ಕೃಷ್ಣಾಪುರ ಸ್ವಾಮೀಜಿ ಬಡಗಬೆಟ್ಟು ಸೊಸಾಟಿಗೆ ಭೇಟಿ
![ಕೃಷ್ಣಾಪುರ ಸ್ವಾಮೀಜಿ ಬಡಗಬೆಟ್ಟು ಸೊಸಾಟಿಗೆ ಭೇಟಿ ಕೃಷ್ಣಾಪುರ ಸ್ವಾಮೀಜಿ ಬಡಗಬೆಟ್ಟು ಸೊಸಾಟಿಗೆ ಭೇಟಿ](https://www.varthabharati.in/sites/default/files/images/articles/2022/01/12/321169-1642003488.jpg)
ಉಡುಪಿ, ಜ.12: ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಸರ್ವಜ್ಞ ಪೀಠಾ ರೋಹಣ ಮಾಡಲಿರುವ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿಗೆ ಇಂದು ಭೇಟಿ ನೀಡಿದರು.
ಸ್ವಾಮೀಜಿಯ ಪಾದ ಪೂಜೆಯೊಂದಿಗೆ ಸ್ವಾಗತಿಸಲಾಯಿತು. ಬಳಿಕ ಸಂಸ್ಥೆಯ ಕಾರ್ಯವೈಖರಿ, ಸಾಧನೆಯ ಬಗ್ಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿ ಆಶೀರ್ವಚನ ನೀಡಿದರು.
ಉಡುಪಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಸಂಘದ ಆಡಳಿತ ಮಂಡಳಿ ಸದಸ್ಯರಾದ ಪದ್ಮನಾಭ ನಾಯಕ್, ಜಯಾನಂದ ಮೈಂದನ್, ವಿನ್ ಕುಮಾರ್ ಟಿ.ಎ., ಸದಾಶಿವ ನಾಕ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಸಂಘದ ಶಾಖಾ ವ್ಯವಸ್ಥಾಪಕರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Next Story