ಪಿಡಬ್ಲುಡಿ ಗುತ್ತಿಗೆದಾರರಿಗೆ ಲಕ್ಷಾಂತರ ರೂ. ವಂಚನೆ: ದೂರು
ಶಂಕರನಾರಾಯಣ, ಜ.4: ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಸಿಕೊಡುವುದಾಗಿ ಪಿಡಬ್ಲುಡಿ ಗುತ್ತಿಗೆದಾರರೊಬ್ಬರನ್ನು ನಂಬಿಸಿ 28ಲಕ್ಷ ರೂ. ವಂಚಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಬ್ಲುಡಿ ಗುತ್ತಿಗೆದಾರ ಸಂತೋಷ ಕುಮಾರ್ ಶೆಟ್ಟಿ(50) ಎಂಬವರ ಶಂಕರನಾರಾಯಣದಲ್ಲಿರುವ ಹಾರ್ಡ್ವೇರ್ ಅಂಗಡಿಗೆ ಆರೋಪಿಗಳಾದ ಮಣಿಪಾಲದ ಲ್ಯಾನ್ಸಿ ರಾಜ್(45) ಹಾಗೂ ಉಜಿರೆಯ ಗಂಗಾಧರ ರಾವ್ (50) ಎಂಬವರು 2021ರ ಜ.10ರಂದು ಬಂದು ಒಂದು ಕೋಟಿ ರೂ. ಹಣ ವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದರು.
ಬಳಿಕ ಅವರಿಂದ 28 ಲಕ್ಷ ರೂ. ಹಣವನ್ನು ಸಾಲದ ಕಾಗದ ಪತ್ರ ಮಾಡಲು ಎಂದು ಹೇಳಿ ಪಡೆದುಕೊಂಡು ಹೋಗಿದ್ದರು. ಆ ಬಳಿಕ ಆರೋಪಿ ಗಳು ಸಾಲವನ್ನು ತೆಗೆಯಿಸಿಕೊಡದೆ ಪಡೆದ ಹಣವನ್ನು ಕೂಡ ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story