ಮಸ್ಕತ್ನಲ್ಲಿ ಬ್ರಹ್ಮಾವರದ ವ್ಯಕ್ತಿ ಹೃದಯಾಘಾತದಿಂದ ನಿಧನ
![ಮಸ್ಕತ್ನಲ್ಲಿ ಬ್ರಹ್ಮಾವರದ ವ್ಯಕ್ತಿ ಹೃದಯಾಘಾತದಿಂದ ನಿಧನ ಮಸ್ಕತ್ನಲ್ಲಿ ಬ್ರಹ್ಮಾವರದ ವ್ಯಕ್ತಿ ಹೃದಯಾಘಾತದಿಂದ ನಿಧನ](https://www.varthabharati.in/sites/default/files/images/articles/2022/01/19/321952-1642585502.gif)
ಶೇಕ್ ಗಫಾರ್ ಸಾಹೇಬ್
ಉಡುಪಿ, ಜ.19: ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಗ್ರಾಮದ ಶೇಕ್ ಗಫಾರ್ ಸಾಹೇಬ್(71) ಇಂದು ಬೆಳಗ್ಗಿನ ಜಾವ 3 ಗಂಟೆಗೆ ಒಮನ್ನ ಮಸ್ಕತ್ನಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸುಮಾರು 40 ವರ್ಷಗಳಿಂದ ಒಮನ್ನಲ್ಲಿ ನೆಲೆಸಿದ್ದ ಇವರು, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸ್ಸೊಸಿಯೆಷನ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ದಫನ ಕಾರ್ಯವನ್ನು ಮಸ್ಕತ್ನಲ್ಲಿ ನೆರವೇರಿಸಲಾಗುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story