Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮಿನ್ನಲ್ ಮುರಳಿಯ ‘ಸೆಲ್ವಂ’ ಪಾತ್ರ

ಮಿನ್ನಲ್ ಮುರಳಿಯ ‘ಸೆಲ್ವಂ’ ಪಾತ್ರ

ವಾರ್ತಾಭಾರತಿವಾರ್ತಾಭಾರತಿ4 Jan 2022 1:02 PM IST
share
ಮಿನ್ನಲ್ ಮುರಳಿಯ ‘ಸೆಲ್ವಂ’ ಪಾತ್ರ

ಲಾಕ್‌ಡೌನ್ ಸಂದರ್ಭದಲ್ಲಿ ಒಟಿಟಿಯಲ್ಲಿ ಅತಿ ಹೆಚ್ಚು ಮಿಂಚುತ್ತಿರುವ ನಟ ಟೊವಿನೋ ಥೋಮಸ್. ವಿಲನ್ ಮತ್ತು ನಾಯಕ ಎರಡೂ ಪಾತ್ರಗಳಿಗೂ ಸೈ ಎಂದು ಈಗಾಗಲೇ ಸಾಬೀತು ಮಾಡಿದವರು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಇವರ ‘ಮಿನ್ನಲ್ ಮುರಳಿ’ ಸುದ್ದಿ ಮಾಡುತ್ತಿದೆ. ಬಾಸಿಲ್ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಕತೆಯ ವಿಶೇಷವೆಂದರೆ, ಇದೊಂದು ‘ಸೂಪರ್‌ಮ್ಯಾನ್’ ಚಿತ್ರ. ಮೊತ್ತ ಮೊದಲ ಬಾರಿಗೆ ದೇಶೀ ಸೂಪರ್ ಮ್ಯಾನ್ ಮತ್ತು ದೇಶೀ ಸೂಪರ್ ವಿಲನ್‌ಗಳನ್ನು ನಿರ್ದೇಶಕರು ದಕ್ಷಿಣ ಭಾರತೀಯರಿಗೆ ಕಟ್ಟಿಕೊಟ್ಟಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರ ಸುದ್ದಿಯಲ್ಲಿರುವುದು ಟೊವಿನೋ ಥೋಮಸ್ ಕಾರಣಕ್ಕಾಗಿಯಲ್ಲ, ವಿಲನ್ ಪಾತ್ರವನ್ನು ನಿರ್ವಹಿಸಿರುವ ಗುರು ಸೋಮಸುಂದರ್ ಅವರ ಕಾರಣದಿಂದ. ತಮಿಳಿನ ‘ಜೋಕರ್’ ಚಿತ್ರದ ಮೂಲಕ ಈಗಾಗಲೇ ಖ್ಯಾತರಾಗಿರುವ ಗುರು ಸೋಮಸುಂದರ್ ‘ಮಿನ್ನಲ್ ಮುರಳಿ’ಯಲ್ಲಿ ಒಬ್ಬ ಗ್ರಾಮೀಣ ಪ್ರದೇಶದ ವಿಲಕ್ಷಣ, ಭಗ್ನ ಪ್ರೇಮಿಯಾಗಿ ಹೃದಯಸ್ಪರ್ಶಿ ಅಭಿನಯವನ್ನು ನೀಡಿದ್ದಾರೆ. ಬಾಲ್ಯದಲ್ಲಿ ಅವಮಾನದ ಗಾಯಗಳೊಂದಿಗೆ ಬದುಕಿದ ಅಂತರ್ಮುಖಿ ಸೆಲ್ವಂ, ತನ್ನೊಳಗಿನ ಪ್ರೀತಿಯನ್ನು ಒಂದು ಹಕ್ಕಿ ಗೂಡಿನಂತೆ ಜೋಪಾನ ಮಾಡಿಕೊಂಡು ಬಂದವನು. ಪ್ರೀತಿಸಿದ ಹುಡುಗಿ ಯಾರನ್ನೋ ಮದುವೆಯಾದರೂ, ಆಕೆಯ ನೆನಪುಗಳನ್ನು ತನ್ನೊಳಗೆ ಕಾಪಾಡಿಕೊಂಡು ಬಂದವನು. ಯಾವುದೋ ಒಂದು ಸಂದರ್ಭದಲ್ಲಿ ಆಕೆ ಮತ್ತೆ ತನಗೆ ದೊರಕುತ್ತಾಳೆ ಎನ್ನುವ ಸನ್ನಿವೇಶ ನಿರ್ಮಾಣವಾಗುತ್ತದೆ. ಅಲ್ಲಿಂದ ಚಿತ್ರ ತಿರುವು ಪಡೆದುಕೊಳ್ಳುತ್ತದೆ.

ತನ್ನ ಪ್ರೀತಿ ಜೀವಪಡೆದುಕೊಳ್ಳುತ್ತದೆ ಎನ್ನುವಷ್ಟರಲ್ಲಿ ಮತ್ತೆ ಅದಕ್ಕೆ ತೊಡಕುಗಳು ಎದುರಾಗುತ್ತಿರುವಂತೆಯೇ ಸೆಲ್ವಂ ಕ್ರೂರಿಯಾಗುತ್ತಾ ಹೋಗುತ್ತಾನೆ. ಆಕಸ್ಮಿಕ ಮಿಂಚಿನಿಂದ ಅತಿಮಾನವ ಶಕ್ತಿಯನ್ನು ಪಡೆದುಕೊಂಡ ಸೆಲ್ವಂ ಇಡೀ ಊರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಾನೆ. ಇಂತಹ ಸಂದರ್ಭದಲ್ಲಿ, ಜೈಸನ್ ಆ ಶಕ್ತಿಯನ್ನು ಎದುರಿಸುವ ಸೂಪರ್ ಮ್ಯಾನ್ ಆಗಿ ಗೋಚರಿಸುತ್ತಾನೆ. ‘ಮಿನ್ನಲ್ ಮುರಳಿ’ ಹೃದಯಸ್ಪರ್ಶಿ ಕಥಾನಕವಾಗಿ ಬದಲಾಗುವುದು ಸೋಮಸುಂದರ್ ಅವರ ನಟನೆಯ ಮೂಲಕ. ಪ್ರೀತಿ, ಅದನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅವನೊಳಗಿನ ತುಮುಲಗಳು, ನಿರಾಸೆ, ಕ್ರೌರ್ಯ...ಎಲ್ಲವನ್ನು ಸೋಮಸುಂದರ್ ಅವರು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಮಿನ್ನಲ್ ಮುರಳಿ ಸೋಮಸುಂದರ್ ಚಿತ್ರ ಬದುಕಿಗೆ ಹೊಸ ತಿರುವನ್ನು ನೀಡುವುದರಲ್ಲಿ ಅನುಮಾನವಿಲ್ಲ.

ಜೈಸನ್ ಪಾತ್ರದಲ್ಲಿ ಟೊವಿನೋ ಥೋಮಸ್ ಅವರ ಚೆಲ್ಲು ಪಾತ್ರ ಇಷ್ಟವಾಗುತ್ತದೆ. ಚಿತ್ರದುದ್ದಕ್ಕೂ ಅವರು ಲವಲವಿಕೆಯಿಂದ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ‘ಮಿನ್ನಲ್ ಮುರಳಿ’ ಮೂಲಕ ನಮ್ಮದೇ ನೆಲದ ಸೂಪರ್ ಮ್ಯಾನ್ ನಮಗೆ ದಕ್ಕಿದಂತಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X