Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಊಟಕ್ಕೆ ಬರಗಾಲವಿದ್ದ ಕಾಲವದು... ಒಂದು...

ಊಟಕ್ಕೆ ಬರಗಾಲವಿದ್ದ ಕಾಲವದು... ಒಂದು ಹೊತ್ತಿನ ಕೂಲಿನ ಜತೆ ಹಗಲು-ರಾತ್ರಿ ಸುರಂಗ ಕೊರೆತ!

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮಹಾಲಿಂಗ ನಾಯ್ಕ ಅಭಿಮತ

ವಾರ್ತಾಭಾರತಿವಾರ್ತಾಭಾರತಿ26 Jan 2022 1:23 PM IST
share
ಊಟಕ್ಕೆ ಬರಗಾಲವಿದ್ದ ಕಾಲವದು... ಒಂದು ಹೊತ್ತಿನ ಕೂಲಿನ ಜತೆ ಹಗಲು-ರಾತ್ರಿ ಸುರಂಗ ಕೊರೆತ!

ಮಂಗಳೂರು, ಜ.26: ಅಂದು ಒಂದು ಹೊತ್ತಿನ ಊಟಕ್ಕೂ ಬರಗಾಲವಿದ್ದ ಕಾಲವದು. ಒಂದೆಡೆ ಊಟಕ್ಕಾಗಿ ಪರದಾಟ, ಇನ್ನೊಂದೆಡೆ ನೀರಿಗಾಗಿ ಕಾದಾಟ. ಹಾಗಾಗಿ ಒಂದು ಹೊತ್ತು ಕೂಲಿ ಕೆಲಸ, ಮಧ್ಯಾಹ್ನದ ಬಳಿಕ ನಡು ರಾತ್ರಿವರೆಗೆ ಸುರಂಗ ಕೊರೆತ...

ಇದು ದೇಶದ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನದಾಳದ ಮಾತು.

ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿದ್ದ ಅವರು, ತಮ್ಮ ಹೋರಾಟದ ಯಶೋಗಾಥೆಯನ್ನು ಬಿಚ್ಚಿಟ್ಟಿದ್ದು ಹೀಗೆ.

‘‘ಸುಮಾರು 40 ವರ್ಷಗಳ ಹಿಂದಿನ ಸಂಗತಿಯದು. ಮಹಾಬಲ ಭಟ್ಟರ ಮೂಲಕ ಎರಡು ಎಕರೆ ಗುಡ್ಡವನ್ನು ದರ್ಖಾಸ್ತು ರೂಪದಲ್ಲಿ ಪಡೆದಿದ್ದೆ. ಅಲ್ಲಿ ನೀರು ಇದೆಯೋ ಎಂದು ಗೊತ್ತಿಲ್ಲ. ನೀರೇ ಇಲ್ಲದ ಹುಲ್ಲು ಬೆಳೆದ ಗುಡ್ಡ. ಕುಡಿಯಲು ನೀರಿಲ್ಲ. ಕೆಲ ವರ್ಷಗಳ ಕಾಲ ಸುಮಾರು ಒಂದೂವರೆ ಕಿ.ಮೀ. ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ. ಹಾಗಾಗಿ ಗುಡ್ಡದಲ್ಲಿ ನೀರು ಸಿಗುವುದೇನೋ ಎಂದು ಸುರಂಗ ಕೊರೆಯಲು ಆರಂಭಿಸಿದೆ. ಆ ಸ್ಥಳದಲ್ಲಿ ನೀರು ಇರುವ ಬಗ್ಗೆ ಅರಿವಿಲ್ಲದೇ, ದೇವರ ಮೇಲೆ ಭಾರ ಹಾಕಿ ನಾನು ಸುರಂಗ ತೋಡಲು ಮುಂದಾಗಿದ್ದೆ. ಮಕ್ಕಳು ಸಣ್ಣ, ಶಾಲೆಗೆ ಹೋಗುತ್ತಿದ್ದರು. ಹಾಗಾಗಿ ಏಕಾಂಗಿಯಾಗಿಯೇ ನಾನು ಸುರಂಗಗಳನ್ನು ಕೊರೆದೆ. ಗುಡ್ಡ ಕಾಡು, ಸಂಜೆಯಾಗುತ್ತಲೇ ಕತ್ತಲು ಅದಕ್ಕಾಗಿ ತೆಂಗಿನ ಎಣ್ಣೆ ದೀಪ ಬಳಸಿ ರಾತ್ರಿ ಹೊತ್ತು ಸುರಂಗಗಳನ್ನು ಕೊರೆಯುತ್ತಾ ಹೋದೆ. ಒಂದರಲ್ಲಿ ನೀರು ಸಿಗದಾಗ ಮತ್ತೊಂದು. ಹೀಗೆ ಏಳು ಸುರಂಗಗಳನ್ನು ಕೊರೆದೆ. ಅದರಲ್ಲಿ ಎರಡರಲ್ಲಿ ನೀರು ಸಿಕ್ಕಿತು. ಬಳಿಕ ಕೃಷಿ ಆರಂಭಿಸಿದೆ. ಪತ್ನಿ ಬಿಡುವಿದ್ದಾಗ ಸುರಂಗ ತೋಡಿದ ಮಣ್ಣನ್ನು ತೆರವುಗೊಳಿಸಲು ಸಹಕಾರ ನೀಡುತ್ತಿದ್ದರು. ಪಂಪ್ ಬಳಸದೆಯೇ ನನಗೆ ಹೊಳೆದ ಆಲೋಚನೆಯಂತೆ ತೋಟಕ್ಕೆ ನೀರನ್ನು ಹಾಯಿಸುವ ತಂತ್ರವನ್ನು ನನ್ನದಾಗಿಸಿಕೊಂಡಿರುವೆ.

ನೀರಿನ ಮಹತ್ವ ಚೆನ್ನಾಗಿ ತಿಳಿದಿದೆ. ಹಾಗಾಗಿ ನೀರು ಪೋಲಾಗದಂತೆ ಬೆಳೆಗಳಿಗೆ ಎಷ್ಟು ಅಗತ್ಯವೋ ಅಷ್ಟೇ ನೀರನ್ನು ಹಾಯಿಸಲಾಗುತ್ತದೆ. ಮಾತ್ರವಲ್ಲದೆ, ಇಂಗು ಗುಂಡಿಗಳನ್ನೂ ನಿರ್ಮಿಸಿಕೊಂಡಿದ್ದೇನೆ. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ ಬೆಳೆಯ ಜತೆಗೆ ಜೇನು ಕೃಷಿಯನ್ನೂ ಮಾಡುತ್ತಿದ್ದೇನೆ.

ಪ್ರಶಸ್ತಿ ಬರುತ್ತದೆ ಎಂದು ನಾನು ಅಂದು ಸುರಂಗ ತೋಡಲಿಲ್ಲ. ಅಂದು ನನಗೆ ನೀರಿನ ಅಗತ್ಯವಿತ್ತು. ಹಾಗಾಗಿ ಸುರಂಗ ತೋಡುವುದನ್ನು ನಾನು ನನ್ನ ಶ್ರಮವಾಗಿಸಿದೆ. ಛಲ ಬಿಡದೆ ಮುಂದುವರಿಸಿದೆ. ಆ ಶ್ರಮಕ್ಕಿಂದು ದೇಶದ ಅತ್ಯುನ್ನತ ಪ್ರಶಸ್ತಿ ಸಿಗುತ್ತಿರುವುದು ಖುಷಿ ನೀಡಿದೆ.

ನನ್ನ ಈ ಶ್ರಮವನ್ನು ಗುರುತಿಸಿದ್ದು ವಾರಣಾಸಿ ಸುಬ್ರಾಯ ಭಟ್ಟರು. 2004ರಲ್ಲಿ ಅವರು ಶಾಲೆಯೊಂದರಲ್ಲಿ ಸನ್ಮಾನ ಮಾಡಿದ್ದರು. ಬಳಿಕ ಒಂದರ ಮೇಲೊಂದರಂತೆ ಪ್ರಶಸ್ತಿಗಳು ಬಂದಿವೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಫೋನ್ ಕರೆ ಬಂದಿದ್ದು, ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡಿದ ಒಬ್ಬರು ಪ್ರಶಸ್ತಿ ಬಗ್ಗೆ ಹೇಳಿದ್ದರು. ಆದರೆ ನನಗದು ಅರ್ಥವಾಗಿರಲಿಲ್ಲ. ಬಳಿಕ ಕೃಷಿ ಇಲಾಖೆಯ ಮೂಲ ಪ್ರಶಸ್ತಿ ಬಂದಿರುವುದು ತಿಳಿಯಿತು’’.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X