Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭೂತ ಪೂಜೆ ಮತ್ತು ಪ್ರಾಣಿ ಬಲಿ ನಿಷೇಧ

ಭೂತ ಪೂಜೆ ಮತ್ತು ಪ್ರಾಣಿ ಬಲಿ ನಿಷೇಧ

ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು

ಬಾಬು ಶಿವ ಪೂಜಾರಿಬಾಬು ಶಿವ ಪೂಜಾರಿ29 Jan 2022 3:50 PM IST
share
ಭೂತ ಪೂಜೆ ಮತ್ತು ಪ್ರಾಣಿ ಬಲಿ ನಿಷೇಧ

ನಾರಾಯಣ ಗುರುಗಳು ಭೂತ, ಪ್ರೇತ, ದೈವಗಳಿಗೆ ಪ್ರಾಣಿ ಬಲಿ, ಕಳ್ಳು ಸಾರಾಯಿಗಳನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಅವುಗಳು ಪೂಜೆಗೆ ಯೋಗ್ಯವಲ್ಲವೆಂದು ಹೇಳಿದರು. ಭೂತ ದರ್ಶನಗಳು ನಂಬಿಕೆಗೆ ಅರ್ಹವಲ್ಲವೆಂದು ತ್ಯಜಿಸಲು ಕರೆ ಕೊಟ್ಟರು. ಒಮ್ಮೆ ಗುರುಗಳು ಚೆಂಗನ್ನೂರಿನಲ್ಲಿದ್ದಾಗ ಒಬ್ಬ ಮುದುಕನು ನಡುಗುತ್ತ ಬಂದು ತನ್ನ ಮೇಲೆ ದೈವಾವೇಶವಾಗಿದೆ. ನಾನು ಯಾರು ಗೊತ್ತೆ? ಎಂದನು. ಗುರುಗಳು ನೀನೊಬ್ಬ ಗಟ್ಟಿ ವ್ಯಕ್ತಿ ಎಂದರು. ಏನು ನನ್ನನ್ನು ತಮಾಷೆ ಮಾಡುವೆಯಾ? ನನ್ನ ಶಕ್ತಿಯನ್ನು ನೋಡ ಬಯಸುವೆಯಾ? ಎಂದು ಕೇಳಿದನು. ಗುರುಗಳು ನಗುತ್ತ ಹಲ್ಲುಗಳಿಲ್ಲದ ನಿನ್ನ ಬಾಯಲ್ಲಿ ಹಲ್ಲುಗಳನ್ನು ನೋಡ ಬಯಸುತ್ತೇನೆ ಎಂದರು. ತಬ್ಬಿಬ್ಬಾದ ಪಾತ್ರಿ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಬೇಡಿಕೊಂಡನು.

ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಪ್ರಾಣಿಗಳ ಬಲಿಯನ್ನು ಕೆಲವೊಮ್ಮೆ ಅವರೇ ಹೋಗಿ ನಿಲ್ಲಿಸುತ್ತಿದ್ದರು. ಪ್ರಾಣಿ ಬಲಿ ನಿಷೇಧದ ಕುರಿತು ಗುರು ಒಂದು ಕವಿತೆ ರಚಿಸಿದರು.

‘‘1) ಎಲ್ಲರೂ ಅಣ್ಣ ತಮ್ಮಂದಿರ ಹಾಗೆ, ಈ ಸತ್ಯತೆಯನ್ನು ನೆನಸುವಾಗ ನಮಗೆ ಪ್ರಾಣಿಗಳನ್ನು ಕೊಲ್ಲಲಿಕ್ಕೆ ಹೇಗೆ ಸಾಧ್ಯವಾಗುವುದು? ಅಯ್ಯೋ ಅವುಗಳನ್ನು ನಿಷ್ಕರುಣೆಯಿಂದ ಹೇಗೆ ತಿನ್ನುವುದು?

2) ಕೊಲ್ಲದಿರುವ ಪ್ರತಿಜ್ಞೆ ಒಳ್ಳೆಯದು. ಮಾಂಸ ತಿನ್ನದಿರುವ ಪ್ರತಿಜ್ಞೆಯು ಮತ್ತಷ್ಟು ಒಳ್ಳೆಯದು. ಓ ಜನರೇ, ಹೇಳಿರಿ, ಇದಲ್ಲವೇ ಎಲ್ಲಾ ಧರ್ಮಗಳ ಮೂಲ ತತ್ವ?

3) ಕೊಲ್ಲಲ್ಪಡಲು ಯಾರೂ ಇಚ್ಛಿಸುವುದಿಲ್ಲ, ಈ ಅನರ್ಥವನ್ನು ತಾನು ಇಚ್ಛಿಸದಿರುವಾಗ, ಅದು ಬೇರೆಯವರಿಗೆ ಹೇಗೆ ಪ್ರಿಯವಾಗಬೇಕು ಎಲೋ, ಉತ್ತಮ ಜನರೇ ಹೇಳಿರಿ, ನ್ಯಾಯವು ಎಲ್ಲರಿಗೂ ಒಂದೇ ಅಲ್ಲವೇ?

4) ಯಾರೂ ತಿನ್ನುವವರಿಲ್ಲದಿದ್ದರೆ ಯಾರೂ ಕೊಲ್ಲುವುದಿಲ್ಲ, ತಿನ್ನುವುದರಿಂದಲೇ ಕೊಲ್ಲುವುದು ನಡೆಯುತ್ತದೆ. ಆದ್ದರಿಂದ ತಿನ್ನುವುದು ಕೊಲ್ಲುವುದಕ್ಕಿಂತಲೂ ದೊಡ್ಡ ಪಾಪ.

5) ಯಾರು ಕೊಲ್ಲುವುದಿಲ್ಲವೋ ಅವರು ಧಾರ್ಮಿಕರು. ಉಳಿದವರು ಕ್ರೂರ ಜಂತುಗಳು. ಉಳಿದ ಎಲ್ಲಾ ಗುಣಗಳಿದ್ದರೂ ಕೊಲ್ಲುವವನಿಗೆ ಶಾಂತಿ ದೊರೆಯದು’’

ಈ ಮೇಲಿನ ಕವಿತೆಯನ್ನು ಗುರುದೇವರು ಅಹಿಂಸೆಯ ಪರವಾಗಿ ರಚಿಸಿದರು.

‘‘ಪ್ರೇಮವಿಲ್ಲದಿದ್ದರೆ ಮನುಷ್ಯನು ಎಲುಬು, ಚರ್ಮ, ನಾಡಿಗಳು ಮತ್ತು ದುರ್ವಾಸನೆಯ ಆಕಾರ ಮಾತ್ರ’’ ಎಂದು ಹೇಳುತ್ತಿದ್ದರು. ‘‘ಓ ಕರುಣಾಕರನಾದ ದೇವನೇ ನಾವು ಒಂದು ಇರುವೆಗೂ ಹಿಂಸೆಯನ್ನುಂಟು ಮಾಡದಂತೆ ನಮ್ಮ ಹೃದಯಕ್ಕೆ ಕರುಣೆಯನ್ನು ಕೊಡು’’ ಇದು ಅಹಿಂಸೆಗಾಗಿ ದೇವರಲ್ಲಿ ಗುರುದೇವರ ಮೊರೆಯಾಗಿತ್ತು,

ತಿರಂಡುಕುಳಿ, ಪುಳಿಕುಟ ನಿಷೇಧ

ಹೆಣ್ಣು ಋತುಮತಿಯರಾದಾಗ ಮಾಡುವ ವಿಧಿಯೇ ತಿರಂಡುಕುಳಿ. ಕನ್ಯೆಯರು ಪ್ರಥಮ ಋತುಮತಿಯರಾದಾಗ ಅವರ ಫಲವಂತಿಕೆಯ ಸೌಭಾಗ್ಯ ಅಕ್ಷಯವಾಗಲೆಂದು ಈ ವಿಧಿಯ ಒಂದು ಆಶಯವಾದರೆ ಇನ್ನೊಂದು ಹೆಣ್ಣು ದೈಹಿಕವಾಗಿ ಮದುವೆಗೆ ಸಿದ್ಧಳಾಗಿದ್ದಾಳೆ ಎನ್ನುವುದನ್ನು ಸಾರ್ವತ್ರಿಕ ಜಾಹೀರುಗೊಳಿಸುವ ಔತಣ.

ಬಿಲ್ಲವರು ಇದನ್ನು ತಲೆನೀರು ಮದುವೆ ಎನ್ನುತ್ತಿದ್ದರು. ಸಿಪ್ಪೆ ಸಹಿತ ಐದು ತೆಂಗಿನ ಕಾಯಿಯ ಮೇಲೆ ತೆಂಗಿನ ಮರದ ಬುಡದಲ್ಲಿ ಗುರಿಕಾರರ ಮನೆಯ, ಊರ ಮತ್ತು ಮನೆಯ ಮುತ್ತೈದೆಯರು ಸೇರಿ ವಿಧಿವತ್ತಾಗಿ ಪ್ರಥಮ ಋತುಮತಿಯಾದ ಹೆಣ್ಣಿಗೆ ಸ್ನಾನ ಮಾಡಿಸುವುದು ಮತ್ತು ಕೊನೆಯ ದಿನ ಗರಡಿಯಲ್ಲಿ ಸ್ನಾನ ಮಾಡಿಸಿ ಶುದ್ಧ ಮಾಡುವುದರಿಂದ ಮತ್ತು ಮದುವೆಯಂತೆ ಸಮಾರಂಭ ಮಾಡುವುದರಿಂದ ತಲೆ ನೀರು ಮದುವೆ ಎಂದು ಹೆಸರು ಬಂದಿರಬಹುದು. ಹೆಣ್ಣಿನ ಸಂಬಂಧಿಕರು ಮತ್ತು ಊರ ಕೆಲವರು ಈ ದಿನಗಳಲ್ಲಿ ಬೆಲ್ಲ, ಕಾಯಿ ಕಲಸಿದ ಅವಲಕ್ಕಿ ಮುಂತಾದ ತಿಂಡಿಗಳನ್ನು ತಂದು ಕೊಡುವ ಪದ್ಧತಿಯೂ ಇದೆ. ಋತುಮತಿಯಾದ ಏಳು ಅಥವಾ ಒಂಭತ್ತನೇ ದಿನ ಹುಡುಗಿಯನ್ನು ವಧುವಿನಂತೆ ಸಿಂಗರಿಸಿ ಸಭೆಯಲ್ಲಿ ಕುಳ್ಳಿರಿಸಿ ಆರತಿ ಎತ್ತಿ ಅಕ್ಷತೆ ಹಾಕುತ್ತಾರೆ. ಮದುವೆ ಆಗಿದ್ದರೆ ಗಂಡನ ಮನೆಗೆ ಇಲ್ಲದಿದ್ದರೆ ಹೆಣ್ಣಿನ ಸಂಬಂಧಿಕರ ಮನೆಗೆ ಒಂದು ರಾತ್ರಿಗಾದರೂ ಕಳುಹಿಸುತ್ತಾರೆ.

ಕೇರಳದಲ್ಲಿ ಹೆಚ್ಚು ಕಡಿಮೆ ಇದೇ ರೀತಿಯ ವಿಧಿಗಳಿದ್ದು ಅದನ್ನು ‘ತಿರಂಡುಕುಳಿ’ ಎನ್ನುತ್ತಿದ್ದರು. ತಿರಂಡುಕುಳಿಯಲ್ಲಿ ಹೆಣ್ಣು ಮದುವೆ ಆಗಿದ್ದರೆ ಅವಳ ನಾದಿನಿಯವರು ಯಾರಾದರೂ ಒಂದು ಹೊಸ ಸೀರೆ ಕೊಟ್ಟು ಅವಳನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದರು. ಇದು ಬಹು ಖರ್ಚಿನದ್ದಾಗಿತ್ತು. ಇದು ಅನಗತ್ಯ ವಿಧಿ ಎಂದು ತ್ಯಜಿಸಲು ಗುರು ಕರೆ ಕೊಟ್ಟರು.

ಹೆಂಡತಿ ಚೊಚ್ಚಲ ಗರ್ಭಿಣಿ ಆದ ಏಳನೇ ತಿಂಗಳಲ್ಲಿ ಗಂಡನು ಏಳು ಬೇರುಗಳ ಮಿಶ್ರಣದ ರಸವನ್ನು ಕುಡಿಯಲು ಕೊಡುವ ವಿಧಿ ‘ಪುಳಿಕುಟಿ’ ಇದಕ್ಕೂ ಸಾರ್ವಜನಿಕರ ಔತಣದ ಸಂಭ್ರಮ. ಇದರಲ್ಲಿ ಅನವಶ್ಯಕ ಆರ್ಥಿಕ ವ್ಯಯವಾಗುತ್ತಿತ್ತು. ಆದ್ದರಿಂದ ಇದನ್ನು ಅನಗತ್ಯವೆಂದು ಗುರು ನಿಷೇಧಿಸಿದರು. ಈ ಕುಟಿಯಲ್ಲಿಯ ಕೆಲವು ವಟಮೂಲಗಳು ಹುಟ್ಟುವ ಮಗುವಿನ ದೈಹಿಕ ಮತ್ತು ಮಾನಸಿಕ ವಿಕಾಸದಲ್ಲಿ ದುಷ್ಪರಿಣಾಮಗಳನ್ನು ಬೀರುವ ಕಾರಣ ಗುರುದೇವರು ಇದನ್ನು ನಿಷೇಧಿಸಿದ್ದರು ಎಂದು ಕೆಲವರು ಈ ಗ್ರಂಥಕರ್ತನಿಗೆ ಹೇಳಿದ್ದುಂಟು. ಆದರೆ ಇದಕ್ಕೆ ಲಿಖಿತ ದಾಖಲೆಗಳು ಇಲ್ಲ.

ಸತ್ತವರಿಗೆ ಮಾಡುವ ವಿಜೃಂಭಣೆಯ ಉತ್ತರ ಕ್ರಿಯಾ ವಿಧಿಗಳನ್ನು ಕೊನೆಗೊಳಿಸಿ ಸರಳ ವಿಧಾನಗಳನ್ನು ಜಾರಿಗೆ ತಂದರು.

ಅರ್ಥರಹಿತ ಅನಗತ್ಯ ಸಂಪ್ರದಾಯಗಳು ಜನಸಾಮಾನ್ಯರನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುತ್ತಿದ್ದವು. ಕೆಲವೊಮ್ಮೆ ತಾಳಿಕೆಟ್ಟು ಕಲ್ಯಾಣಗಳು ಕನ್ಯೆಯರ ಮಾನಕ್ಕೆ ಮಾರಕವಾಗುತ್ತಿದ್ದವು. ಅನಾಗರಿಕ ಎನಿಸುವ ಸಂಪ್ರದಾಯಗಳಿಂದ ಸಮಾಜಕ್ಕೆ ಹಾನಿಯಲ್ಲದೆ ಪ್ರಯೋಜನಗಳಿರಲಿಲ್ಲ. ಆದ್ದರಿಂದ ಗುರು ಅಂತಹವುಗಳನ್ನು ನಿಲ್ಲಿಸಿದರು.

ಕೃಪೆ : ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ

share
ಬಾಬು ಶಿವ ಪೂಜಾರಿ
ಬಾಬು ಶಿವ ಪೂಜಾರಿ
Next Story
X