Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ14 Feb 2022 12:09 AM IST
share
ಓ ಮೆಣಸೇ...

ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗುವುದಿಲ್ಲ, ಬದಲಿಗೆ ಸೋರುವ ನೀರಿಗೆ ಕೊಡ ಹಿಡಿದು ತುಂಬಿಸಿಕೊಳ್ಳುತ್ತಾರೆ -ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ

ಅವರು ತುಂಬಿಸಿದ ಕೊಡದ ನೀರಿಗಾಗಿ ನೀವು ಬಕೆಟ್ ಹಿಡಿಯುತ್ತೀರಿ, ಅಷ್ಟೇ.

ಕೊಡಗಿನ ಜನರ ಕೋವಿಯ ಹಕ್ಕು ಕಸಿಯುವುದಿಲ್ಲ -ಪ್ರತಾಪ ಸಿಂಹ, ಸಂಸದ

ಶಿಕ್ಷಣದ ಹಕ್ಕಿಗಿಂತ ಕೋವಿಯ ಹಕ್ಕೇ ದೊಡ್ಡದು ಎನ್ನುವುದು ಬಿಜೆಪಿಯ ಸಿದ್ಧಾಂತವೂ ಆಗಿದೆ.

ಡಿಕೆಶಿ, ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನಿಮ್ಮ ಹುಚ್ಚು ಬಿಟ್ಟಿದೆಯಾ?

ಮುಂಬೈಯಲ್ಲಿ ನಡೆಯುವ ಬಹುತೇಕ ವಿಚ್ಛೇದನಗಳಿಗೆ ಟ್ರಾಫಿಕ್ ಕಾರಣ -ಅಮೃತಾ ಫಡ್ನಾವೀಸ್, ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನಾವೀಸ್ ಪತ್ನಿ
ತಮ್ಮ ಪತಿ ಶಿವಸೇನೆಯೊಂದಿಗೆ ಮಾಡಿಕೊಂಡ ವಿಚ್ಛೇದನೆಯ ಸಂದರ್ಭದಲ್ಲಿ ಆದ ಟ್ರಾಫಿಕ್ ಜಾಮ್ ಬಗ್ಗೆ ಹೇಳುತ್ತಿರಬೇಕು.

ಭಾರತವು ಪ್ರಧಾನಿಯನ್ನು ಹೊಂದಿಲ್ಲ, ರಾಜನನ್ನು ಹೊಂದಿದೆ -ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜಾನಪದ ಕತೆಯಲ್ಲಿ ಬರುವ ಬೆತ್ತಲೆ ರಾಜನೇ ಇರಬೇಕು.

ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ, ಟೂರಿಸ್ಟ್ ರಾಜಕಾರಣಿ -ಸಿ.ಟಿ.ರವಿ, ಶಾಸಕ
ಟೆರರಿಸ್ಟ್ ರಾಜಕಾರಣಿಗಳಿಗಿಂತ ವಾಸಿ.

7ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವುದೇ ಹುದ್ದೆಗಾಗಿ ಬದುಕಿಲ್ಲ -ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ
ಕಾಮೆಡಿ ಸರ್ಕಸ್‌ನಲ್ಲಿ ಇದನ್ನು ಹೇಳಿದ್ದರೆ ಜನ ಒಂದಿಷ್ಟು ನಕ್ಕು ಹಗುರಾಗುತ್ತಿದ್ದರು.

ಸೂಪರ್ ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ -ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ
ದೇಶ ಮಾರಾಟವಾಗುತ್ತಿರುವುದರ ವಿರುದ್ಧ ಸತ್ಯಾಗ್ರಹವಿಲ್ಲವೆ?

ಮನೆ ಸಂಸಾರದ ಬಂಧನದಲ್ಲಿ ಸಿಲುಕಿಸಿದರೆ, ಮಂದಿರ ಸಂಸಾರದ ಬಂಧನದಿಂದ ಬಿಡುಗಡೆ ಮಾಡುತ್ತದೆ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಪ್ರಾಮಾಣಿಕ ನ್ಯಾಯಾಧೀಶರು ಇದ್ದಿದ್ದರೆ ಇಷ್ಟು ಹೊತ್ತಿಗೆ ಜೈಲು ಬಂಧನದಲ್ಲಿರುತ್ತಿದ್ದಿರಿ.

ವಿಶ್ವಕಪ್ ಗೆದ್ದ ಭಾರತ ಕಿರಿಯ ಕ್ರಿಕೆಟಿಗರ ಅತ್ಯುನ್ನತ ಮಟ್ಟದ ಅದ್ಭುತ ಪ್ರದರ್ಶನ ಭಾರತದ ಕ್ರಿಕೆಟ್‌ನ ಭವಿಷ್ಯ ಸುರಕ್ಷಿತ ಮತ್ತು ಸಮರ್ಥರ ಕೈಯಲ್ಲಿದೆ ಎಂಬುದನ್ನು ತೋರಿಸುತ್ತದೆ -ನರೇಂದ್ರ ಮೋದಿ, ಪ್ರಧಾನಿ

ಭಾರತದ ಭವಿಷ್ಯ ಮಾತ್ರ ಅಸಮರ್ಥರ ಕೈಯಲ್ಲಿದೆ.

ಕಾಂಗ್ರೆಸನ್ನು ತೊರೆಯುವುದಿಲ್ಲ -ಸಿ.ಎಂ.ಇಬ್ರಾಹೀಂ, ಮಾಜಿ ಸಚಿವ
ನಿಮ್ಮ 40 ಕೋಟಿ ರೂ. ಸಾಲವನ್ನು ತೀರಿಸುವ ಭರವಸೆ ಕಾಂಗ್ರೆಸ್ ಮುಖಂಡರಿಂದ ಸಿಕ್ಕಿದೆಯೆ?

ಸಂವಿಧಾನದ ಆಶಯದಂತೆ ಅಸ್ಪಶ್ಯತೆ ತೊಡೆದುಹಾಕಲು ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗುವುದು -ಕೋಟ ಶ್ರೀನಿವಾಸ ಪುಜಾರಿ,ಸಚಿವ
ನಿಮ್ಮ ಕೈಯಲ್ಲಿ ಮುಖಂಡರು ಕೊಟ್ಟಿರುವುದು ಅಂಬೇಡ್ಕರ್ ಸಂವಿಧಾನವಲ್ಲ, ಮನು ಸಂವಿಧಾನ.

ಬೇಕಾದರೆ ಬಿಡಿಸಿ ನೋಡಿ. ಬ್ರಿಟಿಷರಿಂದ ಶುರುವಾದ ಒಡೆದು ಆಳುವ ನೀತಿಯನ್ನು ನಂತರದಲ್ಲಿ ಮುಂದುವರಿಸಿದ್ದು ಕಾಂಗ್ರೆಸ್ -ನರೇಂದ್ರ ಮೋದಿ , ಪ್ರಧಾನಿ

ಒಡೆದು ಆಳುವ ನೀತಿಯನ್ನು ಬ್ರಿಟಿಷರು ಕಲಿತದ್ದೇ ಆರೆಸ್ಸೆಸ್‌ನ ಪೂರ್ವಜರಿಂದ.

ನಮ್ಮ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬವಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
  ಹೌದು ನಿಮ್ಮ ಮನು ಸಂವಿಧಾನದಲ್ಲಿ ಮತ್ತೇನು ಇರಲು ಸಾಧ್ಯ?

ಹಿಜಾಬ್-ಕೇಸರಿ ಶಾಲು ವಿವಾದ ನೋಡಿದರೆ ರೈತ ಮಕ್ಕಳು ಹಳ್ಳಿ ಶಾಲೆಗಳಿಗೆ ಹಸಿರು ಶಾಲು ಹಾಕಿಕೊಂಡು ಹೋಗಿ ಎಂದು ಕರೆ ಕೊಡಬೇಕಾಗುತ್ತದೆ -ಕುಮಾರಸ್ವಾಮಿ, ಮಾಜಿ ಸಿಎಂ
ಮೊದಲು ರೈತರ ಮಕ್ಕಳು ಶಾಲೆಗೆ ಯಾಕೆ ಹೋಗುತ್ತಿಲ್ಲ ಎನ್ನುವುದಕ್ಕೆ ಪರಿಹಾರ ಕಂಡುಕೊಳ್ಳಿ.

ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ನೀಡುವ ಗರ್ಭ ಸಂಸ್ಕಾರ ಎಂಬ ಯೋಜನೆಯನ್ನು ಜಾರಿಗೆ ತರಲಾಗುವುದು -ಶಶಿಕಲಾ ಜೊಲ್ಲೆ, ಸಚಿವೆ
ಗರ್ಭದಲ್ಲೇ ಮಗುವಿಗೆ ಜಾತೀಯತೆಯ ಜನಿವಾರ ತೊಡಿಸುವುದೇ?

ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಮೇಲೆ ದೇಶದಲ್ಲಿ ಅಮೃತ ಕಾಲ ಅಲ್ಲ, ಬದಲಾಗಿ ರಾಹುಕಾಲದ ಅನುಭವವಾಗುತ್ತಿದೆ -ಕಪಿಲ್ ಸಿಬಲ್, ಸಂಸದ
ರಾಹುಲ್ ಕಾಲದ ಅನುಭವ ಆಗುವುದು ಎಂದು?

ಡಿಜಿಟಲ್ ರೂಪಾಯಿ ವ್ಯವಸ್ಥೆ ಜಾರಿಗೆ ಬಂದರೆ ಹಣಕಾಸು ವ್ಯವಸ್ಥೆ ನಿರ್ವಹಣೆಯ ಕಾರ್ಯದಕ್ಷತೆ ಹೆಚ್ಚುತ್ತದೆ -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಡಿಜಿಟಲ್ ಫೋನ್ ಇರುವವರಿಗಷ್ಟೇ ಹಣ ಹೊಂದುವ ಹಕ್ಕು ಕಾನೂನು ತಂದು ಬಿಡಿ.

ಅಫ್ಘಾನಿಸ್ತಾನದಲ್ಲಿ ಕಾಣೆಯಾಗಿರುವ ಮಹಿಳಾ ಹೋರಾಟಗಾರರ ಯೋಗಕ್ಷೇಮದ ಬಗ್ಗೆ ನನಗೆ ಹೆಚ್ಚು ಆತಂಕವಾಗುತ್ತದೆ -ಆಂಟೋನಿಯೊ ಗುಟೆರಸ್, ವಿಶ್ವಸಂಸ್ಥೆ ಮ.ಪ್ರ. ಕಾರ್ಯದರ್ಶಿ
ಅಫ್ಘಾನಿಸ್ತಾನದ ಹೊರಗಿರುವ ಹೋರಾಟಗಾರರ ಸ್ಥಿತಿಗತಿಯ ಬಗ್ಗೆ ಆತಂಕವಿಲ್ಲವೆ?

ಹಿಜಾಬ್ ವಿವಾದದ ಹಿಂದೆ ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳ ಕೈವಾಡವಿದೆ -ಎಂ.ಪಿ.ರೇಣುಕಾಚಾರ್ಯ, ಶಾಸಕ
ಸರಿ, ಕೇಸರಿ ಶಾಲಿಗೂ ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳಿಗೂ ಇರುವ ನಂಟು ತನಿಖೆಯಾಗಲಿ.

ಗೋಡ್ಸೆಯ ಭಾರತದಲ್ಲಿ ಅಪರಾಧಿಗಳು ಯಾವುದೇ ಭಯವಿಲ್ಲದೆ ಹೊರಗೆ ಓಡಾಡುತ್ತಿದ್ದಾರೆ, ಸತ್ಯ ಹೇಳುವವರು ಜೈಲಿನಲ್ಲಿದ್ದಾರೆ -ಮೆಹಬೂಬ ಮುಫ್ತಿ, ಪಿಡಿಪಿ ಮುಖ್ಯಸ್ಥೆ
ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಾಗ ಗೋಡ್ಸೆ ಯಾಕೆ ನೆನಪಾಗಲಿಲ್ಲ?

ಚುನಾವಣೆಯಲ್ಲಿ ನನ್ನ ಅಪ್ಪ ಜಯ ಸಾಧಿಸುವವರೆಗೂ ನಾನು ವಿವಾಹವಾಗುವುದಿಲ್ಲ -ರಬಿಯಾ ಸಿಧು, ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಪುತ್ರಿ
ನಿಮ್ಮ ವಿವಾಹ ಈ ಜನ್ಮದಲ್ಲಿ ಕಷ್ಟಕರವಾಗುವ ಸಾಧ್ಯತೆಯಿದೆ.

ಹಿಜಾಬ್ ವಿವಾದದ ಹಿಂದೆ ಅಂತರ್‌ರಾಷ್ಟ್ರೀಯ ಸಂಚಿದೆ. ಈ ಕುರಿತು ಎನ್‌ಐಎ ತನಿಖೆ ನಡೆಸಬೇಕು -ರಘುಪತಿ ಭಟ್, ಶಾಸಕ
ಪದ್ಮಪ್ರಿಯ ಅವರ ಆತ್ಮ ಕಿಸಕಿಸನೆ ನಕ್ಕಿತು.

share
ಪಿ.ಎ.ರೈ
ಪಿ.ಎ.ರೈ
Next Story
X