ಜ.26: ನಾರಾಯಣ ಗುರು ಭಾವಚಿತ್ರದ ಮೆರವಣಿಗೆ
ಮಂಗಳೂರು, ಜ.23: ಗಣರಾಜ್ಯೋತ್ಸವ ದಿನದಂದು ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇರಳ ಸರಕಾರ ಕಳುಹಿಸಿ ಕೊಟ್ಟಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜ.26ರಂದು ಸಂಜೆ 3ಕ್ಕೆ ನಗರದ ಕ್ಲಾಕ್ ಟವರ್ ನಿಂದ ದ.ಕ.ಜಿಲ್ಲಾಧಿಕಾರಿ ಕಚೇರಿವರೆಗೆ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆಯೊಂದಿಗೆ ಗೌರವ ಸಲ್ಲಿಕೆ ಕಾರ್ಯಕ್ರಮವವನ್ನು ಎಡ, ಜಾತ್ಯತೀತ ಪಕ್ಷಗಳು ಹಾಗು ವಿವಿಧ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿವೆ.
ಸಾರ್ವಜನಿಕರು ನಾರಾಯಣ ಗುರುವಿಗೆ ಗೌರವ ಸಲ್ಲಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಬದ್ದತೆಯನ್ನು ಅಂದು ಎತ್ತಿ ಹಿಡಿಯಬೇಕು ಎಂದು ಸಮಾನ ಸಂಘಟನೆಗಳ ಜಂಟಿ ಸಮಿತಿಯ ಮನವಿ ಮಾಡಿದೆ.
Next Story