''ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು'': ಡಿಕೆಶಿಗೆ ಬಿಜೆಪಿ ಪ್ರಶ್ನೆ

ಬೆಂಗಳೂರು: ''ಡಿಕೆಶಿಯವರೇ, ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೂ ರಾಜ್ಯದ ಜನರ ಆರೋಗ್ಯವನ್ನು ಪಣಕ್ಕಿಟ್ಟು ಕೋವಿಡ್ ಜಾತ್ರೆ ನಡೆಸಿದಿರಿ. ಕೋವಿಡ್ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ?'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ''ಕೋವಿಡ್ ಜಾತ್ರೆಯ ರೂವಾರಿ ಡಿ.ಕೆ ಶಿವಕುಮಾರ್ ಅವರೇ, ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು?, ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ? , ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ? , ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?'' ಎಂದು ಪ್ರಶ್ನಸಿದೆ.
''ಡಿಕೆಶಿ ಅವರೇ, ಇಂದು ನೀವು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೀರಿ. ಆದರೆ, ಕೋವಿಡ್ ಪರೀಕ್ಷೆ ಇನ್ನೂ ಏಕೆ ಮಾಡಿಸಿಕೊಂಡಿಲ್ಲ? ನಿಮ್ಮ ಸುತ್ತಮುತ್ತಲಿದ್ದವರಿಗೆಲ್ಲಾ ಕೋವಿಡ್ ದೃಢಪಟ್ಟಿದೆ, ಕೋವಿಡ್ ಸೋಂಕನ್ನು ಕಡೆಗಣಿಸಿ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ?'' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೋವಿಡ್ ಜಾತ್ರೆಯ ರೂವಾರಿ @DKShivakumar ಅವರೇ,
— BJP Karnataka (@BJP4Karnataka) January 13, 2022
√ ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು?
√ ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ?
√ ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ?
√ ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?#ಉತ್ತರಿಸಿಡಿಕೆಶಿ







