ಉಡುಪಿ, ಫೆ.11: ರಾಷ್ಟ್ರೀಯ ಗುಣನಿಯಂತ್ರಕ ಟಿ.ಎಸ್ ಕಂದಸ್ವಾಮಿ ಅವರು ಫೆಬ್ರವರಿ 15ರಿಂದ 20ರವರೆಗೆ ಜಿಲ್ಲೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗಳನ್ನು ಪರೀಕ್ಷಿಸಲಿದ್ದಾರೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಯೋಜನಾ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.