ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಸೊರದಾಂತಿ ನಲಿಕೆ’ ಪ್ರಥಮ

ಉಡುಪಿ, ಫೆ.3: ತುಳುಕೂಟ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಏಳು ದಿನಗಳ ಕಾಲ ನಡೆದ ದಿ.ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮರಣಾರ್ಥ 20ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಸಂಗಮ ಕಲಾವಿದೆರ್ ಮಣಿಪಾಲ ತಂಡದ ‘ಸೊರದಾಂತಿ ನಲಿಕೆ’ ನಾಟಕ 20ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಸುಮನಸಾ ಕೊಡವೂರು ತಂಡದ ‘ಕಾಪ’ ನಾಟಕ 15ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ದ್ವಿತೀಯ ಮತ್ತು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ‘ಈದಿ’ ನಾಟಕ 10ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಶ್ರೇಷ್ಠ ನಿರ್ದೇಶಕ ಪ್ರಶಸ್ತಿ: ಪ್ರ-‘ಸೊರದಾಂತಿ ನಲಿಕೆ’ಯ ನಿರ್ದೇಶಕ ಭುವನ್ ಮಣಿಪಾಲ್, ದ್ವಿ-ಕಾಪ ನಿರ್ದೇಶಕ ದಿವಾಕರ್ ಕಟೀಲ್, ತೃ-ಈದಿ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ. ಶ್ರೇಷ್ಠ ರಂಗಪರಿಕರ/ಪ್ರಸಾಧನ ಪ್ರಶಸ್ತಿ: ಪ್ರ-ಸಂಗಮ ಕಲಾವಿದೆರ್, ದ್ವಿ-ಸುಮನಸಾ ಕೊಡವೂರು, ತೃ- ಭೂಮಿಗೀತ ಸಾಂಸ್ಕೃತಿಕ ವೇದಿಕೆ. ಶ್ರೇಷ್ಠ ಬೆಳಕು ಪ್ರಶಸ್ತಿ: ಪ್ರ-ರಾಜು ಮಣಿಪಾಲ (ಸಂಗಮ ಕಲಾವಿದೆರ್), ದ್ವಿ-ವಿಕಾಸ್ ಕಲಾಕುಲ್ ಮಂಗಳೂರು(ಭೂಮಿಗೀತ ಪಟ್ಲ), ತೃ- ಪ್ರವೀಣ್ ಜಿ.ಕೊಡವೂರು(ಸುಮನಸಾ ಕೊಡವೂರು).
ಶ್ರೇಷ್ಠ ಸಂಗೀತ ಪ್ರಶಸ್ತಿ: ಪ್ರ-ದಿವಾಕರ್ ಕಟೀಲ್(ಸುಮನಸಾ), ದ್ವಿ- ವಾಸುದೇವ ಗಂಗೇರ ಕುಂದಾಪುರ(ಭೂಮಿಗೀತ), ತೃ-ಮೇಘನಾ ಕುಂದಾಪುರ (ಚಿನ್ಮಯಿ ವಿ.ಭಟ್ ಜರ್ನಿ ಥೇಟರ್ ಗ್ರೂಪ್ ಮಂಗಳೂರು). ಶ್ರೇಷ್ಠ ನಟ ಪ್ರಶಸ್ತಿ: ಪ್ರ-ಪ್ರವೀಣ್ಚಂದ್ರ ತೋನ್ಸೆ(ಸುಮನಸಾ), ದ್ವಿ-ಸುನಿಲ್ ಪಲ್ಲಮಜಲು (ಜರ್ನಿ ಥೇಟರ್), ತೃ-ಜೀವನ್ ಕುಮಾರ್ (ಸುಮನಸಾ). ಶ್ರೇಷ್ಠ ನಟಿ ಪ್ರಶಸ್ತಿ: ಪ್ರ- ಚಂದ್ರಕಲಾ ರಾವ್ ಕದಿಕೆ(ಕರಾವಳಿ ಕಲಾವಿದರು ಮಲ್ಪೆತಂಡದ ಗಾವುದ ಪುಂಚ ನಾಟಕದ ಸಂಧ್ಯಾ), ದ್ವಿ-ವೀಣಾ ಸೊರದಾಂತಿ (ಮಣಿಪಾಲ ಸಂಗಮ ಕಲಾವಿದೆರ್ ನಲಿಕೆ ನಾಟಕದ ಪ್ರೇಮಾ), ೃ- ಸಹನಾ (ಈದಿ ನಾಟಕದ ಜರೀನಾ).
ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ರಾಘವೇಂದ್ರ ರಾವ್ ಕಟಪಾಡಿ(ರಂಜನಾ ಕಲಾವಿದರು ಕಟಪಾಡಿ ತಂಡದ ಕಮಲಿ ನಾಟಕದ ಜಯವಂತ್, ಸಂತೋಷ್ ಶೆಟ್ಟಿ ಹಿರಿಯಡ್ಕ(ಸೊರದಾಂತಿ ನಲಿಕೆ ನಾಟಕದ ಗುರು), ಅನೀಶ್ ಪ್ರಸಾದ್(ಸೊರದಾಂತಿ ನಲಿಕೆ ನಾಟಕದ ಭೀಮ), ಬಾಲಕೃಷ್ಣ ಕೊಡವೂರು(ನವಸುಮ ರಂಗಮಂಚ ಕೊಡವೂರು ತಂಡದ ಆಣ್ ಸುರ್ಪೊ ದುಲಯಿದ ಪೊಣ್ಣ ಕಣ್ಣ್ ನಾಟಕದ ಸಿಕಂಡಿ), ನಾಗರಾಜ ವರ್ಕಾಡಿ(ಗಾವುದ ಪುಂಚ ನಾಟಕದ ಅಪ್ಪಣ್ಣ ಜೋಯಿಸರು), ಅಕ್ಷತ್ ಅಮೀನ್(ಕಾಪ ನಾಟಕದ ಗಿರಿ), ಸುನೀತಾ ಎಕ್ಕೂರು(ಜರ್ನಿ ಥೇಟರ್ ಗ್ರೂಪ್ನ ಆದಿ ಅಳವುದ ಸಾದಿ ನಾಟಕದ ತಾಂಕಿನ ಅಪ್ಪೆ), ಶಶಿಪ್ರಭಾ ವಿವೇಕಾನಂದ(ಕಲಾವಿದರು ಕಟಪಾಡಿ ತಂಡದ ಕಮಲಿ ನಾಟಕದ ಸರಿತಾ ರಂಜನಾ), ಭಾರ್ಗವಿ(ಈದಿ ನಾಟಕದ ರೋಶನಿ).
ಸ್ಪರ್ಧೆ ತೀರ್ಪುಗಾರರಾಗಿ ರಂಗಕರ್ಮಿಗಳಾದ ಡಾ.ಪಿ.ಬಿ.ಪ್ರಸನ್ನ ಉಡುಪಿ, ಡಾ.ಭರತ್ ಕುಮಾರ್ ಪೊಲಿಪು ಮುಂಬಯಿ, ರಾಮ್ ಶೆಟ್ಟಿ ಹಾರಾಡಿ ಸಹಕರಿಸಿದ್ದರು. ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.20ರಂದು ಸಂಜೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ಸೊರದಾಂತಿ ನಲಿಕೆ ನಾಟಕದ ಮರುಪ್ರದರ್ಶನ ಆಯೋಜಿಸಲಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಸ್ಫರ್ಧೆಯ ಸಂಚಾಲಕ ಬಿ.ಪ್ರಭಾಕರ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.