ಅರಣ್ಯ ಸಿಬ್ಬಂದಿಗೆ ಏಕರೂಪದ ಹೆಲ್ಮೆಟ್: ಪ್ರಕಾಶ್ ನೆಟಾಲ್ಕರ್
![ಅರಣ್ಯ ಸಿಬ್ಬಂದಿಗೆ ಏಕರೂಪದ ಹೆಲ್ಮೆಟ್: ಪ್ರಕಾಶ್ ನೆಟಾಲ್ಕರ್ ಅರಣ್ಯ ಸಿಬ್ಬಂದಿಗೆ ಏಕರೂಪದ ಹೆಲ್ಮೆಟ್: ಪ್ರಕಾಶ್ ನೆಟಾಲ್ಕರ್](https://www.varthabharati.in/sites/default/files/images/articles/2022/01/2/319952-1641138825.jpg)
ಉಡುಪಿ, ಜ.2: ವನ್ಯಜೀವಿ ಸಂಕುಲ, ಕಾಡು ಉತ್ಪನ್ನ, ಅರಣ್ಯ ಸಂರಕ್ಷಣೆ ಹಾಗೂ ಮರಗಳ್ಳತನ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯಕ್ಕೆ ತೆರಳುವ ಸಿಬ್ಬಂದಿಗೆ ಏಕರೂಪದ ಹೆಲ್ಮೆಟ್ ನೀಡಲು ಚಿಂತಿಸಲಾಗಿದೆ. ಈ ಮೂಲಕ ಅರಣ್ಯ ಸಂರಕ್ಷಣೆ ಸಾಧ್ಯ ಎಂದು ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೆಟಾಲ್ಕರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಕಾರಿಗಳ ಸಂಘದ ವತಿಯಿಂದ ನಗರದ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ರವಿವಾರ ನಡೆದ 22 ನೇ ವರ್ಷದ ವಾರ್ಷಿಕ ಸಮಾರಂಭ ಮತುತಿ ನೂತನ ಡೈರಿ ಬಿಡುಗಡೆ, ಪದೋನ್ನತಿ ಉಪವಲಯ ಅರಣ್ಯಾಕಾರಿಗಳಿಗೆ, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ, ರಕತಿದಾನಿಗಳಿಗೆ ಗೌರವ ಸಮರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಸಿಬ್ಬಂದಿಗೆ ಏಕರೂಪದ ಹೆಲ್ಮೆಟ್ ನೀಡುವುದರಿಂದ ಅರಣ್ಯ ಸಂರಕ್ಷಕರು ಹಾಗೂ ಲೂಟಿಕೋರರು ಯಾರು ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಈ ಯೋಜನೆಯನ್ನು ಎಲ್ಲಾ ವೃತ್ತಗಳಲ್ಲೂ ತರಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ, ಸಾಮಾಜಿಕ ಅರಣ್ಯ ಉಡುಪಿ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿರ್ಡ್ ಲೋಬೋ, ಮೂಡಬಿದ್ರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್., ಸಿ.ಆರ್.ಝಡ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಮಾತನಾಡಿದರು.
ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಡಿ.ದಿನೇಶ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ಉಪಾಧ್ಯಕ್ಷರಾದ ಕರುಣಾಕರ್ ಜೆ.ಆಚಾರ್ಯ, ಸಂಗೀತಾ ಶೆಡ್ತಿ, ಪ್ರಧಾನ ಕಾರ್ಯದರ್ಶಿ ವೀರಣ್ಣ, ಖಜಾಂಚಿ ಗೋವಿಂದ ಎಂ.ಪಟಗಾರ್, ಜತೆ ಕಾರ್ಯದರ್ಶಿ ಜಯರಾಮ ಎ., ಗೌರವ ಸಲಹೆಗಾರ ಜೀವನ್ದಾಸ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.