ಎರಡನೇ ಏಕದಿನ: ವೆಸ್ಟ್ಇಂಡೀಸ್ಗೆ 238 ರನ್ ಗುರಿ ನೀಡಿದ ಭಾರತ
ಸೂರ್ಯಕುಮಾರ್ ಯಾದವ್ ಅರ್ಧಶತಕ

Photo: BCCI
ಅಹಮದಾಬಾದ್, ಫೆ.9: ಮಧ್ಯಮ ಸರದಿಯ ಬ್ಯಾಟರ್ ಸೂರ್ಯಕುಮಾರ್ ಯಾದವ್(64 ರನ್, 83 ಎಸೆತ)ಹಾಗೂ ಕೆೆ.ಎಲ್.ರಾಹುಲ್(49, 48 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್ಇಂಡೀಸ್ ತಂಡಕ್ಕೆ ಎರಡನೇ ಏಕದಿನ ಪಂದ್ಯದ ಗೆಲುವಿಗೆ 238 ರನ್ ಗುರಿ ನೀಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿರುವ ಭಾರತವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ರಿಷಭ್ ಪಂತ್(18) ಜೊತೆಗೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(5) ಉತ್ತಮ ಆರಂಭ ಒದಗಿಸಲು ವಿಫರಾದರು.
ಮಾಜಿ ನಾಯಕ ವಿರಾಟ್ ಕೊಹ್ಲಿ(18) ಕೂಡ ದೊಡ್ಡ ಮೊತ್ತ ಗಳಿಸಲಿಲ್ಲ. ಭಾರತವು 43 ರನ್ಗೆ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ರಾಹುಲ್(49, 48 ಎಸೆತ, 4 ಬೌಂ.2 ಸಿ.)ಹಾಗೂ ಸೂರ್ಯಕುಮಾರ್ ಯಾದವ್(64 ರನ್, 83 ಎಸೆತ, 5 ಬೌಂಡರಿ)4ನೇ ವಿಕೆಟ್ಗೆ 90 ರನ್ ಸೇರಿಸಿ ತಂಡವನ್ನು ಆಧರಿಸಿದರು. ರಾಹುಲ್ ರನೌಟಾದಾಗ ಜೊತೆಯಾದ ಯಾದವ್ ಹಾಗೂ ಸುಂದರ್(24)ಐದನೇ ವಿಕೆಟ್ಗೆ 43 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ದೀಪಕ್ ಹೂಡ 29 ರನ್(25 ಎಸೆತ)ಗಳಿಸಿ 49ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ವಿಂಡೀಸ್ ಪರವಾಗಿ ಒಡಿಯನ್ ಸ್ಮಿತ್(2-29) ಹಾಗೂ ಅಲ್ಝಾರಿ ಜೋಸೆಫ್(2-36)ತಲಾ ಎರಡು ವಿಕೆಟ್ಗಳನ್ನು ಪಡೆದರು.







