ಉದ್ಯೋಗ ಸೃಷ್ಟಿಸುವ ಅಂಬಾನಿ, ಅದಾನಿ ಅವರನ್ನು ಪೂಜಿಸಬೇಕು: ಬಿಜೆಪಿ ಸಂಸದ ಅಲ್ಫೋನ್ಸ್

ಹೊಸದಿಲ್ಲಿ: ಅಂಬಾನಿ ಹಾಗೂ ಅದಾನಿಗಳಂತಹ ಕೈಗಾರಿಕೋದ್ಯಮಿಗಳು ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಕಾರಣ ಅವರನ್ನು "ಪೂಜಿಸಬೇಕು" ಎಂದು ಬಿಜೆಪಿ ಸಂಸದರೊಬ್ಬರು ಗುರುವಾರ ರಾಜ್ಯಸಭೆಗೆ ತಿಳಿಸಿದರು.
ಸರಕಾರವು "ಮುಖರಹಿತ" ಹಾಗೂ "ನಿರುದ್ಯೋಗ" ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದೆ ಹಾಗೂ ಸರಕಾರದ ನೀತಿಗಳು ಆದಾಯದ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ವಿರೋಧ ಪಕ್ಷಗಳು ವಾದಿಸಿವೆ.
“ನೀವು ನನ್ನನ್ನು ಬಂಡವಾಳಶಾಹಿಗಳ ಮುಖವಾಣಿ ಎಂದು ಆರೋಪಿಸಬಹುದು. ಈ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ ಜನರ ಹೆಸರನ್ನು ನಾನು ಹೇಳುವೆ. ಏಕೆಂದರೆ ನೀವು ಅವರ ಹೆಸರು ಹೇಳಿದ್ದೀರಿ. ರಿಲಯನ್ಸ್ ಇರಲಿ, ಅಂಬಾನಿ ಇರಲಿ, ಅದಾನಿ ಇರಲಿ, ಯಾರೇ ಇರಲಿ, ಅವರನ್ನು ಪೂಜಿಸಬೇಕು. ಏಕೆಂದರೆ ಅವರು ಉದ್ಯೋಗಗಳನ್ನು ಒದಗಿಸುತ್ತಾರೆ… ಅಂಬಾನಿ, ಅದಾನಿ, ಈ ದೇಶದಲ್ಲಿ ಹಣವನ್ನು ಹೂಡಿಕೆ ಮಾಡಿ, ಹಣ ಸಂಪಾದಿಸುವ ಜೊತೆಗೆ ಅವರು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಅವರನ್ನು ಗೌರವಿಸಬೇಕು’’ ಎಂದು ಬಿಜೆಪಿಯ ಕೆ.ಜೆ. ಆಲ್ಫೋನ್ಸ್ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಹೇಳಿದ್ದಾರೆ.
"ಜಾಗತಿಕ ಅಸಮಾನತೆಗಳು ಒಂದು ಸತ್ಯ" ಎಂದು ವಾದಿಸಿದ ಮಾಜಿ ಕೇಂದ್ರ ಸಚಿವ ಅಲ್ಫೋನ್ಸ್, ದೇಶದಲ್ಲಿ ಇಬ್ಬರ ಸಂಪತ್ತು ಹೆಚ್ಚಾಗಿದೆ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ ಎಂದರು.





