ಮುಂದುವರಿದ ತೆರವು ಕಾರ್ಯಾಚರಣೆ; ಬೀದಿ ಬದಿ ವ್ಯಾಪಾರಸ್ಥರ ಧರಣಿ
![ಮುಂದುವರಿದ ತೆರವು ಕಾರ್ಯಾಚರಣೆ; ಬೀದಿ ಬದಿ ವ್ಯಾಪಾರಸ್ಥರ ಧರಣಿ ಮುಂದುವರಿದ ತೆರವು ಕಾರ್ಯಾಚರಣೆ; ಬೀದಿ ಬದಿ ವ್ಯಾಪಾರಸ್ಥರ ಧರಣಿ](https://www.varthabharati.in/sites/default/files/images/articles/2021/12/28/319284-1640689119.jpeg)
ಮಂಗಳೂರು, ಡಿ.28: ಮಂಗಳೂರು ಮನಪಾ ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಮಾಡುತ್ತಿರುವುದನ್ನು ಖಂಡಿಸಿ ಮಂಗಳವಾರ ಬೀದಿ ಬದಿ ವ್ಯಾಪಾರಸ್ಥರು ಧರಣಿ ನಡೆಸಿದ್ದಾರೆ.
ನಗರದ ಪುರಭವನ ಬಳಿ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಯ ಪೆಟ್ಟಿಗೆ ಅಂಗಡಿಯನ್ನು ಮಂಗಳವಾರ ಬೆಳಗ್ಗೆ ತೆರವುಗೊಳಿಸುವ ಸಂದರ್ಭ ನಜ್ಜುಗುಜ್ಜುಗೊಳಿಸಿದ್ದರು. ಇದನ್ನು ಖಂಡಿಸಿ ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ)ದ ನೇತೃತ್ವದಲ್ಲಿ ವ್ಯಾಪಾರಿಗಳು ಮನಪಾ ಕಚೇರಿಯ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನ್ಯಾಯಕ್ಕಾಗಿ ಆಗ್ರಹಿಸಿದರು.
Next Story