ಎಸ್ಕೆಎಸ್ಸೆಸ್ಸೆಫ್ ಜೋಗಿಬೆಟ್ಟು ಯುನಿಟ್ ವಾರ್ಷಿಕ ಮಹಾಸಭೆ
![ಎಸ್ಕೆಎಸ್ಸೆಸ್ಸೆಫ್ ಜೋಗಿಬೆಟ್ಟು ಯುನಿಟ್ ವಾರ್ಷಿಕ ಮಹಾಸಭೆ ಎಸ್ಕೆಎಸ್ಸೆಸ್ಸೆಫ್ ಜೋಗಿಬೆಟ್ಟು ಯುನಿಟ್ ವಾರ್ಷಿಕ ಮಹಾಸಭೆ](https://www.varthabharati.in/sites/default/files/images/articles/2022/01/1/319738-1641003313.jpg)
ಉಪ್ಪಿನಂಗಡಿ : 2022-24ನೆ ಸಾಲಿನ ಎಸ್ಕೆಎಸ್ಸೆಸ್ಸೆಫ್ ಜೋಗಿಬೆಟ್ಟು ಯುನಿಟ್ ಇದರ ವಾರ್ಷಿಕ ಮಹಾಸಭೆಯು ಎಂ.ಜಿ. ರಫೀಕ್ ಅವರ ಮನೆಯಲ್ಲಿ ನಡೆಯಿತು.
ದುಆ ನೇತೃತ್ವವನ್ನು ಮಹಮ್ಮದ್ ಅಲಿ ಮುಸ್ಲಿಯಾರ್ ನೆರವೇರಿಸಿದರು. ಎಸ್ ವೈ ಎಸ್ ಅಧ್ಯಕ್ಷರಾದ ಜಿ.ಕೆ. ದಾವೂದ್, ಕಾಸಿಂ ಪಿಲಿಗುಡು, ಅಯ್ಯೂಬ್ ಅಗ್ನಾಡಿ, ಯಾಕೂಬ್ ಹಸನ್, ಇಬ್ರಾಹಿಂ, ಖಾದರ್ ಶಾಂತಿಕೋಡಿ, ಮುಸ್ತಫಾ, ಎಂಜಿ ಅಬೂಬಕರ್ ಅವರ ನೇತೃತ್ವದಲ್ಲಿ ನಡೆಯಿತು.
2020-22ರ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಜಿ. ಸಿರಾಜ್ ಅವರು ವಾಚಿಸಿದರು. ಅಧ್ಯಕ್ಷರಾದ ಸಲೀಮ್ ಟೈಲರ್ ಉಪಸ್ಥಿತರಿದ್ದರು.
2022-24ರ ಸಾಲಿನ ನೂತನ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಫೀಕ್ ಎಂಜಿ, ಉಪಾಧ್ಯಕ್ಷರಾಗಿ ಅಯ್ಯೂಬ್ ಅಗ್ನಾಡಿ, ಖಾದರ್ ಶಾಂತಿಕೋಡಿ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್, ಕಾರ್ಯದರ್ಶಿಗಳಾಗಿ ಹನೀಫ್ ಬನ್ನೆಂಗಳ, ಜೊತೆ ಕಾರ್ಯದರ್ಶಿಯಾಗಿ ಜಿ. ಸಿರಾಜ್ ಹಾಗು ಬದುರುದ್ದೀನ್ ಮತ್ತು ಕೋಶಾಧಿಕಾರಿಯಾಗಿ ಸಲೀಂ ಟೈಲರ್ ಅವರನ್ನು ಆಯ್ಕೆ ಮಾಡಲಾಯಿತು.
ಝುಬೈರ್ ಪಿಲಿಗೂಡು ವಂದಿಸಿದರು.