ಉಳ್ಳಾಲ ಉರೂಸ್ ಯಶಸ್ವಿಗೊಳಿಸಲು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ

ಉಳ್ಳಾಲ : ಉಳ್ಳಾಲ ಹಝ್ರತ್ ಸೈಯ್ಯದ್ ಮದನಿ (ಖ.ಸ )ರವರ ಇಪ್ಪತ್ತೊಂದನೇ ಉರೂಸ್ ಸಮಾರಂಭವು ಫೆ. 10ರಿಂದ ಆರಂಭವಾಗಿ ಮಾ.6ರವರೆಗೆ ನಡೆಯಲ್ಲಿದ್ದು ನಾಡಿನ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಉದ್ಯಮಿ ಹಿತೈಷಿಗಳು ಉರೂಸಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಗತ್ಯ ಸಹಕಾರ ನೀಡಿ ಉರೂಸಿನ ಯಶಸ್ವಿಗೆ ಕಾರಣರಾಗಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ ಮಾಡಿದ್ದಾರೆ.
ಈ ಹಿಂದೆ ನಿಗದಿಯಾದ ಉರೂಸ್ ಕಾರ್ಯಕ್ರಮಗಳ ದಿನಾಂಕವನ್ನು ಸರಕಾರದ ಆದೇಶದ ಮೇರೆಗೆ ಎರಡು ಬಾರಿ ಮುಂದೂಡಬೇಕಾಗಿ ಬಂದ ಕಾರಣ ಮುಖಃತಾ ಕಂಡು ಆಹ್ವಾನಿಸಲು ಸಮಯಾವಕಾಶ ಕಡಿಮೆ ಇದೆ. ಆದ್ದರಿಂದ ಈ ಪತ್ರಿಕಾ ಹೇಳಿಕೆಯನ್ನೇ ಆಹ್ವಾನ ಪತ್ರ ಎಂದು ಭಾವಿಸಿ ಉರೂಸ್ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳಲ್ಲಿ ಆಗಮಿಸಿ, ಸಹಕರಿಸ ಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ವಿನಂತಿಸಿದ್ದಾರೆ.
Next Story