ಮಂಗಳೂರು: ಜ.29ರಂದು ವಿದ್ಯುತ್ ವ್ಯತ್ಯಯ
ಮಂಗಳೂರು, ಜ.28: ನಗರದ ಕುಲಶೇಖರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವು ದರಿಂದ ಜ.29ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕುಲಶೇಖರ ಉಪ ಕೇಂದ್ರದಿಂದ ಹೊರಡುವ ಕುಡುಪು ಮತ್ತು ನೀರುಮಾರ್ಗ ಫೀಡರ್ನಲ್ಲಿ ಕುಲಶೇಖರ ಡೈರಿ, ಸರಿಪಲ್ಲ, ಕಣ್ಣಗುಡ್ಡೆ, ಕುಲಶೇಖರ ಚೌಕಿ, ಕುಡುಪು ದೇವಸ್ಥಾನ, ಪಿಲಿಕುಮೇರಿ, ಕುಲಶೇಖರ, ಉಮಿಕಾನ, ಎಸ್.ಹೆಚ್.ನಗರ, ದಯಾಂಬು, ಭಟ್ರಕೋಡಿ, ನೀರುಮಾರ್ಗ, ಕೆಲರಾಯಿ, ತಾರಿಗುಡ್ಡೆ, ಮಾಣೂರು, ಬಿತ್ತುಪಾದೆ, ಮಲ್ಲೂರು, ಬದ್ರಿಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬೈಕಂಪಾಡಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜ.30ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೋಕೂರು, ಕುಳಾಯಿ, ಹೊಸಬೆಟ್ಟು, ಬೈಕಂಪಾಡಿ, ಅಂಗರ ಗುಂಡಿ, ಕುಡುಂಬೂರು, ಎಪಿಎಂಸಿ ಮಾರ್ಕೆಟ್, ನಿತ್ಯನಗರ, ಪ್ರೀತಿನಗರ, ಸಣ್ಣನಗರ, ಪ್ರಗತಿನಗರ, ಎಂಎಸ್ಇ ಝೆಡ್ ಕಾಲನಿ, 62ನೇ ತೋಕೂರು, ರಾಮನಗರ, ಶಿವಗಿರಿನಗರ, ರಾಘವೇಂದ್ರ ಮಠ, ದ್ವಾರಕ ನಗರ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ನಿಲಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.







