ಕುಂದಾಪುರ: ಕೆರೆಗೆ ಬಿದ್ದು ಮಹಿಳೆ ಮೃತ್ಯು
ಕುಂದಾಪುರ, ಜ.30: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜ.29ರಂದು ಬೆಳಗ್ಗೆ ಎಂಬಲ್ಲಿ ಅಸೋಡು ಗ್ರಾಮದ ಗರಡಿ ಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಅಸೋಡು ಗ್ರಾಮದ ನಾಗು ಪೂಜಾರಿ ಎಂಬವರ ಪತ್ನಿ ಸಾಧು ಪೂಜಾರ್ತಿ(70) ಎಂದು ಗುರುತಿಸಲಾಗಿದೆ. ಇವರು ದನವನ್ನು ಬಯಲಿಗೆ ಮೇಯಲು ಕಟ್ಟಿ ಹಾಕಲು ಹೋಗಿದ್ದು, ಈ ವೇಳೆ ಮನೆಯ ಹತ್ತಿರದ ಸವಿತಾ ಶೆಡ್ತಿಯವರ ಆವರಣವಿಲ್ಲದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story