕೆ ತಕ್ಕ ಶಿಕ್ಷೆಯೂ ಆಗುವುದಿಲ್ಲ, ಹತ್ಯಾಕಾಂಡದಿಂದ ಸಂತ್ರಸ್ತರಾದವರಿಗೆ ಸಿಗಬೇಕಾದ ಸೂಕ್ತ ನ್ಯಾಯವೂ ಸಿಗುವುದಿಲ್ಲ. ದಲಿತ ಚಳವಳಿ ಇನ್ನೂ ಹುಟ್ಟಿರದ ಆ ಕಾಲದಲ್ಲಿ ಸಿಪಿಎಂ ಕಿಲ್ವೇನ್ಮಣಿ ಹತ್ಯಾಕಾಂಡವನ್ನು ಖಂಡಿಸಿ ದಲಿತರ ಪರ ಹೋರಾಟವನ್ನು ರೂಪಿಸಿತ್ತು. ಹತ್ಯಾಕಾಂಡದ ನಂತರದ ಘಟನಾವಳಿಗಳನ್ನು ಹೋರಾಟಗಾರ್ತಿ ಕಾಮ್ರೆಡ್ ಮೈಥಿಲಿ ಸಿವರಾಮನ್ ದಾಖಲು ಮಾಡಿದ್ದಾರೆ.

ಬ್ರಾಹ್ಮಣ್ಯದ ಅಪಾಯಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ ದ್ರಾವಿಡ ಚಳವಳಿಯ ತವರು ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ಹತ್ಯಾಕಾಂಡ ನಡೆದುಹೋಯಿತು. ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ. ಹಾಗಾಗಿಯೇ ಕಿಲ್ವೇನ್ಮಣಿ, ಕರಂಚೇಡು, ಚಂಡೂರು, ಬೆಲ್ಚಿ, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಮಾಲಪಲ್ಲಿ, ಹಾಥರಸ್ ಹತ್ಯಾಕಾಂಡಗಳು ಒಂದಾದಮೇಲೊಂದರಂತೆ ನಡೆಯುತ್ತಲೇ ಇವೆ... ಈ ನೆಲದ ಮೇಲೆ ದಲಿತರ ರಕ್ತ ಹರಿಯುತ್ತಲೇ ಇದೆ.

share
ನರಸಿಂಹಮೂರ್ತಿ ವಿ.ಎಲ್
ನರಸಿಂಹಮೂರ್ತಿ ವಿ.ಎಲ್
Next Story
X