Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2020ರ ಅಂತ್ಯದಲ್ಲಿ 4.83 ಲಕ್ಷ ಭಾರತೀಯರು...

2020ರ ಅಂತ್ಯದಲ್ಲಿ 4.83 ಲಕ್ಷ ಭಾರತೀಯರು ಜೈಲುಗಳಲ್ಲಿ ಕೊಳೆಯುತ್ತಿದ್ದರು:ಎನ್‌ಸಿಆರ್‌ಬಿ

ಶೇ.76ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು

ವಾರ್ತಾಭಾರತಿವಾರ್ತಾಭಾರತಿ3 Feb 2022 10:29 PM IST
share
2020ರ ಅಂತ್ಯದಲ್ಲಿ 4.83 ಲಕ್ಷ ಭಾರತೀಯರು ಜೈಲುಗಳಲ್ಲಿ ಕೊಳೆಯುತ್ತಿದ್ದರು:ಎನ್‌ಸಿಆರ್‌ಬಿ

ಹೊಸದಿಲ್ಲಿ,ಫೆ.3: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ವು ಬಹಿರಂಗಗೊಳಿಸಿರುವ ಅಂಕಿಅಂಶಗಳಂತೆ 2020ರ ಅಂತ್ಯದ ವೇಳೆಗೆ ದೇಶಾದ್ಯಂತದ ಜೈಲುಗಳಲ್ಲಿ 4.83 ಲಕ್ಷ ಭಾರತೀಯರಿದ್ದರು. ಈ ಪೈಕಿ ಶೇ.76ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳಾಗಿದ್ದು,ಶಿಕ್ಷೆಗೊಳಗಾದ ಕೈದಿಗಳ ಸಂಖ್ಯೆ ಶೇ.23ರಷ್ಟಿತ್ತು. 3,549 (ಶೇ.1ಕ್ಕೂ ಕಡಿಮೆ) ಕೈದಿಗಳು ವಿವಿಧ ಜೈಲುಗಳಲ್ಲಿ ಸ್ಥಾನಬದ್ಧತೆಯಲ್ಲಿ ಇರಿಸಲ್ಪಟ್ಟಿದ್ದರು ಎಂದು ಎಂದು ಎನ್‌ಸಿಆರ್‌ಬಿ ತನ್ನ ವಾರ್ಷಿಕ ‘ಜೈಲು ಅಂಕಿಅಂಶಗಳು ಭಾರತ 2020’ ವರದಿಯಲ್ಲಿ ತಿಳಿಸಿದೆ.

2020ರ ಅಂತ್ಯದ ವೇಳೆಗೆ ದೇಶಾದ್ಯಂತ ಜೈಲುಗಳಲ್ಲಿ 4,926 ವಿದೇಶಿ ಮೂಲದ ಕೈದಿಗಳೂ ಇದ್ದರು. ವಿಚಾರಣಾಧೀನ ಕೈದಿಗಳ ಪೈಕಿ ಹೆಚ್ಚಿನವರು 18ರಿಂದ 30 ವರ್ಷ ವಯೋಮಾನದವರಾಗಿದ್ದರೆ, ಶಿಕ್ಷೆಗೊಳಗಾದ ಹೆಚ್ಚಿನ ಕೈದಿಗಳು 30 ರಿಂದ 50 ವರ್ಷ ವಯೋಗುಂಪಿಗೆ ಸೇರಿದ್ದರು. ಒಟ್ಟು ಕೈದಿಗಳ ಪೈಕಿ 1.11 ಲಕ್ಷ (ಶೇ.23.04) ಜನರು ಶಿಕ್ಷೆಗೊಳಗಾದವರಾಗಿದ್ದರೆ,ವಿಚಾರಣಾಧೀನ ಕೈದಿಗಳ ಸಂಖ್ಯೆ 3.68 ಲ.(ಶೇ.76.17) ಮತ್ತು ಸ್ಥಾನಬದ್ಧತೆಯಲ್ಲಿದ್ದವರ ಸಂಖ್ಯೆ 3,549 (ಶೇ.0.73) ಆಗಿತ್ತು ಎಂದು ವರದಿಯು ತಿಳಿಸಿದೆ.

4.83 ಲ.ಕೈದಿಗಳ ಪೈಕಿ ಶೇ.96ರಷ್ಟು ಪುರುಷರು,ಶೇ.3.98ರಷ್ಟು ಮಹಿಳೆಯರು ಮತ್ತು ಶೇ.0.01 (70) ತೃತೀಯ ಲಿಂಗಿಗಳಾಗಿದ್ದರು.

ದೇಶದಲ್ಲಿಯ ಒಟ್ಟು ಕೈದಿಗಳ ಪೈಕಿ ಉತ್ತರ ಪ್ರದೇಶದ ಜೈಲುಗಳಲ್ಲಿ ಅತ್ಯಂತ ಹೆಚ್ಚು ಅಂದರೆ (1.06 ಲ.- ಶೇ.22.1) ಕೈದಿಗಳಿದ್ದರೆ,ನಂತರದ ಸ್ಥಾನಗಳಲ್ಲಿ ಬಿಹಾರ (51,849-ಶೇ.10.7) ಮತ್ತು ಮಧ್ಯಪ್ರದೇಶ (45,456-ಶೇ.9.4) ಇದ್ದವು.

ಶಿಕ್ಷೆಗೊಳಗಾದವರ ಪೈಕಿ ಅತ್ಯಂತ ಹೆಚ್ಚಿನ ಕೈದಿಗಳು ಉ.ಪ್ರದೇಶ (26,607-ಶೇ.23.9)ದಲ್ಲಿದ್ದರೆ,ಮಧ್ಯಪ್ರದೇಶ (13,641-ಶೇ.12.2) ಮತ್ತು ಬಿಹಾರ (7,730-ಶೇ.6.9) ನಂತರದ ಸ್ಥಾನಗಳಲ್ಲಿದ್ದವು.

ಶಿಕ್ಷೆಗೊಳಗಾದವರ ಪೈಕಿ 55,653(ಶೇ.49.9) ಕೈದಿಗಳು 30ರಿಂದ 50 ವರ್ಷ,31,935 (ಶೇ.28.7) ಕೈದಿಗಳು 18ರಿಂದ 30ವರ್ಷ ಮತ್ತು 23,856 (ಶೇ.21.4) ಕೈದಿಗಳು 50 ವರ್ಷ ಮತ್ತು ಹೆಚ್ಚಿನ ವಯೋಗುಂಪುಗಳಿಗೆ ಸೇರಿದ್ದರು.

ಉ.ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ (80,867-ಶೇ.21.8) ವಿಚಾರಣಾಧೀನ ಕೈದಿಗಳಿದ್ದರೆ,ನಂತರದ ಸ್ಥಾನಗಳಲ್ಲಿ ಬಿಹಾರ (44,113-ಶೇ.12) ಮತ್ತು ಮಧ್ಯಪ್ರದೇಶ (31,695-ಶೇ.8.6) ಇದ್ದವು. ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಂತ ಹೆಚ್ಚಿನವರು (1.79 ಲ.-ಶೇ.48.8) 18ರಿಂದ 30ವರ್ಷ,1.49 ಲ (ಶೇ.40.6) ಕೈದಿಗಳು 30ರಿಂದ 50 ವರ್ಷ,39,136 (ಶೇ.10.6)ಕೈದಿಗಳು 50 ವರ್ಷ ಮತ್ತು ಹೆಚ್ಚಿನ ವಯೋಗುಂಪುಗಳಿಗೆ ಸೇರಿದ್ದರು ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X