ತಮಿಳುನಾಡು: ಅಮರಾವತಿ ನದಿಯಲ್ಲಿ ಮುಳುಗಿ ಆರು ವಿದ್ಯಾರ್ಥಿಗಳು ಮೃತ್ಯು
ಚೆನ್ನೈ: ತಮಿಳುನಾಡಿನ ತಿರುಪುರ್ ಜಿಲ್ಲೆಯ ಧಾರಾಪುರಂನಲ್ಲಿಸೋಮವಾರ ಆರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಮರಾವತಿ ನದಿಗೆ ಸ್ನಾನಕ್ಕೆ ಇಳಿದಿದ್ದ ಎಂಟು ಸದಸ್ಯರ ಗುಂಪಿನಲ್ಲಿ ಈ ಆರು ಮಂದಿ ಇದ್ದರು.
ಮೃತರಲ್ಲಿ ಐವರು ಶಾಲಾ ವಿದ್ಯಾರ್ಥಿಗಳು ಹಾಗೂ ಆರನೆಯವನು ಕಾಲೇಜು ವಿದ್ಯಾರ್ಥಿಯಾಗಿದ್ದಾನೆ.
ಅಧಿಕಾರಿಗಳ ಪ್ರಕಾರ, ಶಾಲಾ ವಿದ್ಯಾರ್ಥಿಗಳಿದ್ದ ಗುಂಪು ದಿಂಡಿಗಲ್ ಜಿಲ್ಲೆಯ ಮಂಪಾರೈನಲ್ಲಿರುವ ದೇವಸ್ಥಾನಕ್ಕೆ ಹೋಗಿತ್ತು. ವಾಪಸಾಗುವಾಗ ನದಿಯಲ್ಲಿ ಸ್ನಾನ ಮಾಡಲು ವಾಹನವನ್ನು ನಿಲ್ಲಿಸಿತ್ತು. ಆರು ಮಂದಿ ಹದಿಹರೆಯದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಬ್ಬರನ್ನು ಸ್ಥಳೀಯರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ಮೃತರನ್ನು ಮೋಹನ್, ರಂಜಿತ್, ಶ್ರೀಧರ್, ಚಕ್ರವರ್ಮಣಿ, ಅಮೀರ್ ಮತ್ತು ಯುವನ್ ಎಂದು ಗುರುತಿಸಲಾಗಿದೆ. ರಕ್ಷಿಸಲ್ಪಟ್ಟ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story