ಕೋಲಾರ: ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಮೃತ್ಯು
ಮೃತ ಯುವಕ ಕಾರ್ತಿಕ್
ಕೋಲಾರ: ಮೀನಿಗೆ ಬಲೆ ಎಸೆಯಲು ಹೋಗಿ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಅರಳೇರಿ ಗ್ರಾಮದಲ್ಲಿ ಜರುಗಿದೆ.
ಮಾಲೂರು ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಮುನಿರಾಜು (23), ಅಂಗಶೆಟ್ಟಿಹಳ್ಳಿ ಗ್ರಾಮದ ಕಾರ್ತಿಕ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಇನ್ನೊರ್ವ ಯುವಕ ಮಂಜುನಾಥ್ ಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ತಡರಾತ್ರಿ ಅರಳೇರಿ ಗ್ರಾಮದ ಕೆರೆಯಲ್ಲಿ ಮೀನಿಗೆ ಬಲೆ ಎಸೆಯಲು ತೆಪ್ಪದಲ್ಲಿ ಹೋಗಿದ್ದ ಸಂದರ್ಭ ಕೆರೆಯಲ್ಲಿ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಾಲೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
Next Story