ಕೇಂದ್ರದಿಂದ ಎಲ್ಲೈಸಿಯನ್ನು ಖಾಸಗೀಕರಣಗೊಳಿಸುವ ಹುನ್ನಾರ: ಪ್ರಭಾಕರ್ ಕುಂದರ್
![ಕೇಂದ್ರದಿಂದ ಎಲ್ಲೈಸಿಯನ್ನು ಖಾಸಗೀಕರಣಗೊಳಿಸುವ ಹುನ್ನಾರ: ಪ್ರಭಾಕರ್ ಕುಂದರ್ ಕೇಂದ್ರದಿಂದ ಎಲ್ಲೈಸಿಯನ್ನು ಖಾಸಗೀಕರಣಗೊಳಿಸುವ ಹುನ್ನಾರ: ಪ್ರಭಾಕರ್ ಕುಂದರ್](https://www.varthabharati.in/sites/default/files/images/articles/2022/01/11/321007-1641908067.jpg)
ಉಡುಪಿ, ಜ.11: ಕೇಂದ್ರ ಸರಕಾರವು 2021ರ ಬಜೆಟಿನಲ್ಲಿ ಎಲ್ಐಸಿಯಲ್ಲಿ ಸರಕಾರ ಹೂಡಿದ ಸ್ವಲ್ಪ ಬಂಡವಾಳವನ್ನು ಹಿಂತೆಗೆಯುವುದಾಗಿ ಪ್ರಸ್ತಾಪಿಸಿದೆ. ಇದು ಎಲ್ಲೈಸಿಯನ್ನು ಖಾಸಗೀಕರಣಗೊಳಿಸುವ ಪ್ರಥಮ ಹೆಜ್ಜೆಯಾಗಿದೆ. ಇದನ್ನು ವಿರೋಧಿಸಿ ನಡೆಯುವ ಹೋರಾಟದಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸಬೇಕೆಂದು ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದಶಿರ್ ಪ್ರಭಾಕರ್ ಕುಂದರ್ ಹೇಳಿದ್ದಾರೆ.
ಉಡುಪಿ ವಿಮಾ ನೌಕರರ ಸಂಘದ ಆವರಣದಲ್ಲಿ ಇಂದು ನಡೆದ ವಿಮಾ ಪಿಂಚಣಿದಾರರ ಸಂಘ ಉಡುಪಿ ವಿಭಾಗ ಇದರ 24ನೇ ವಾರ್ಷಿಕ ಮಹಾ ಧಿವೇಶದಲ್ಲಿ ಅವರು ಮಾತನಾಡುತಿದ್ದರು.
ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್, ಗ್ರೂಪ್ ಮೆಡಿಕ್ಲೈಮ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎ.ಮಧ್ವರಾಜ ಬಲ್ಲಾಳ್, ಉಪಾಧ್ಯಕ್ಷರುಗಳಾಗಿ ತಿಮ್ಮಪ್ಪ ಮತ್ತು ಬಿ.ಎನ್. ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ಮೂರ್ತಿ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರೀಪತಿ ಉಪಾಧ್ಯ, ಖಜಾಂಚಿ ಯಾಗಿ ಎ.ರಮೇಶ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಕೆ.ರಾಘವೇಂದ್ರ ಭಟ್ ವಹಿಸಿದ್ದರು. ವಿಮಾ ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮಧ್ವರಾಜ ಬಲ್ಲಾಳ ಗತರ್ಷದ ವರದಿಯನ್ನು ಮಂಡಿಸಿದರು.