ಸಮುದ್ರದಲ್ಲಿ ಮುಳುಗಿ ಮೃತ್ಯು
ಬೈಂದೂರು, ಡಿ.28: ಶಿರೂರು ಗ್ರಾಮದ ಅಳಿವೆಗದ್ದೆಯ ಮಂಜು ಮೊಗೇರ (65) ಎಂಬವರು ಇಂದು ಬೆಳಗಿನ ಜಾವ ಶಿರೂರು ಅಳಿವೆಗದ್ದೆ ಸಮುದ್ರದಲ್ಲಿ ಪಾತಿದೋಣಿಯಲ್ಲಿ ಮೀನುಗಾರಿಕೆ ನಡೆಸುತಿದ್ದಾಗ ಜೋರಾಗಿ ಗಾಳಿ ಬೀಸಿದ ಪರಿಣಾಮ ಪಾತಿದೋಣಿಯಲ್ಲಿದ್ದ ಬಲೆಯು ಕಾಲಿಗೆ ಸಿಕ್ಕಿ ಆಯತಪ್ಪಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





