ಮಂಗಳೂರು: ಪತ್ರಕರ್ತ ಬಿ.ಟಿ.ರಂಜನ್ ರಿಗೆ ಶ್ರದ್ಧಾಂಜಲಿ
![ಮಂಗಳೂರು: ಪತ್ರಕರ್ತ ಬಿ.ಟಿ.ರಂಜನ್ ರಿಗೆ ಶ್ರದ್ಧಾಂಜಲಿ ಮಂಗಳೂರು: ಪತ್ರಕರ್ತ ಬಿ.ಟಿ.ರಂಜನ್ ರಿಗೆ ಶ್ರದ್ಧಾಂಜಲಿ](https://www.varthabharati.in/sites/default/files/images/articles/2022/02/7/324239-1644219133.jpeg)
ಮಂಗಳೂರು, ಫೆ.7: ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಅವರ ನಿಧನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿಂದು ಶ್ರದ್ಧಾಂಜಲಿ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡುತ್ತಾ, ರಂಜನ್ ಸುಮಾರು ಮೂವತ್ತು ವರ್ಷಗಳ ಕಾಲ ಪತ್ರಕರ್ ರಾಗಿ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ನುಡಿನಮನ ಸಲ್ಲಿಸಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿಯ ಸದಸ್ಯ ಭಾಸ್ಕರ ರೈ ಕಟ್ಟ, ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ, ರವಿ ಪೊಸವಣಿಕೆ, ಶೇಖ್ ಝೈನುದ್ದೀನ್ ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2022/02/7/bt.jpg)
Next Story