ಉಡುಪಿ, ಫೆ.6: ಚಲನಚಿತ್ರ ನಟ ಯಶ್ ರವಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದರು.
ಮಠದ ದಿವಾನರಾದ ವರದರಾಜ ಭಟ್, ಯಶ್ ಅವರಿಗೆ ಶಾಲು ಹಾಕಿ ಗೌರವಿಸಿ ಪ್ರಸಾದವನ್ನು ನೀಡಿ ಹರಸಿದರು. ಈ ಸಂದರ್ಭ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರನ್ನು ಯಶ್ ಭೇಟಿ ಮಾಡಿದರು.