ದ.ಕ. ಜಿಲ್ಲಾ ಕಸಪಾ ಪದಾಧಿಕಾರಿಗಳ ಪಟ್ಟಿ ಪ್ರಕಟ
ಮಂಗಳೂರು, ಜ. 25: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನೂತನ ಚುನಾಯಿತ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಕಾರ್ಯದರ್ಶಿಗಳಾಗಿ ರಾಜೇಶ್ವರಿ ಎಂ, ಬೆಳ್ತಂಗಡಿ, ಎಚ್. ವಿನಯ ಆಚಾರ್ಯ, ಗೌರವ ಕೋಶಾಧ್ಯಕ್ಷರಾಗಿ ಪೂತ್ತೂರು ಬಿ.ಐತ್ತಪ್ಪನಾಯ್ಕ ಆಯ್ಕೆಯಾಗಿದ್ದಾರೆ.
ಮಂಗಳೂರು ತಾಲೂಕು ಅಧ್ಯಕ್ಷರಾಗಿ ಡಾ. ಮಂಜುನಾಥ್ ಎಸ್. ರೇವಣಕರ್, ಬೆಳ್ತಂಗಡಿ ತಾಲೂಕಿಗೆ ಡಿ. ಯದುಪತಿ ಗೌಡ, ಸುಳ್ಯ ತಾಲೂಕಿಗೆ ಚಂದ್ರಶೇಖರ ಪೇರಾಲು, ಪುತ್ತೂರು ತಾಲೂಕಿಗೆ ಉಮೇಶ್ ನಾಯಕ್, ಬಂಟ್ವಾಳ ತಾಲೂಕಿಗೆ ವಿಶ್ವನಾಥ ಬಂಟ್ವಾಳ, ಕಡಬ ತಾಲೂಕಿಗೆ ಸೇಸಪ್ಪರೈ, ಮೂಡಬಿದಿರೆ ತಾಲೂಕಿಗೆ ವೇಣುಗೋಪಾಲ ಶೆಟ್ಟಿ ಕೆ., ಮುಲ್ಕಿ ತಾಲೂಕಿಗೆ ಗಾಯತ್ರಿ ಎಸ್. ಉಡುಪ, ಉಳ್ಳಾಲ ತಾಲೂಕಿಗೆ ಡಾ.ಧನಂಜಯ ಕುಂಬ್ಳೆ ಆಯ್ಕೆಯಾಗಿದ್ದಾರೆ.
ಮಹಿಳಾ ಪ್ರತಿನಿಧಿಗಳಾಗಿ ಅರುಣಾಕುಮಾರಿ ಹಾಗೂ ತೇಜಸ್ವಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಲ್ಲತಡ್ಕ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಸುಂದರ ನಾಯ್ಕ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಮೋಹನದಾಸ ಸುರತ್ಕಲ್ ಹಾಗೂ ಜಿಲ್ಲಾ ವಾರ್ತಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.