Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಧಿಕೃತವಾಗಿ ʼಟಾಟಾ ಗ್ರೂಪ್‌ʼ ತೆಕ್ಕೆಗೆ...

ಅಧಿಕೃತವಾಗಿ ʼಟಾಟಾ ಗ್ರೂಪ್‌ʼ ತೆಕ್ಕೆಗೆ ಬಿದ್ದ ಏರ್‌ ಇಂಡಿಯಾ; ಪ್ರಧಾನಿ ಮೋದಿ ಕೈಗೊಂಡ ʼಅಭಿವೃದ್ಧಿʼ ಕುರಿತು ಶ್ಲಾಘನೆ

ವಾರ್ತಾಭಾರತಿವಾರ್ತಾಭಾರತಿ27 Jan 2022 4:39 PM IST
share
ಅಧಿಕೃತವಾಗಿ ʼಟಾಟಾ ಗ್ರೂಪ್‌ʼ ತೆಕ್ಕೆಗೆ ಬಿದ್ದ ಏರ್‌ ಇಂಡಿಯಾ; ಪ್ರಧಾನಿ ಮೋದಿ ಕೈಗೊಂಡ ʼಅಭಿವೃದ್ಧಿʼ ಕುರಿತು ಶ್ಲಾಘನೆ

ಹೊಸದಿಲ್ಲಿ,ಜ.27: ಟಾಟಾ ಸಮೂಹವು ಗುರುವಾರ ಸರಕಾರದಿಂದ ಏರ್ ಇಂಡಿಯಾವನ್ನು ಅಧಿಕೃತವಾಗಿ ಹಸ್ತಾಂತರಿಸಿಕೊಂಡಿದೆ. ‘ಟಾಟಾ ಸಮೂಹದಲ್ಲಿ ಏರ್ ಇಂಡಿಯಾವನ್ನು ಮರಳಿ ಪಡೆದುಕೊಳ್ಳುತ್ತಿರುವುದು ನಮಗೆ ಅತೀವ ಸಂತಸವನ್ನಂಟು ಮಾಡಿದೆ ’ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್ ಹೇಳಿದರು. ಅಧಿಕೃತ ಹಸ್ತಾಂತರಕ್ಕೆ ಮುನ್ನ ಚಂದ್ರಶೇಖರನ್ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದರು.

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸರಕಾರವು ಏರ್ ಇಂಡಿಯಾವನ್ನು 18,000 ಕೋ.ರೂ.ಗಳಿಗೆ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯ ಅಂಗ ಸಂಸ್ಥೆ ಟಾಲೇಸ್ ಪ್ರೈ.ಲಿ.ಗೆ ಮಾರಾಟ ಮಾಡಿತ್ತು. ಬಳಿಕ ಏರ್ ಇಂಡಿಯಾದಲ್ಲಿನ ಶೇ.100 ಪಾಲು ಬಂಡವಾಳವನ್ನು ಮಾರಾಟ ಮಾಡುವ ಸರಕಾರದ ಇಚ್ಛೆಯನ್ನು ದೃಢಪಡಿಸಿ ಟಾಟಾ ಸಮೂಹಕ್ಕೆ ಆಶಯ ಪತ್ರವನ್ನು ನೀಡಲಾಗಿತ್ತು. ಈ ವ್ಯವಹಾರಕ್ಕಾಗಿ ಶೇರು ಖರೀದಿ ಒಪ್ಪಂದಕ್ಕೆ ಕೇಂದ್ರ ಸರಕಾರವು ಸಹಿ ಮಾಡಿತ್ತು.

ಒಪ್ಪಂದದ ಅಂಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿಯ ಶೇ.50ರಷ್ಟು ಪಾಲು ಬಂಡವಾಳವನ್ನೂ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುತ್ತದೆ.

ಟಾಟಾ ಸಮೂಹವು ಹರಾಜಿನಲ್ಲಿ ಸ್ಪೈಸ್ ಜೆಟ್ ಪ್ರವರ್ತಕ ಅಜಯ ಸಿಂಗ್ ನೇತೃತ್ವದ ಒಕ್ಕೂಟವು ಸಲ್ಲಿಸಿದ್ದ 15,100 ಕೋ.ರೂ.ಗಳ ಬಿಡ್ ಮತ್ತು ಸರಕಾರವು ನಿಗದಿಗೊಳಿಸಿದ್ದ 12,906 ಕೋ.ರೂ.ಗಳ ಮೀಸಲು ಬೆಲೆಯನ್ನು ಹಿಂದಿಕ್ಕಿ ಏರ್ ಇಂಡಿಯಾವನ್ನು ತನ್ನದಾಗಿಸಿಕೊಂಡಿತ್ತು.

2003-04ರಿಂದೀಚಿಗೆ ಇದು ಮೊದಲ ಖಾಸಗೀಕರಣವಾಗಿದ್ದು,ಏರ್ ಇಂಡಿಯಾ ಟಾಟಾ ಸಮೂಹದ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ. ಅದು ಈಗಾಗಲೇ ಏರ್ಏಷ್ಯಾ ಇಂಡಿಯಾ ಮತ್ತು ವಿಸ್ತಾರ ವಿಮಾನಯಾನ ಸಂಸ್ಥೆಗಳಲ್ಲಿ ಶೇ.51ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

ಏರ್ ಇಂಡಿಯಾದ ವಸಂತ ವಿಹಾರ ಹೌಸಿಂಗ್ ಕಾಲನಿ,ಮುಂಬೈನ ನರಿಮನ್ ಪಾಯಿಂಟ್‌ನಲ್ಲಿರುವ ಏರ್ ಇಂಡಿಯಾ ಕಟ್ಟಡ ಮತ್ತು ದಿಲ್ಲಿಯಲ್ಲಿಯ ಏರ್ ಇಂಡಿಯಾ ಕಟ್ಟಡದಂತಹ ಪ್ರಮುಖವಲ್ಲದ ಆಸ್ತಿಗಳ ಮೇಲೆ ಟಾಟಾ ಸಮೂಹಕ್ಕೆ ಹಕ್ಕು ಇರುವುದಿಲ್ಲ.

ಸದ್ಯ ಏರ್ ಇಂಡಿಯಾ ದೇಶಿಯ ವಿಮಾನ ನಿಲ್ದಾಣಗಳಲ್ಲಿ 4,400ಕ್ಕೂ ಅಧಿಕ ದೇಶಿಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಸ್ಲಾಟ್‌ಗಳು ಮತ್ತು ವಿದೇಶಗಳಲ್ಲಿ 900 ಸ್ಲಾಟ್‌ಗಳನ್ನು ನಿಯಂತ್ರಿಸುತ್ತಿದೆ.

ಟಾಟಾ ಸಮೂಹವು ಪಡೆಯಲಿರುವ ಏರ್ ಇಂಡಿಯಾದ 141 ವಿಮಾನಗಳ ಪೈಕಿ 42 ಲೀಸ್ ಆಧಾರದಲ್ಲಿದ್ದು,ಉಳಿದ 99 ವಿಮಾನಗಳು ಸ್ವಂತದ್ದಾಗಿವೆ.

ಕೇಂದ್ರ ಸರಕಾರವು ಕಳೆದೊಂದು ದಶಕದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾ ಜೀವ ಉಳಿಸಿಕೊಳ್ಳುವಂತಾಗಲು ನಗದು ಬೆಂಬಲ ಮತ್ತು ಸಾಲ ಖಾತರಿಗಳ ಮೂಲಕ 1.10 ಲ.ಕೋ.ಗೂ ಅಧಿಕ ಹಣವನ್ನು ಅದಕ್ಕೆ ಹರಿಸಿತ್ತು. ಹಾಲಿ ಏರ್ ಇಂಡಿಯಾ ದಿನವೊಂದಕ್ಕೆ 20 ಕೋ.ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ.

ಟಾಟಾಗಳು 1932ರಲ್ಲಿ ಟಾಟಾ ಏರ್‌ಲೈನ್ಸ್‌ನ್ನು ಅನ್ನು ಸ್ಥಾಪಿಸಿದ್ದು, 1946ರಲ್ಲಿ ಅದರ ಹೆಸರನ್ನು ಏರ್ ಇಂಡಿಯಾ ಎಂದು ಬದಲಿಸಲಾಗಿತ್ತು. 1953ರಲ್ಲಿ ಸರಕಾರವು ಏರ್ ಇಂಡಿಯಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತಾದರೂ ಜೆಆರ್‌ಡಿ ಟಾಟಾ ಅವರು 1977ರವರೆಗೂ ಅದರ ಅಧ್ಯಕ್ಷರಾಗಿ ಮುಂದುವರಿದಿದ್ದರು. ಇಂದಿನ ಹಸ್ತಾಂತರದಿಂದ ಏರ್ ಇಂಡಿಯಾ 67 ವರ್ಷಗಳ ಬಳಿಕ ತನ್ನ ತವರು ಟಾಟಾ ಸಮೂಹಕ್ಕೆ ಮರಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X