ಮಂಗಳೂರು; 3.48 ಕೋ. ರೂ. ಮೌಲ್ಯದ ಅಂಬರ್ ಗ್ರೀಸ್ ಸಹಿತ 6 ಮಂದಿ ಸೆರೆ

ಮಂಗಳೂರು, ಫೆ.8: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್ ಗ್ರೀಸ್ನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂದಿತರನ್ನು ಕುಂದಾಪುರದ ಪ್ರಶಾಂತ್ (24), ಬೆಂಗಳೂರಿನ ಸತ್ಯರಾಜ್ (32), ತೆಂಕ ಎಡಪದವಿನ ರೋಹಿತ್ (27), ಅಡ್ಡೂರಿನ ರಾಜೇಶ್ (37), ತೆಂಕ ಎಡಪದವಿನ ವಿರೂಪಾಕ್ಷ (37), ಕಾಪು ಮಲ್ಲಾರ್ನ ನಾಗರಾಜ್ (31) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 3.48 ಕೋ.ರೂ. ಮೌಲ್ಯದ 4.480 ಗ್ರಾಂ ತೂಕದ ಅಂಬರ್ ಗ್ರೀಸ್ ವಶಪಡಿಸಲಾಗಿದೆ.
ತಮಿಳ್ನಾಡಿನ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story