ಸಮುದ್ರದಲ್ಲಿ ಮುಳುಗಿ ಹುಬ್ಬಳ್ಳಿಯ ಯುವಕ ಮೃತ್ಯು
ಬೈಂದೂರು, ಜ.23: ಸಮುದ್ರಕ್ಕೆ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಿರಿಮಂಜೇಶ್ವರ ಗ್ರಾಮದ ಆಕಳಬೈಲು ಎಂಬಲ್ಲಿ ಜ.23ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಹುಬ್ಬಳ್ಳಿಯ ಸಂತೋಷನಗರದ ನಿವಾಸಿ ವೆಂಕಟೇಶ್ (28) ಎಂದು ಗುರುತಿಸಲಾಗಿದೆ. ಇವರು ಆಕಳಬೈಲುವಿನ ನರಸಿಂಹ ಪೂಜಾರಿ ಎಂಬವರ ಮನೆಗೆ ಬಂದಿದ್ದರು. ಅಲ್ಲಿ ಇವರು ನರಸಿಂಹ ಪೂಜಾರಿಯ ಮಕ್ಕಳೊಂದಿಗೆ ಮನೆಯ ಬಳಿಯ ಸಮುದ್ರದಕ್ಕೆ ಈಜಾಡಲು ಹೋಗಿದ್ದು, ಸಮುದ್ರ ತೀರದಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ವೆಂಕಟೇಶ್, ಸಮುದ್ರದ ಅಲೆಗೆ ಆಯತಪ್ಪಿ ನೀರಿನಲ್ಲಿ ಮುಳುಗಿದರು. ತೀವ್ರವಾಗಿ ಅಸ್ವಸ್ಥಗೊಂಡ ಇವರು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story