ಬಂಟ್ವಾಳ: ತೆಂಗಿನ ಮರ ಮೈ ಮೇಲೆ ಬಿದ್ದು ಯುವಕ ಮೃತ್ಯು
![ಬಂಟ್ವಾಳ: ತೆಂಗಿನ ಮರ ಮೈ ಮೇಲೆ ಬಿದ್ದು ಯುವಕ ಮೃತ್ಯು ಬಂಟ್ವಾಳ: ತೆಂಗಿನ ಮರ ಮೈ ಮೇಲೆ ಬಿದ್ದು ಯುವಕ ಮೃತ್ಯು](https://www.varthabharati.in/sites/default/files/images/articles/2022/01/9/320772-1641729056.jpeg)
ಬಂಟ್ವಾಳ, ಜ.9: ಕಡಿಯುತ್ತಿದ್ದ ತೆಂಗಿನ ಮರ ಮೈ ಮೇಲೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ನಡೆದಿದೆ.
ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ಯುವಕ.
ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ ಕಡಿಯುವ ವೇಳೆ ಘಟನೆ ನಡೆದಿದ್ದು ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾರೂ ಆದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಯತಿರಾಜ್ ಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು ಅವರು ಮರ ಕಡಿಯುವ ಕೆಲಸದ ಗುತ್ತಿಗೆ ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
Next Story